Uttarakhand Illegal Madrasas Sealed : ಉತ್ತರಾಖಂಡದಲ್ಲಿ ಇನ್ನೂ 19 ಕಾನೂನುಬಾಹಿರ ಮದರಸಗಳಿಗೆ ಬೀಗ ಜಡಿತ !

ಇಲ್ಲಿಯವರೆಗೆ 92 ಮದರಸಗಳನ್ನು ಮುಚ್ಚಲಾಗಿದೆ

ಉಧಮಸಿಂಗ ನಗರ (ಉತ್ತರಾಖಂಡ) – ಉತ್ತರಾಖಂಡದ ಭಾಜಪ ಸರಕಾರವು ಕಾನೂನುಬಾಹಿರ ಮದರಸಗಳ ವಿರುದ್ಧ ನಡೆಸುತ್ತಿರುವ ಅಭಿಯಾನದಲ್ಲಿ ಇದುವರೆಗೆ ರಾಜ್ಯಾದ್ಯಂತ 92 ಮದರಸಗಳಿಗೆ ಬೀಗ ಜಡಿಯಲಾಗಿದೆ. ರಾಜಧಾನಿ ಡೆಹ್ರಾಡೂನ್‌ನಲ್ಲಿ 52 ಮದರಸಗಳನ್ನು ಮುಚ್ಚಲಾಗಿದೆ. ಇತ್ತೀಚೆಗೆ, ಉಧಮಸಿಂಗ್ ನಗರ ಜಿಲ್ಲೆಯ ಜಸಪುರ ಪ್ರದೇಶದಲ್ಲಿ 5, ಗದರಪುರದಲ್ಲಿ 3 ಮತ್ತು ರುದ್ರಪುರದಲ್ಲಿ 2 ಕಾನೂನುಬಾಹಿರ ಮದರಸಗಳನ್ನು ಮುಚ್ಚಲಾಗಿದೆ. ಪೊಲೀಸರು ನಡೆಸಿದ ಪರಿಶೀಲನಾ ಕಾರ್ಯಾಚರಣೆಯಲ್ಲಿ ಈ ಮದರಸಗಳು ಕಾನೂನುಬಾಹಿರವೆಂದು ಕಂಡುಬಂದಿದೆ. ಈ ಹಿಂದೆ ಉಧಮಸಿಂಗ್ ನಗರದ ಖತಿಮಾ ಪ್ರದೇಶದಲ್ಲಿ 9 ಮದರಸಗಳನ್ನು ಮುಚ್ಚಲಾಗಿತ್ತು. ಸರಕಾರದ ಹೇಳಿಕೆಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 500 ಕಾನೂನುಬಾಹಿರ ಮದರಸಗಳು ಇರಬಹುದು. ಕಳೆದ 15 ದಿನಗಳಲ್ಲಿ 52 ಕಾನೂನುಬಾಹಿರ ಮದರಸಗಳನ್ನು ಮುಚ್ಚಲಾಗಿದೆ.

ಆಡಳಿತದ ಈ ನಡೆಯನ್ನು ಮುಸ್ಲಿಮರು ವಿರೋಧಿಸಿದ್ದಾರೆ. ಯಾವುದೇ ಸೂಚನೆ ಅಥವಾ ಉತ್ತರವಿಲ್ಲದೆ ಈ ಮದರಸಗಳನ್ನು ಇದ್ದಕ್ಕಿದ್ದಂತೆ ಮುಚ್ಚುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಈ ಮದರಸಗಳಲ್ಲಿ ಕಲಿಯುತ್ತಿರುವ ಸಾವಿರಾರು ಮಕ್ಕಳ ಭವಿಷ್ಯ ಈಗ ಕತ್ತಲೆಯಾಗಬಹುದು. ರಂಜಾನ್ ಸಮಯದಲ್ಲಿ ಮದರಸಗಳನ್ನು ಮುಚ್ಚುವುದು ಸರಿಯಲ್ಲ ಎಂದು ಅನೇಕ ಜನರು ಭಾವಿಸುತ್ತಾರೆ. ಆದಾಗ್ಯೂ, ಈ ಕ್ರಮವನ್ನು ಸಂಪೂರ್ಣವಾಗಿ ಕಾನೂನಿನ ಚೌಕಟ್ಟಿನೊಳಗೆ ಮತ್ತು ಸರಕಾರದ ಆದೇಶಗಳ ಪ್ರಕಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಆಡಳಿತ ಹೇಳಿದೆ.

ಸಂಪಾದಕೀಯ ನಿಲುವು

  • ಉತ್ತರಾಖಂಡದಲ್ಲಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಭಾಜಪ ಆಡಳಿತ ವಿರುವ ಇತರ ರಾಜ್ಯಗಳಲ್ಲಿಯೂ ಇದನ್ನು ಮಾಡಬೇಕು ಎಂದು ರಾಷ್ಟ್ರಪ್ರೇಮಿಗಳು ಭಾವಿಸುತ್ತಾರೆ !
  • ಮೂಲತಃ ಈ ದೇಶದಲ್ಲಿ ಮದರಸಗಳೆಂಬ ವಿಷಯವೇ ಇರಬಾರದು. ಮದರಸಗಳಲ್ಲಿ ಭಯೋತ್ಪಾದಕರು ಪತ್ತೆಯಾಗಿದ್ದಾರೆ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ, ಅತ್ಯಾಚಾರ ಮತ್ತು ಕೊಲೆಗಳು ನಡೆದಿರುವುದು ಕಾಲಕಾಲಕ್ಕೆ ಬೆಳಕಿಗೆ ಬಂದಿದೆ, ಹೀಗಿರುವಾಗ ಸರಕಾರವು ಅವರಿಗೆ ಅನುದಾನ ನೀಡುವುದನ್ನು ನಿಲ್ಲಿಸಿ ಅವುಗಳನ್ನು ಮುಚ್ಚಬೇಕು !