ಇಡೀ ದೇಶದ ಪಠ್ಯಕ್ರಮವನ್ನು ಹೀಗೆ ಬದಲಿಸಿ !

ರಾಜಸ್ಥಾನದ ಶಿಕ್ಷಣ ಸಚಿವ ಮದನ್‌ ದಿಲಾವರ್‌

೧. ಇಡೀ ದೇಶದ ಪಠ್ಯಕ್ರಮವನ್ನು ಹೀಗೆ ಬದಲಿಸಿ !

ಅಕ್ಬರ್‌ ಆಕ್ರಮಣಕಾರಿ ಮತ್ತು ಹಿಂಸಾಚಾರಿ ಆಗಿದ್ದನು. ಅಂತಹ ಅಕ್ಬರನನ್ನು ಶ್ರೇಷ್ಠ ಎಂದು ಕರೆಯುವುದು ಅಸಂಬದ್ಧ. ಅಂತಹ ವಿಷಯಗಳನ್ನು ಪಠ್ಯಕ್ರಮದಿಂದ ತೆಗೆದು ಹಾಕಲಾಗುವುದು ಎಂದು ರಾಜಸ್ಥಾನದ ಶಿಕ್ಷಣ ಸಚಿವ ಮದನ್‌ ದಿಲಾವರ್‌ ತಿಳಿಸಿದ್ದಾರೆ.

೨ ಎರಡನೇ ಬಾಂಗ್ಲಾದೇಶವಾಗಿರುವ ಬಂಗಾಳ !

ಹೌರಾ (ಬಂಗಾಳ) ಜಿಲ್ಲೆಯ ಬ್ರಾಂಕಾದಲ್ಲಿ ೫ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.  ಭಾಜಪ ಮತ್ತು ವಿಪಕ್ಷದ ನಾಯಕ ಸುವೇಂದು ಅಧಿಕಾರಿ ಇವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಧ್ವಂಸ ಗೊಂಡ ದೇವಾಲಯಗಳ ಚಿತ್ರ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

೩. ಭಾರತದ ಶತ್ರು ಮತ್ತು ಪಾಕಿಸ್ತಾನದ ಮಿತ್ರನಾಗಿರುವ ಕಾಂಗ್ರೆಸ್‌ ಪಕ್ಷ !

”ಭಾಜಪಗೆ ಪಾಕಿಸ್ತಾನ ಶತ್ರು ದೇಶವಾಗಿದೆ;  ಆದರೆ ಪಾಕಿಸ್ತಾನ ನಮಗೆ ಶತ್ರು ರಾಷ್ಟ್ರವಲ್ಲ. ಇದು ನಮಗೆ ನೆರೆಯ ದೇಶ ಮಾತ್ರ’ ಎಂದು ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ವಿಧಾನಪರಿಷತ್‌ನಲ್ಲಿ ಹೇಳಿದ್ದಾರೆ.

೪. ಪಂಜಾಬನಲ್ಲೂ ಹಿಂದೂ ದೇವಾಲಯಗಳು ಅಸುರಕ್ಷಿತ !

ಲುಧಿಯಾನ (ಪಂಜಾಬ್) ದಲ್ಲಿರುವ ಶಿವ ದೇವಾಲಯದಲ್ಲಿ ಶಿವಲಿಂಗ ಸೇರಿದಂತೆ ಒಟ್ಟು ೧೪ ವಿಗ್ರಹಗಳನ್ನು ಅಜ್ಞಾತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಶಾಂತಿಯನ್ನು ಕಾಪಾಡುವಂತೆ ಆಡಳಿತವು ಹಿಂದೂಗಳಿಗೆ ಮನವಿ ಮಾಡಿದೆ. ಹಿಂದೂ ಸಂಘಟನೆಗಳು ಕ್ರಮ ಕೈಗೊಳ್ಳಲು ಆಡಳಿತಕ್ಕೆ ೭೨ ಗಂಟೆಗಳ ಕಾಲಾವಕಾಶ ನೀಡಿವೆ.

೫. ಕಾಂಗ್ರೆಸ್‌ ರಾಜ್ಯದಲ್ಲಿಯೇ ಬಾಂಬ್‌ ಸ್ಫೋಟಗಳು ಹೇಗೆ ನಡೆಯುತ್ತವೆ ?

ಮಾರ್ಚ್ ೧ ರಂದು ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ೯ ಜನರು ಗಾಯ ಗೊಂಡಿದ್ದರು. ಇದು ಬಾಂಬ್‌ ಸ್ಫೋಟ ಎಂದು ರಾಜ್ಯದ ಕಾಂಗ್ರೆಸ್‌ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.