ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ರಾಷ್ಟ್ರವಿರೋಧಿ ವ್ಯಕ್ತಿಸ್ವಾತಂತ್ರ್ಯವಾದಿಗಳು !

‘ವ್ಯಕ್ತಿಗಿಂತ ಸಮಾಜವು ಮತ್ತು ಸಮಾಜಕ್ಕಿಂತ ರಾಷ್ಟ್ರವು ಮಹತ್ವದ್ದಾಗಿದೆ ಎಂಬುದನ್ನು ಅರಿಯದಿರುವ ವ್ಯಕ್ತಿಸ್ವಾತಂತ್ರ್ಯವಾದಿಗಳು ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾರೆ !’

ಅಹಂಕಾರಿ ಬುದ್ಧಿಜೀವಿಗಳು !

‘ಬುದ್ಧಿಜೀವಿಗಳಿಗೆ ‘ನನಗೆ ಎಲ್ಲವೂ ತಿಳಿಯುತ್ತದೆ’ ಎಂಬ ಅಹಂಕಾರವಿರುತ್ತದೆ. ಹೀಗಾಗಿ ಏನನ್ನಾದರೂ ತಿಳಿದುಕೊಳ್ಳಬೇಕೆಂಬ ಜಿಜ್ಞಾಸೆ ಇಲ್ಲದ ಕಾರಣ ಬುದ್ಧಿಶಕ್ತಿಗೆ ಮೀರಿರುವ ಅಧ್ಯಾತ್ಮಶಾಸ್ತ್ರವು ಅವರಿಗೆ ಸ್ವಲ್ಪವೂ ತಿಳಿದಿರುವುದಿಲ್ಲ; ಹೀಗಿದ್ದರೂ ಅವರು ಅಧ್ಯಾತ್ಮದಲ್ಲಿ ಅಧಿಕಾರಿಗಳಾದ ಸಂತರನ್ನು ಟೀಕಿಸುತ್ತಾರೆ !’

ಸೃಷ್ಟಿಕರ್ತ ಮತ್ತು ಎಲ್ಲವನ್ನೂ ಮಾಡಿಸುವವನಾದ ಭಗವಂತನ ಅಸ್ತಿತ್ವವನ್ನೇ ನಿರಾಕರಿಸುವ ಬುದ್ಧಿಜೀವಿಗಳು !

‘ಮಾಡುವವನಿಂದ ನಿರ್ಮಿಸಲ್ಪಟ್ಟ ವಸ್ತುವು ಎಂದಿಗೂ ಅವನಿಗಿಂತ ಶ್ರೇಷ್ಠವಾಗಿರಲು ಸಾಧ್ಯವಿಲ್ಲ, ಉದಾ. ಒಬ್ಬ ಬಡಗಿಯು ತಯಾರಿಸಿರುವ ಕುರ್ಚಿಯು ಎಂದಿಗೂ ಬಡಗಿಗಿಂತ ಶ್ರೇಷ್ಠವಾಗಲಾರದು. ಹೀಗಿರುವಾಗಲೂ ಭಗವಂತನಿಂದ ನಿರ್ಮಿಸಲ್ಪಟ್ಟಿರುವ ಕೆಲವು ಮನುಷ್ಯರು ಸೃಷ್ಟಿಕರ್ತ ಮತ್ತು ಎಲ್ಲವನ್ನೂ ಮಾಡಿಸುವವನಾದ ಭಗವಂತನನ್ನೇ ತುಚ್ಛವೆಂದುಕೊಳ್ಳುತ್ತಾರೆ.’

ಹಾಸ್ಯಾಸ್ಪದ ಬುದ್ಧಿಜೀವಿಗಳು !

‘ಸೂಕ್ಷ್ಮದೃಷ್ಟಿ’ಯನ್ನು ನಂಬುವುದು ಅಂಧಶ್ರದ್ಧೆ ಎಂದು ಬುದ್ಧಿಜೀವಿಗಳು ಹೇಳುವುದು; ಅಂಧ ವ್ಯಕ್ತಿಯೊಬ್ಬ ‘ವೀಕ್ಷಣೆ, ದೃಷ್ಟಿ ಇದೇನೂ ಇರುವುದಿಲ್ಲ, ಅದೆಲ್ಲ ಅಂಧ’ ಎಂದು ಹೇಳಿದ ಹಾಗೆ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ