ನಮ್ಮ ಕುಟುಂಬವ್ಯವಸ್ಥೆ ಸುರಕ್ಷಿತವಾಗಿರಲು ಯಾವ ಕಾಳಜಿ ವಹಿಸಬೇಕು ?

ಧರ್ಮದ ವಿಷಯದಲ್ಲಿ ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶನ !

ಪ.ಪೂ. ಸ್ವಾಮಿ ವರದಾನಂದ ಭಾರತಿ

ಯಾವ ಪ್ರಶ್ನೆಗಳು ಸಮಷ್ಟಿ ಜೀವನದಲ್ಲಿ ಉದ್ಭವಿಸುವುದೋ ಅದೇ ಮಾನಸಿಕತೆ ವ್ಯಕ್ತಿ ಜೀವನದಲ್ಲಿ ಬಂದರೆ, ಆ ಕುಟುಂಬದ ಸ್ವಾಸ್ಥ್ಯ-ಭದ್ರತೆಗೆ ಧಕ್ಕೆಯಾಗುತ್ತದೆ. ಕುಟುಂಬ ವ್ಯವಸ್ಥೆ ಹದಗೆಟ್ಟರೆ, ವ್ಯಕ್ತಿ ಜೀವನದಿಂcದ, ಸಮಾಜ-ರಾಷ್ಟ್ರಜೀವನ, ಅಸಮಾಧಾನಿ, ಅಸುರಕ್ಷಿತವಾಗುತ್ತಾ ಹೋಗುತ್ತದೆ. ಈಗ ವಿದೇಶದಲ್ಲಿ ಕೆಲವು ಸಮೃದ್ಧ ಸಮಾಜದಲ್ಲಿ ಇದರ ಅರಿವಾಗುತ್ತಿದೆ.

೧. ಸ್ತ್ರೀಯರ ಮೇಲೆ ಕುಟುಂಬದ ಆರೋಗ್ಯದ ರಕ್ಷಣೆಯ ಜವಾಬ್ದಾರಿ

ನಮ್ಮ ಧರ್ಮದಲ್ಲಿ ಕುಟುಂಬದ ಎಲ್ಲ ರೀತಿಯ ವ್ಯವಸ್ಥೆಯ ಜವಾಬ್ದಾರಿ ಮುಖ್ಯವಾಗಿ ಕುಟುಂಬದ ಗೃಹಿಣಿಯ ಮೇಲಿದೆ. ಇಂದು ಸ್ತ್ರೀಮುಕ್ತಿಯ ಭ್ರಮೆಯನ್ನುಂಟು ಮಾಡುವ ವಿಚಾರಗಳ ಸುಳಿಯಲ್ಲಿ ಇದನ್ನು ತಿಳಿದುಕೊಳ್ಳುವುದು ಕಷ್ಟ ಹಾಗೂ ಒಂದು ರೀತಿಯಲ್ಲಿ ಅಸಾಧ್ಯವೆನಿಸುತ್ತಿರಬಹುದು; ಆದರೆ ‘ಗೃಹಂತು ಗೃಹಿಣೀಹೀನಂ ಕಾಂತಾರಾದತಿರಿಚ್ಯತೆ |’ ಅಂದರೆ ‘ಗೃಹಿಣಿಯಿಲ್ಲದ ಮನೆಯು ವನಕ್ಕೆ ಸಮಾನವಾಗಿರುತ್ತದೆ.’ ಹೀಗೇಕೆ ಹೇಳಲಾಗಿದೆ ? ಇದನ್ನು ಗಮನಿಸಬೇಕು. ಸ್ತ್ರೀ ಜೀವನದ ಹಾಗೂ ಸ್ತ್ರೀಗೆ ಪತಿವ್ರತಾ ಧರ್ಮವೆಂದು ಹೇಳಿದ ಧರ್ಮದ ಉಪಯುಕ್ತತೆಯು ಕುಟುಂಬದ ಸ್ವಾಸ್ಥ್ಯ, ಸಮಾಧಾನ ಮತ್ತು ಅಂತರ್ಗತ ರಕ್ಷಣೆಗಾಗಿಯೇ ಇದೆ.

೨. ಕುಟುಂಬದ ಸದಸ್ಯರು ತಮ್ಮ ತಮ್ಮ ಧರ್ಮವನ್ನು ಪಾಲಿಸುವುದು ಮಹತ್ವದ್ದಾಗಿದೆ !

ಕರ್ತಾಪುರುಷ ಧರ್ಮದ ಮಾರ್ಗದಿಂದ ಧನಪ್ರಾಪ್ತಿಗೆ, ಬಾಹ್ಯ ರಕ್ಷಣೆಗೆ ಜವಾಬ್ದಾರ ಆಗಿದ್ದಾನೆ. ಅಂದರೆ ‘ಕೇವಲ ಗೃಹಿಣಿಯರ ಮೇಲೆಯೇ ಅಥವಾ ಸ್ತ್ರೀಯರ ಮೇಲೆಯೇ ಎಲ್ಲ ಜವಾಬ್ದಾರಿ ಇರುತ್ತದೆ’, ಎನ್ನುವ ಹಾಗಿಲ್ಲ. ಕುಟುಂಬದ ಎಲ್ಲ ಸದಸ್ಯರು ತಮ್ಮ ತಮ್ಮ ಧರ್ಮ, ಉದಾ. ಪಿತಾ ಧರ್ಮ, ಮಾತಾ ಧರ್ಮ, ಪುತ್ರ ಧರ್ಮ, ಪುತ್ರಿ ಧರ್ಮ, ಭ್ರಾತೃ ಧರ್ಮ, ಗೃಹಸ್ಥ ಧರ್ಮ, ವೃದ್ಧ ಹಿರಿಯರು ವಾನಪ್ರಸ್ಥ ಧರ್ಮವನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುವುದು ಹಾಗೂ ಮೊದಲು ಅದನ್ನು ಚೆನ್ನಾಗಿ ತಿಳಿದುಕೊಳ್ಳುವುದು ಆವಶ್ಯಕವಾಗಿದೆ.

೩. ಭಾರತೀಯ ಕುಟುಂಬವ್ಯವಸ್ಥೆಯಲ್ಲಿ ಕುಟುಂಬದವರು ಇಡಬೇಕಾದ ಅರಿವು

ನಮ್ಮಲ್ಲಿ ಈ ಹಿಂದಿನ ಕುಟುಂಬವ್ಯವಸ್ಥೆಯಲ್ಲಿ ಹಿರಿಯ ವೃದ್ಧ ಸದಸ್ಯರು (ಅಜ್ಜ, ಅಜ್ಜಿ ಇತ್ಯಾದಿ) ತಮ್ಮ ಅನುಭವದಿಂದ ಪ್ರತಿಯೊಂದು ಘಟಕಕ್ಕೆ ಅವರವರ ಆಚಾರಧರ್ಮವನ್ನು ಕಲಿಸುತ್ತಿದ್ದರು. ಒಂದು ವೇಳೆ ಯಾರಾದರೂ ತಪ್ಪು ಮಾಡಿದರೆ, ವಾತ್ಸಲ್ಯಭಾವದಿಂದ ಕ್ಷಮಾಶೀಲತೆಯಿಂದ ಅರ್ಥ ಮಾಡಿಕೊಳ್ಳುತ್ತಿದ್ದರು ಹಾಗೂ ‘ಪುನಃ ಹಾಗೆ ಆಗದಂತೆ’, ಕಾಳಜಿ ವಹಿಸಲು ಹೇಳುತ್ತಿದ್ದರು. ನಿಜವಾಗಿ ಎಲ್ಲಿ ತಪ್ಪಾಗಿದೆ ? ಎಂಬುದನ್ನೂ ಸ್ಪಷ್ಟಪಡಿಸುತ್ತಿದ್ದರು. ಇಂದು ನಾವು ಪಾಶ್ಚಾತ್ಯ ಜೀವನಪದ್ಧತಿಯ ಭ್ರಮೆಯುಕ್ತ ಆಕರ್ಷಣೆಯಿಂದ ಈ ವ್ಯವಸ್ಥೆಯನ್ನು ಮರೆತಿರುವ ಹಾಗಿದೆ. ಕೆಲವು ತಪ್ಪು ತರ್ಕಗಳು ಕುಟುಂಬವನ್ನು ಸ್ವಾಸ್ಥ್ಯದಿಂದ ದೂರ ಒಯ್ಯುತ್ತವೆ. ಅದಕ್ಕಾಗಿ ಧರ್ಮದ ‘ವಿಶೇಷ ಅಧಿಕಾರ ಮತ್ತು ಜವಾಬ್ದಾರಿ’ ಇವೆರಡು ಅಂಗಗಳ ಸಹಿತ ‘ಕರ್ತವ್ಯ ಮತ್ತು ಧಾರ್ಮಿಕತೆ’ ಈ ಎರಡು ವಿಷಯಗಳನ್ನು ತಿಳಿದುಕೊಂಡರೆ, ಯಾವುದು ಯೋಗ್ಯ, ಯಾವುದು ಅಯೋಗ್ಯ ? ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಅದರಿಂದ ಕುಟುಂಬ ಸಮಾಧಾನದಲ್ಲಿರುತ್ತದೆ ಹಾಗೂ ಆರೋಗ್ಯಕರವಾಗಿರುತ್ತದೆ. ದುಃಖದಿಂದ ಮನುಷ್ಯನ ಸಮಾಧಾನ ಕಡಿಮೆಯಾಗುತ್ತದೆ, ಇದರಲ್ಲಿ ಆಶ್ಚರ್ಯವೇನಿಲ್ಲ್ಲ; ಆದರೆ ವಿಚಾರ ಮಾಡಿದರೆ, ಕೇವಲ ಸುಖದಿಂದ ಮನುಷ್ಯನಿಗೆ ನೆಮ್ಮದಿ ಸಿಗುವುದಿಲ್ಲ, ಇದು ಗಮನಕ್ಕೆ ಬರುತ್ತದೆ. ಹೇಗೆ ಸುಖ ಸಿಗುತ್ತಾ ಹೋಗುವುದೋ, ಹಾಗೆಯೆ ಮನುಷ್ಯನ ಆಸಕ್ತಿ, ಆಕಾಂಕ್ಷೆ ಹೆಚ್ಚಾಗುತ್ತಾ ಹೋಗುತ್ತದೆ ಹಾಗೂ ಅದರ ಪರಿಣಾಮದಿಂದ ಅವನು ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಆರೋಗ್ಯ-ಆನಂದ ಕಳೆದುಕೊಳ್ಳುತ್ತಾನೆ. ಮನುಷ್ಯ ತನ್ನ ಎಲ್ಲ ವ್ಯವಹಾರಗಳನ್ನು ಮಾಡುತ್ತಾನೆ, ಅದೆಲ್ಲವೂ ನೆಮ್ಮದಿಗಾಗಿಯೆ. ಅದನ್ನೇ ಅವನು ಸುಖವೆಂದು ತಿಳಿಯುತ್ತಾನೆ. ಎಲ್ಲರ ಅನುಭವ ಹೇಗಿದೆಯೆಂದರೆ, ಮನುಷ್ಯನಿಗೆ ವ್ಯವಹಾರದಿಂದ ಎಲ್ಲವೂ ಸಿಗುತ್ತದೆ; ಆದರೆ ಸಮಾಧಾನ ಸಿಗುವುದಿಲ್ಲ.

೪. ಅಧ್ಯಾತ್ಮ ಜ್ಞಾನದ ಮಹತ್ವ

ಅಧ್ಯಾತ್ಮಜ್ಞಾನ ಸುಖ-ದುಃಖಗಳ ಪರಿಣಾಮ ‘ಆಸಕ್ತಿ (ಹರ್ಷ-ಮೋಹ) – ಶೋಕ’ ಇವುಗಳನ್ನು ಆಗಲು ಬಿಡುವುದಿಲ್ಲ. ಇದರಿಂದ ಮನುಷ್ಯನ ಮಾನಸಿಕ ನೆಮ್ಮದಿ ಅವಸ್ಥೆ ಉಳಿದುಕೊಳ್ಳುತ್ತದೆ. ಯಾರು ಅಧ್ಯಾತ್ಮದ ಚಿಂತನೆಯನ್ನು ಮಾಡಿದ್ದಾನೆಯೋ ಮತ್ತು ಕೆಲವೊಂದು ಅಂಶ ಅದು ಅವನಿಗೆ ಸಾಧ್ಯವಾಗಿದೆಯೋ, ಅವನ ಜೀವನ ನಿತ್ಯವೂ ಸಮಾಧಾನಿ ಆಗಿರುತ್ತದೆ. ಅನೇಕ ಸಂತಮಹಾತ್ಮರ ಚರಿತ್ರೆಗಳು ಇದಕ್ಕೆ ಸಾಕ್ಷಿಯಾಗಿರುತ್ತವೆ. ಅಧ್ಯಾತ್ಮ ಜ್ಞಾನವು ಜೀವನದ ಎಲ್ಲ ದುಃಖಗಳನ್ನು ಶೋಕವಾಗಿ ಪರಿವರ್ತನೆಯಾಗಲು ಬಿಡುವುದಿಲ್ಲ. ಹೇಗೆ ಒಂದು ವಾಹನದಲ್ಲಿನ ಉತ್ತಮವಾದ ಶಾಕ್‌ ಎಬ್ಸರ್ಬರ್ಸ್ ಅದರಲ್ಲಿನ ಪ್ರವಾಸಿಗಳಿಗೆ ರಸ್ತೆಯ ಏರುತಗ್ಗುಗಳ ಅನುಭವ ಆಗಲು ಬಿಡುವುದಿಲ್ಲವೋ, ಹಾಗೆಯೆ ಅಧ್ಯಾತ್ಮ ಜೀವನದಲ್ಲಿನ ಏರಿಳಿತ, ಸುಖ-ದುಃಖಗಳ ಅನುಭವ ಮನುಷ್ಯನ ಮನಸ್ಸಿನ ಮೇಲಾಗಲು ಬಿಡುವುದಿಲ್ಲ. ಅವನು ಯಾವಾಗಲೂ ಒಂದು ದಿವ್ಯ ಆನಂದ ಹಾಗೂ ಸಮಾಧಾನದಲ್ಲಿ ಇರುತ್ತಾನೆ.

– ಪ.ಪೂ. ಸ್ವಾಮಿ ವರದಾನಂದ ಭಾರತಿ (೧೯೯೮)

(ಆಧಾರ : ಗ್ರಂಥ ‘ಜಿಜ್ಞಾಸಾ’, ಶ್ರೀವರದಾನಂದ ಪ್ರತಿಷ್ಠಾನ,

ಶ್ರೀ ಕ್ಷೇತ್ರ ಪಂಢರಪುರ)