
ಉಡುಪಿ – ‘ಒಮ್ಮೆ ಮೋದಿ, ಯೋಗಿ ಹೋದರೆ ರಾಮಮಂದಿರವನ್ನು ಕೆಡವುತ್ತೇವೆ’ ಎಂದು ದೇಶದ ಕೆಲ ವಿರೋಧಿಗಳು ಹೇಳುತ್ತಾರೆ. ತುಂಬಾ ಹೋರಾಟ ಮಾಡಿದ ನಂತರ ಶ್ರಮದ ಫಲಸ್ವರೂಪವಾಗಿ ನಿರ್ಮಾಣವಾಗಿರುವ ಶ್ರೀ ರಾಮಮಂದಿರ ಅಮರ ಆಗಬೇಕು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಯಿತು. ಇದೀಗ ಮಥುರಾದ ಶ್ರೀಕೃಷ್ಣ ಮಂದಿರದ ಸಮೀಕ್ಷೆಗೆ ನ್ಯಾಯಾಲಯ ಅನುಮತಿ ನೀಡಿದೆ. ಈಗ ಅಲ್ಲಿ ಶ್ರೀಕೃಷ್ಣನ ಮಂದಿರ ಕಟ್ಟಿ ದೇಶ ಕಟ್ಟೋಣ. ರಾಮ-ಕೃಷ್ಣರ ಸೇವೆಯೇ ದೇಶಸೇವೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ”ಇನ್ನು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿದರೆ ನಮ್ಮ ಕೆಲಸ ಮುಗಿಯಿತು ಎಂದು ಭಾವಿಸಬೇಡಿ. ಈಗ ನಮಗೆ ಹೊಸ ಜವಾಬ್ದಾರಿ ಬಂದಿದೆ. ಶ್ರೀರಾಮ ಮಂದಿರವನ್ನು ಇನ್ನೂ ಹಲವು ಶತಮಾನಗಳ ಕಾಲ ಉಳಿಸಬೇಕಾದರೆ ದೇಶದ ಹಿಂದೂಗಳು ‘ಹಿಂದೂ’ಗಳಾಗಿಯೇ ಉಳಿಯಬೇಕು. ಅದಕ್ಕಾಗಿ ಎಲ್ಲಾ ಹಿಂದೂಗಳು ತಮ್ಮ ಮಕ್ಕಳಿಗೆ ಮರುನಾಮಕರಣ ಮಾಡಬೇಕು. ಮಕ್ಕಳ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅಥವಾ ಅರ್ಥಪೂರ್ಣವಾಗಿರಬೇಕು ಎಂದು ಹೇಳಿದರು.
ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ: ಶ್ರೀರಾಮ ಮಂದಿರಕ್ಕೆ ಇದುವರೆಗೆ 500 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ : Ayodhya Ram Mandir
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !
ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರ ಪ್ರೇರಣೆಯಿಂದ ಛತ್ತೀಸಗಡದಲ್ಲಿ 175 ಜನರ ಹಿಂದೂ ಧರ್ಮಕ್ಕೆ ಮರುಸೇರ್ಪಡೆ!
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ಸದ್ಧರ್ಮಾಚರಣೆಯು ಇಹಲೋಕದ ಐಶ್ವರ್ಯ ಮತ್ತು ವೈಭವದ ಸಾಧನ !