ಅಧ್ಯಾತ್ಮ, ಸಾಧನೆ ಅಥವಾ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವ ಆಸಕ್ತಿ ಇರುವವರನ್ನೇ ಸನಾತನದ ಆಶ್ರಮ ವೀಕ್ಷಣೆಗೆ ಕಳುಹಿಸಿ !

ಸನಾತನ ಆಶ್ರಮ, ಗೋವಾ

ಇತ್ತೀಚಿಗೆ ಬಹಳಷ್ಟು ಸಾಧಕರು ಅವರ ಪರಿಚಿತರಿಗೆ ನೀವು ಆ ಊರಿಗೆ ಹೋಗುತ್ತಿದ್ದೀರಿ, ಅಲ್ಲಿ ನಮ್ಮ ಆಶ್ರಮ ಇದೆ, ಅದನ್ನು ಕೂಡ ನೋಡಿ ಬನ್ನಿ, ಹೀಗೆ ಸಲಹೆ ನೀಡುತ್ತಾರೆ. ಅದರಲ್ಲಿನ ಕೆಲವು ಜನರಿಗೆ ಅಧ್ಯಾತ್ಮ, ಸಾಧನೆ ಮತ್ತು ಧರ್ಮದ ಬಗ್ಗೆ ಯಾವುದೇ ರೀತಿಯ ಆಸಕ್ತಿ ಇರುವುದಿಲ್ಲ. ಇಂತಹ ವ್ಯಕ್ತಿಗಳು ಕೇವಲ ಒಂದು ಪ್ರವಾಸಿತಾಣ ಎಂದು ಆಶ್ರಮ ನೋಡುವ ಉದ್ದೇಶದಿಂದ ಬರುತ್ತಾರೆ. ಆದ್ದರಿಂದ ಅವರಿಗೆ ಆಶ್ರಮದರ್ಶನದ ನಿಜವಾದ ಅರ್ಥದಲ್ಲಿ ಯಾವುದೇ ಲಾಭವಾಗುವುದಿಲ್ಲ, ಅದರ ಜೊತೆಗೆ ಅವರು ಆಶ್ರಮಕ್ಕೆ ಬಂದ ನಂತರ ಅವರ ಆತಿಥ್ಯ ಮಾಡುವ ಸಾಧಕರ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಸಾಧಕರಿಗೆ ಸನಾತನದ ಆಶ್ರಮ ನೋಡುವುದಕ್ಕಾಗಿ ಅಧ್ಯಾತ್ಮ, ಸಾಧನೆ, ಮತ್ತು ಧರ್ಮ ಇದಕ್ಕಾಗಿ ಕಾರ್ಯ ಮಾಡುವಂತಹ ವಿಷಯದ ಸಂದರ್ಭದಲ್ಲಿ ಜಿಜ್ಞಾಸೆ ಅಥವಾ ತಳಮಳ ಇರುವವರನ್ನೇ ಕಳುಹಿಸಿ.