ಸಾಧಕರು ಮತ್ತು ಕಾರ್ಯಕರ್ತರಿಗೆ ಸೂಚನೆ

‘ಹಿಂದೂ ರಾಷ್ಟ್ರ ಸ್ಥಾಪನೆ’ಗಾಗಿ ಧರ್ಮಜಾಗೃತಿಯ ಉಪಕ್ರಮಗಳನ್ನು ಹಮ್ಮಿಕೊಳ್ಳುವಾಗ ವಿವಿಧ ಅಡಚಣೆಗಳು ಬರುತ್ತವೆ, ಉದಾ. ಪೊಲೀಸರ ಅನುಮತಿ ಸಿಗದಿರುವುದು, ಧರ್ಮದ್ರೋಹಿಗಳಿಂದ ಅಡಚಣೆ, ಸಾಧಕರಿಗಾಗುವ ತೊಂದರೆಗಳು ಇತ್ಯಾದಿ. ಈ ಅಡಚಣೆಗಳನ್ನು ಜಯಿಸಲು ಸ್ಥೂಲದ ಪ್ರಯತ್ನಗಳೊಂದಿಗೆ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನೂ ಮಾಡಬೇಕು. ಪ್ರಾಥಮಿಕ ಹಂತದಲ್ಲಿ ಯಾವುದೇ ಉಪಕ್ರಮದಲ್ಲಿ ಅಡಚಣೆ ಬರುತ್ತಿದ್ದಲ್ಲಿ ತಕ್ಷಣ ಅದಕ್ಕೆ ಸಂಬಂಧಿತ ಪ್ರಸಾರ ಸಾಹಿತ್ಯಗಳ ಮೇಲೆ (ಉದಾ. ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಗಳಲ್ಲಿ ಅಡಚಣೆಗಳು ಬರುತ್ತಿದ್ದರೆ ಅವುಗಳ ಭಿತ್ತಿಪತ್ರಗಳ ಮೇಲೆ) ತೆಂಗಿನಕಾಯಿ ನಿವಾಳಿಸಿ ಒಡೆಯಬೇಕು. ಈ ರೀತಿ ತೆಂಗಿನಕಾಯಿ ಅಡ್ಡ ಒಡೆಯುವ ತನಕ ತೆಂಗಿನಕಾಯಿಯನ್ನು ನಿವಾಳಿಸಿ ಒಡೆಯುತ್ತಲೇ ಇರಬೇಕು.
ಸದ್ಯ ಕೆಲವೆಡೆಗಳಲ್ಲಿ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಗಳಲ್ಲಿ ಬರುವ ಅಡಚಣೆಗಳನ್ನು ನಿವಾರಿಸಲು ಸಾಧಕರು ಈ ಆಧ್ಯಾತ್ಮಿಕ ಉಪಾಯ ಮಾಡುತ್ತಿದ್ದಾರೆ. ಅದರಿಂದ ಅವರಿಗೆ ಲಾಭವೂ ಆಗುತ್ತಿದೆ. ಈ ರೀತಿ ಹಿಂದೂ ಅಧಿವೇಶನ, ಹಿಂದೂ ಸಂಘಟನಾ ಮೇಳ, ರಾಷ್ಟ್ರ ಮತ್ತು ಧರ್ಮ ಜಾಗೃತಿಪರ ಚಿತ್ರ-ಪ್ರದರ್ಶನಗಳು, ದೊಡ್ಡ ಗ್ರಂಥ ಪ್ರದರ್ಶನಗಳು ಇಂತಹ ಸಮಷ್ಟಿಗೆ ಸಂಬಂಧಿಸಿದ ಉಪಕ್ರಮಗಳ ಆರಂಭದಲ್ಲಿ ಆಧ್ಯಾತ್ಮಿಕ ತೊಂದರೆ ದೂರವಾಗಲು ತೆಂಗಿನಕಾಯಿ ಒಡೆಯಬೇಕು.
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !