ಹಿಂದೂ ಸ್ತ್ರೀಯರೇ, ಮಕರ ಸಂಕ್ರಾಂತಿಯಿಂದ ರಥಸಪ್ತಮಿಯ ವರೆಗೆ ನಡೆಯುವ ಅರಿಶಿಣ-ಕುಂಕುಮ ಸಮಾರಂಭಗಳಲ್ಲಿ ಸನಾತನದ ಗ್ರಂಥಗಳು, ಕಿರುಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಬಾಗಿನವೆಂದು ನೀಡಿ !

೧೫.೧.೨೦೨೪ ರಂದು ಮಕರಸಂಕ್ರಾಂತಿ ಮತ್ತು ೧೬.೨.೨೦೨೪ ರಂದು ರಥಸಪ್ತಮಿಯಿದೆ. ಈ ಅವಧಿಯಲ್ಲಿ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಅರಿಶಿಣ-ಕುಂಕುಮದ ಸಮಾರಂಭದ ಆಯೋಜನೆಯನ್ನು ಮಾಡಲಾಗುತ್ತದೆ. ಅದರಲ್ಲಿ ಮುತ್ತೈದೆ ಸ್ತ್ರೀಯರು ಇತರ ಸ್ತ್ರೀಯರಿಗೆ ಪಾತ್ರೆ, ಪ್ಲಾಸ್ಟಿಕ್‌ ವಸ್ತುಗಳನ್ನು ಅಥವಾ ನಿತ್ಯೋಪಯೋಗಿ ಸಾಹಿತ್ಯಗಳನ್ನು ಬಾಗಿನವೆಂದು ಕೊಡುತ್ತಾರೆ. ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಉಡುಗೊರೆಯೆಂದು ನೀಡುವುದು ಉತ್ತಮ.

೧. ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು ! : ಸನಾತನ ಸಂಸ್ಥೆಯು ಅಧ್ಯಾತ್ಮಶಾಸ್ತ್ರ, ಸಾಧನೆ, ಆಚಾರಧರ್ಮ, ಬಾಲಸಂಸ್ಕಾರ ವರ್ಗ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿವಿಧ ವಿಷಯಗಳ ಬಗ್ಗೆ ಗ್ರಂಥಗಳನ್ನು ಪ್ರಕಟಿಸಿದೆ. ಅವುಗಳಲ್ಲಿನ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಬಾಗಿನವೆಂದು ನೀಡಿದರೆ ಅದರಲ್ಲಿರುವ ಅಮೂಲ್ಯ ಜ್ಞಾನವು ಹೆಚ್ಚೆಚ್ಚು ಜನರವರೆಗೆ ತಲುಪುವುದು. ಮಕರಸಂಕ್ರಾಂತಿಯ ನಿಮಿತ್ತ ಸನಾತನ ಸಂಸ್ಥೆಯ ಕಿರುಗ್ರಂಥಗಳಿಗೆ ಮುಂದಿನ ಆಕರ್ಷಕ ರಿಯಾಯಿತಿ ಲಭ್ಯವಿದೆ.

ಕಿರುಗ್ರಂಥಗಳ ಸಂಖ್ಯೆ ರಿಯಾಯಿತಿ (ಶೇ.)
೧. ೨೫ ರಿಂದ ೫೦ ೭
೨. ೫೧ ರಿಂದ ೧೦೦ ೧೦
೩. ೧೦೧ ರ ಮುಂದೆ ೨೫

೨. ಸನಾತನ ಸಂಸ್ಥೆಯ ವಿವಿಧ ಸಾತ್ತ್ವಿಕ ಉತ್ಪಾದನೆಗಳನ್ನೂ (ಸಾಬೂನು ಅದೇ ರೀತಿ ಊದುಬತ್ತಿ, ಅತ್ತರ, ಕರ್ಪೂರ, ಅಷ್ಟಗಂಧ ಮುಂತಾದ ಪೂಜೋಪಯೋಗಿ ವಸ್ತುಗಳನ್ನು) ಬಾಗಿನವೆಂದು ಕೊಡಬಹುದು.

೩. ದೇವತೆಗಳ ಮತ್ತು ಸಂತರ ‘ಲ್ಯಾಮಿನೆಟೆಡ್’ ಛಾಯಾಚಿತ್ರಗಳನ್ನು ಬಾಗಿನವೆಂದು ಕೊಡುವುದು : ಸನಾತನ ಸಂಸ್ಥೆಯು ಪ್ರಕಾಶನ ಮಾಡಿರುವ ವಿವಿಧ ದೇವತೆಗಳ ಚಿತ್ರಗಳನ್ನು ಮತ್ತು ಸಂತರ ಛಾಯಾಚಿತ್ರಗಳನ್ನೂ ಬಾಗಿನವೆಂದು ಕೊಡಬಹುದು. ೬-೮ ಇಂಚು ಆಕಾರದ ಈ ‘ಲ್ಯಾಮಿನೆಟೆಡ್’ ಚಿತ್ರಗಳು ಚೈತನ್ಯದಾಯಕ ಮತ್ತು ಸಾತ್ತ್ವಿಕವಾಗಿದ್ದು ಮಕರಸಂಕ್ರಾಂತಿಯ ನಿಮಿತ್ತ ಅವುಗಳ ಖರೀದಿಗೆ ವಿಶೇಷ ರಿಯಾಯಿತಿಯಿದೆ. ಪ್ರತಿಯೊಂದು ಚಿತ್ರದ ಅರ್ಪಣೆಮೌಲ್ಯ ೮ ರೂಪಾಯಿಗಳಿವೆ. ‘ಯಾವೆಲ್ಲ ದೇವತೆಗಳ ಚಿತ್ರಗಳು ಮತ್ತು ಸಂತರ ಚಿತ್ರಗಳು ಲಭ್ಯಗಳಿವೆ ?’, ಎಂಬುದರ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ.

೩ ಅ. ದೇವತೆಗಳ ಚಿತ್ರಗಳು : ವಿಠ್ಠಲ, ಶ್ರೀ ಗಣಪತಿ, ಶ್ರೀರಾಮ ಮತ್ತು ಶ್ರೀಕೃಷ್ಣ

೩ ಆ. ಸಂತರ ಛಾಯಾಚಿತ್ರಗಳು : ಸಂತ ಭಕ್ತರಾಜ ಮಹಾರಾಜ

ಬಾಗಿನವೆಂದು ಕೊಡಲು ಗ್ರಂಥಗಳು, ಕಿರುಗ್ರಂಥ, ಸಾತ್ತ್ವಿಕ ಉತ್ಪಾದನೆಗಳು, ಹಾಗೆಯೇ ದೇವತೆಗಳ ಚಿತ್ರಗಳು ಮತ್ತು ಸಂತರ ಛಾಯಾಚಿತ್ರಗಳ ಬೇಡಿಕೆಯನ್ನು ಸ್ಥಳೀಯ ಸಾಧಕರ ಅಥವಾ ನಿಯತಕಾಲಿಕೆಗಳ ಮಾರಾಟಗಾರರ ಬಳಿ ಕೊಡಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ೯೩೨೨೩೧೫೩೧೭ ಈ ಸಂಖ್ಯೆಯನ್ನು ಸಂಪರ್ಕಿಸಬೇಕು ಅಥವಾ ಜಾಲತಾಣ ಸ್ಚಿಟಿಚಿಣಚಿಟಿಶೊಠಿ.ಛಿಒಮ್ ಇದಕ್ಕೆ ಭೇಟಿ ನೀಡಬೇಕು.