Bengaluru Blast : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: 9 ಮಂದಿಗೆ ಗಾಯ !

ಬೆಂಗಳೂರು – ಇಲ್ಲಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಸಂಭವಿಸಿದ ಸ್ಫೋಟದಲ್ಲಿ 9 ಜನರು ಗಾಯಗೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ; ಆದರೆ, ಇದೊಂದು ಬಾಂಬ್ ಸ್ಫೋಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ತಿಳಿಸಿದ್ದಾರೆ.

(ಸೌಜನ್ಯ – Asianet Suvarna News)

ಈ ಬಗ್ಗೆ ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ‘ಎಕ್ಸ್‌’ನಿಂದ, ಸಿಲಿಂಡರ್‌ನಿಂದ ಸ್ಫೋಟ ಸಂಭವಿಸಿಲ್ಲ, ಇದು ಬಾಂಬ್ ಸ್ಫೋಟ ಎಂದು ಆರೋಪಿಸಿದ್ದಾರೆ. ಅವರು, ಕೆಫೆ ಮಾಲೀಕ ನಾಗರಾಜ್ ಜತೆ ಮಾತನಾಡಿದೆ. ‘ಕೆಫೆಗೆ ಯಾರೋ ಬ್ಯಾಗ್ ತಂದಿದ್ದಾರೆ ಎಂದರು. ಇದರಿಂದ ಸ್ಫೋಟ ಆಗಿದೆ ಎಂಬುದು ಸ್ಪಷ್ಟವಾಗಿದೆ.