CNN’s Anti Hindu Broadcast : ಪ್ರಧಾನಮಂತ್ರಿ ಮೋದಿ ಇವರ ಭಾಜಪವು ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸಿದೆ !

  • ಅಮೇರಿಕಾ ಪ್ರಸಾರ ಮಾಧ್ಯಮದಲ್ಲಿ ‘ಸಿ.ಎನ್.ಎನ್.ನ ಹಿಂದುದ್ವೇಷಿ ಲೇಖನ !

  • ಮೋದಿ ಇವರ ಚುನಾವಣಾ ಕ್ಷೇತ್ರದಲ್ಲಿ (ವಾರಣಾಸಿಯಲ್ಲಿ) ಹಿಂದೂ ರಾಷ್ಟ್ರವಾದದ ಉದಯದಿಂದ ಅಲ್ಲಿಯ ಮುಸಲ್ಮಾನರಲ್ಲಿ ಭಯ ಹುಟ್ಟಿದೆ ಎಂದು ಲೇಖನದ ಮೂಲಕ ಆರೋಪ !

ನವ ದೆಹಲಿ – ಭಾರತದಲ್ಲಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಭಾರತೀಯ ಮತದಾರರಿಗೆ ಪ್ರಧಾನಮಂತ್ರಿ ಮೋದಿ ಇವರ ಸರಕಾರವನ್ನು ವಿರೋಧಿಸುವ ಪ್ರಯತ್ನದಲ್ಲಿ ತೊಡಗಿದೆ. ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳಲ್ಲಿ ನಿರಂತರವಾಗಿ ಇಂತಹ ಲೇಖನಗಳು ಪ್ರಸಾರವಾಗುತ್ತಿವೆ, ಅದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಹಿಂದೂ ಕಟ್ಟರವಾದಿ ಆಗಿದ್ದಾರೆ ಮತ್ತು ಅವರ ಮೂರನೇಯ ಕಾರ್ಯಕಾಲದಲ್ಲಿ ಭಾರತ ‘ಹಿಂದೂ ರಾಷ್ಟ್ರ’ವಾಗುವುದು, ಎಂದು ದಾವೆ ಮಾಡಲಾಗುತ್ತಿದೆ. ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಪ್ರಚಾರ ಮಾಡುವುದಕ್ಕಾಗಿ ಈ ಪ್ರಸಾರ ಮಾಧ್ಯಮಗಳು ನಿರಂತರವಾಗಿ ಸುಳ್ಳು ಹೇಳುತ್ತಿವೆ. ಅಮೇರಿಕಾದಲ್ಲಿನ ಪ್ರಸಾರ ಮಾಧ್ಯಮ ‘ಸಿ.ಎನ್.ಎನ್.’ ಪ್ರಧಾನಮಂತ್ರಿ ಮೋದಿ ಇವರ ಭಾಜಪದಿಂದ ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತನೆ ಮಾಡಿದೆ ಎಂದು ಆರೋಪಿಸುವ ಒಂದು ಲೇಖನ ಪ್ರಕಾಶನಗೊಳಿಸಿದೆ.

ಮೇ ೧, ೨೦೨೪ ರಂದು Rising Hindu Nationalism Leaves Muslim fearful in lndias holy city (ಹಿಂದೂ ರಾಷ್ಟ್ರವಾದದ ಉದಯದಿಂದ ಭಾರತದ ಪವಿತ್ರ ನಗರದಲ್ಲಿನ (ವಾರಾಣಸಿಯಲ್ಲಿನ) ಮುಸಲ್ಮಾನರಲ್ಲಿ ಭಯ !) ಈ ಶೀರ್ಷಿಕೆಯ ಅಡಿಯಲ್ಲಿ ಈ ಲೇಖನ ಪ್ರಕಾಶಿತಗೊಂಡಿದೆ. ಈ ಲೇಖನದ ಮೂಲಕ ವಾರಾಣಸಿಯಲ್ಲಿನ ಮುಸಲ್ಮಾನರಿಗೆ ಪ್ರಧಾನಮಂತ್ರಿ ಮೋದಿ ಇಲ್ಲಿಂದ ಮೂರನೆಯ ಬಾರಿ ಗೆಲ್ಲುವುದರ ಕುರಿತು ಭಯ ಅನಿಸುತ್ತಿದೆ ಎಂದು ಶೀರ್ಷಿಕೆಯಿಂದ ಕಂಡು ಬಂದಿದೆ.

‘ಮುಸಲ್ಮಾನರನ್ನು ಗುರಿ ಮಾಡುವುದಕ್ಕಾಗಿ ಹಿಂದೂಗಳನ್ನು ಉನ್ನತ ಹುದ್ದೆಗಳಲ್ಲಿ ಕೂಡಿಸಲಾಗುತ್ತಿದೆಯಂತೆ !’

ಐಶ್ವರ್ಯ ಎಸ್. ಐಯ್ಯರ್, ರಿಯಾ ಮೊಗಲ್, ಕುನಾಲ್ ಸೆಹಗಲ್ ಮತ್ತು ವಿಲ್ ರಿಪ್ಲೈ ಇವರು ಬರೆದಿರುವ ಈ ಲೇಖನ, ‘ಪ್ರಧಾನಮಂತ್ರಿ ಇವರನ್ನು ಭಾರತದಲ್ಲಿ ಸರಕಾರಿ ಸಂಸ್ಥೆಯಲ್ಲಿನ ಉನ್ನತ ಸ್ಥಾನದಲ್ಲಿ ಹಿಂದೂ ರಾಷ್ಟ್ರವಾದಿ ಯಾವ ರೀತಿ ನೇಮಿಸುತ್ತಿದೆ’, ಈ ಅಂಶವನ್ನು ಆದರಿಸಿದೆ. ಇದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಉಲ್ಲೇಖ ಸ್ಪಷ್ಟವಾಗಿ ಮಾಡದಿದ್ದರೂ, ಮುಸಲ್ಮಾನರನ್ನು ಗುರಿ ಮಾಡುವುದಕ್ಕಾಗಿ ಹಿಂದೂಗಳನ್ನು ಉನ್ನತ ಹುದ್ದೆಗಳಲ್ಲಿ ನೇಮಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

‘ಜ್ಞಾನವಾಪಿಯಲ್ಲಿನ ಹಿಂದುಗಳ ದಾವೆ ಸಾಕ್ಷಿಗಳ ಆಧಾರಿತವಾಗಿ ಇಲ್ಲವಂತೆ !’

ಜ್ಞಾನವಾಪಿಯಲ್ಲಿನ ಹಿಂದೂಗಳ ದಾವೆ ಜನರ ವಿಶ್ವಾಸದ ಮೇಲೆ ಆಧಾರಿತವಾಗಿದೆ ಮತ್ತು ವಾಸ್ತವದಲ್ಲಿ ಸಾಕ್ಷಿಗಳ ಆಧಾರದಲ್ಲಿ ಇಲ್ಲ, ಎಂದು ಈ ಲೇಖನದಲ್ಲಿ ಹೇಳಿದ್ದಾರೆ. ಇದರಲ್ಲಿ ಓರ್ವ ಮುಸಲ್ಮಾನನ ಹೇಳಿಕೆ ನೀಡಲಾಗಿದೆ. ಆತ, ಈಗ ಅವನಿಗೆ ನ್ಯಾಯ ವ್ಯವಸ್ಥೆ ಮತ್ತು ಪೊಲೀಸರ ಮೇಲೆ ವಿಶ್ವಾಸ ಉಳಿಲಿಲ್ಲ ಎಂದು ಹೇಳಿದ್ದಾನೆ.

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಬಗ್ಗೆ ಲೇಖನದಲ್ಲಿ, ಶ್ರೀರಾಮಮಂದಿರ ನಿರ್ಮಾಣದಿಂದ ದೇಶದಲ್ಲಿನ ಜಾತ್ಯತೀತತೆಗೆ ಹಾನಿ ಉಂಟಾಗಿದೆ ಎಂದು ಹೇಳಿದೆ.

ಕಲಂ ೩೭೦ ಮತ್ತು ಪೌರತ್ವ ತಿದ್ದುಪಡಿ ಕಾನೂನುಗಳ ಉಲ್ಲೇಖ !

ಸಿ.ಎನ್.ಎನ್.ನ ಲೇಖನದಲ್ಲಿ ಜಮ್ಮು ಕಾಶ್ಮೀರಿನಿಂದ ಕಲಂ ೩೭೦ ತೆರವುಗೊಳಿಸಿದರ ಬಗ್ಗೆ ಕೂಡ ಚರ್ಚಿಸಲಾಗಿದೆ. ಮೋದಿ ಸರಕಾರವು ಭಾರತದಲ್ಲಿನ ಏಕೈಕ ಮುಸಲ್ಮಾನ ಬಹುಸಂಖ್ಯಾತ ರಾಜ್ಯದ ಸ್ವಾತಂತ್ರ್ಯ ಕಸೆದುಕೊಂಡಿದೆ, ಎಂದು ಇದರಲ್ಲಿ ದಾವೆ ಮಾಡಿದೆ; ಆದರೆ ಅದೇ ಸಮಯದಲ್ಲಿ ಅಲ್ಲಿನ ಜಿಹಾದಿ ಭಯೋತ್ಪಾದನೆ ಹಾಗೂ ಸರಕಾರದಿಂದ ಅಲ್ಲಿನ ವಿಕಾಸ ಇದರ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಕೂಡ ಇದರಲ್ಲಿ ಉಲ್ಲೇಖ ಇದೆ. ಈ ಕಾನೂನು ಮುಸಲ್ಮಾನ ವಿರೋಧಿ ಆಗಿದೆ ಎಂದು ತೋರಿಸುವ ಪ್ರಯತ್ನ ನಡೆದಿದೆ. ‘ಈ ಕಾನೂನು ಮುಸಲ್ಮಾನರಿಗೆ ಪೌರತ್ವದಿಂದ ದೂರ ಇಡುತ್ತದೆ’, ಎಂದು ಹೇಳಿದೆ.

೨೦೨೦ ರಲ್ಲಿ ದೆಹಲಿಯಲ್ಲಿ ಹಿಂದೂ ವಿರೋಧಿ ಗಲಭೆಯ ಉಲ್ಲೇಖ ಕೂಡ ಇದರಲ್ಲಿ ಇದೆ; ಆದರೆ ಅದನ್ನು ಮುಸಲ್ಮಾನ ವಿರೋಧಿ ಗಲಭೆ ಎಂದು ಹೇಳಿದ್ದಾರೆ. ಇದರಲ್ಲಿ ಹಿಂದುಗಳಿಂದ ನಾಸಿರ್ ಅಲಿ ಇವನ ಕಣ್ಣಿಗೆ ಗುಂಡು ಹಾರಿಸಿರುವ ಆರೋಪ ಹೊರಿಸಲಾಗಿದೆ. ಅದೇ ಸಮಯದಲ್ಲಿ ಗುಪ್ತಚರ ಅಧಿಕಾರಿ ಅಂಕಿತ ಶರ್ಮಾ ಇವರ ಹತ್ಯೆಯ ಬಗ್ಗೆ ಈ ಲೇಖನದಲ್ಲಿ ಯಾವುದೇ ಉಲ್ಲೇಖವಿಲ್ಲ.