‘ಅಯೋಧ್ಯೆಯಲ್ಲಿ ಶ್ರೀರಾಮಮಂದಿರವಾಗಿ ‘ಶ್ರೀರಾಮಮೂರ್ತಿ’ಯ ಪ್ರಾಣಪ್ರತಿಷ್ಠಾಪನೆ’, ಆಗುವುದು ಈಶ್ವರೀ ಆಯೋಜನೆ !

‘ಶ್ರೀರಾಮಮೂರ್ತಿ’ಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಸಪ್ತರ್ಷಿಗಳ ಸಂದೇಶ !

‘ವಿಶ್ವದಲ್ಲಾಗುವ ಎಲ್ಲವೂ ಈಶ್ವರೇಚ್ಛೆಯಂತೆ ನಡೆಯುತ್ತದೆಯೇ ಹೊರತು ಮನುಷ್ಯನ ಇಚ್ಛೆಯಂತಲ್ಲ. ಕೊನೆಗೆ ಭಗವಂತನ ಮನಸ್ಸಿನಲ್ಲಿ ರುವುದೇ ಆಗುತ್ತದೆ. ಈಗ ನಾವು ‘ಸನಾತನ ಧರ್ಮರಾಜ್ಯ’ದ ದಿಕ್ಕಿ ನತ್ತ ಸಾಗುತ್ತಿದ್ದೇವೆ, ಅದನ್ನು ‘ಹಿಂದೂ ರಾಷ್ಟ್ರ’ ಎನ್ನಬಹುದು. ಈ ಅವಧಿಯಲ್ಲಿ ‘ಅಯೋಧ್ಯೆ ಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಿ ‘ಶ್ರೀರಾಮ ಮೂರ್ತಿ’ಯ ಪ್ರಾಣಪ್ರತಿಷ್ಠಾಪನೆ ಆಗುವುದು’, ಇದು ಈಶ್ವರನ ಆಯೋಜನೆÉಯಾಗಿದೆ. ಈಗ ಶ್ರೀರಾಮಜನ್ಮಭೂಮಿಯ ವಿಷಯದಲ್ಲಿ ಪೂರ್ಣವಾಗಿದ್ದರೂ ಇನ್ನು ಶ್ರೀಕೃಷ್ಣಜನ್ಮ ಭೂಮಿಯ ವಿಷಯ ಅಪೂರ್ಣವಾಗಿದೆ.

ಕಾಲಮಹಿಮೆಗನುಸಾರ ಈಗ ಶ್ರೀಕೃಷ್ಣಜನ್ಮ ಭೂಮಿಯ ವಿಷಯವನ್ನು ಪೂರ್ಣಗೊಳಿಸಬೇಕಾದ ಸಮಯ ಹತ್ತಿರ ಬಂದಿದೆ. ಶ್ರೀರಾಮ ಮತ್ತು ಶ್ರೀಕೃಷ್ಣನ ಆಶೀರ್ವಾದದಿಂದಲೇ ಸನಾತನ ಧರ್ಮರಾಜ್ಯದ ಸ್ಥಾಪನೆ ಆಗಲಿಕ್ಕಿದೆ. ಸನಾತನ ಧರ್ಮದ ಪುನರ್‌ ಸ್ಥಾಪನೆಯಿಂದ ಭಾರತಭೂಮಿಗೆ ನವಶಕ್ತಿ ಸಿಗಲಿದೆ.’

– ಸಪ್ತರ್ಷಿಗಳು (ಪೂ. ಡಾ. ಓಂ ಉಲಗನಾಥನ್‌ ಇವರ ಮಾಧ್ಯಮದಿಂದ, ೭.೧.೨೦೨೪)