ಗೋಪಾಲಗಂಜ್ ಜಿಲ್ಲೆಯ ಒಂದೇ ಹಿಂದೂ ಕುಟುಂಬದ ೪ ಸದಸ್ಯರ ಮೇಲೆ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಸರಣಿ ಮುಂದುವರಿಕೆ!

ಗೋಪಾಲಗಂಜ್ (ಬಾಂಗ್ಲಾದೇಶ) – ಜಿಲ್ಲೆಯ ಕಾಶಿಯಾನಿಯಲ್ಲಿ ಅಲ್ಪಸಂಖ್ಯಾತ ಹಿಂದೂ ಕುಟುಂಬದ ೪ ಸದಸ್ಯರ ಮೇಲೆ ದಾಳಿ ನಡೆದಿರುವ ಬಗ್ಗೆ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಸ್ಥೆ ಮಾಹಿತಿ ನೀಡಿದೆ. ರಾಷ್ಟ್ರೀಯ ಚುನಾವಣೆಯಲ್ಲಿ ಮತದಾನ ಮಾಡುವ ವಿಷಯವಾಗಿ ನೆರೆಹೊರೆಯ ಮುಸ್ಲಿಂ ಕುಟುಂಬದೊಂದಿಗೆ ನಡೆದಿದ್ದ ಹಳೆಯ ವಿವಾದವೇ ಈ ದಾಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ನೆರೆಹೊರೆಯಲ್ಲಿ ವಾಸಿಸುವ ಅಜಿಬರ್ ಮೊಲ್ಲಾ ಎಂಬ ಯೂನಿಯನ್ ಪರಿಷತ್ ಸದಸ್ಯನು ತನ್ನ ಸಹಚರರೊಂದಿಗೆ ಸೇರಿಕೊಂಡು, ದೊಣ್ಣೆಗಳು ಮತ್ತು ಸ್ಥಳೀಯ ಮಾರಕಾಸ್ತ್ರಗಳಿಂದ ಹಿಂದೂ ಕುಟುಂಬದ ಮೇಲೆ ದಾಳಿ ಮಾಡಿದ್ದಾನೆ.

ಈ ಘಟನೆಯು ಗೋಪಾಲಗಂಜ್ ಜಿಲ್ಲೆಯ ಕಾಶಿಯಾನಿ ಉಪಜಿಲ್ಲೆಯ ಬೆಥುರಿ ಯೂನಿಯನ್ ವ್ಯಾಪ್ತಿಯ ರಾಮಡಿಯಾ ಈಸ್ಟ್ ಪಾರಾ ಗ್ರಾಮದಲ್ಲಿ ಜೂನ್ ೨೫ ರ ಮಧ್ಯಾಹ್ನ ನಡೆದಿದೆ. ಗಾಯಗೊಂಡವರಲ್ಲಿ ಕ್ಷಿತೀಶ್ ಬಿಸ್ವಾಸ್ (ವಯಸ್ಸು ೬೫ ವರ್ಷ), ಅವರ ಪತ್ನಿ ತುಳಸಿ ಬಿಸ್ವಾಸ್ (ವಯಸ್ಸು ೫೦ ವರ್ಷ), ಮಗಳು ಇತಿ ರಾಣಿ ಬಿಸ್ವಾಸ್ (ವಯಸ್ಸು ೩೦ ವರ್ಷ), ಮತ್ತು ಅವರ ಮೊಮ್ಮಗ ದೇವ್‌ರಾಜ್ ಬಿಸ್ವಾಸ್ (ವಯಸ್ಸು ೧೫ ವರ್ಷ) ಸೇರಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ದಾಖಲಿಸಲಾಗಿದೆ.