
ಸಿಯಾಲಕೋಟ್ (ಪಾಕಿಸ್ತಾನ್) – ಭಾರತದಲ್ಲಿನ ಪಠಣಕೋಟ ಇಲ್ಲಿಯ ಸೈನ್ಯದ ನೆಲೆಯ ಮೇಲೆ ೨೦೧೬ ರಲ್ಲಿ ನಡೆದಿರುವ ಜಿಹಾದಿ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರದಾರ ಶಾಹಿದ್ ಲತೀಫ್ ಇವನನ್ನು ಪಾಕಿಸ್ತಾನದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಇಲ್ಲಿಯ ಮಸೀದಿಯ ಹೊರಗೆ ಈ ಹತ್ಯೆ ಮಾಡಲಾಗಿದೆ. ಅವನು ರಾಷ್ಟ್ರೀಯ ತನಿಖಾ ದಳದ ಪರಾರಿ ಭಯೋತ್ಪಾದಕರ ಪಟ್ಟಿಯಲ್ಲಿದ್ದನು. ಪಠಾನಕೋಟದ ದಾಳಿಯಲ್ಲಿ ಭಾರತದ ೭ ಸೈನಿಕರು ಹುತಾತ್ಮರಾಗಿದ್ದರು. ಜೈಶ ಎ ಮಹಮ್ಮದ್ ಈ ಭಯೋತ್ಪಾದಕ ಸಂಘಟನೆಯಿಂದ ಈ ದಾಳಿ ನಡೆಸಲಾಗಿತ್ತು. ಇಲ್ಲಿ ೩೬ ಗಂಟೆಗಳ ಕಾಲ ಚಕಿಮಕಿ ಮುಂದುವರೆದಿತ್ತು. ೧೯೯೯ ರ ಇಂಡಿಯನ್ ಏರ ಲೈನ್ಸ್ ವಿಮಾನದ ಅಪಹರಣ ಮಾಡಿರುವ ಭಯೋತ್ಪಾದಕರಲ್ಲಿ ಲತೀಫ್ ನ ಸಮಾವೇಶ ಇರುವುದಾಗಿ ಕೂಡ ಆರೋಪವಿದೆ.
ಆಗಿನ ಕಾಂಗ್ರೆಸ್ ಸರಕಾರವು ಲತೀಫ್ ಇವನನ್ನು ‘ಸದ್ಭಾವನಾ’ ಎಂದು ಪಾಕಿಸ್ತಾನಕ್ಕೆ ಒಪ್ಪಿಸಿತ್ತು.
ಶಾಹಿದ್ ಸಿಯಾಲಕೋಟ ಪ್ರದೇಶದಲ್ಲಿ ಜೈಶ್ ಏ ಮಹಮ್ಮದ್ ನ ಉನ್ನತ ಕಮಂಡರ್ ಆಗಿದ್ದನು. ಅವನನ್ನು ಭಾರತದಲ್ಲಿ ಬಂಧಿಸಿದ ನಂತರ ಶಿಕ್ಷೆ ವಿಧಿಸಿತ್ತು. ೨೦೧೦ ರಲ್ಲಿ ಶಿಕ್ಷೆ ಪೂರ್ಣವಾದ ನಂತರ ಭಾರತದಿಂದ ಅವನನ್ನು ಪಾಕಿಸ್ತಾನಕ್ಕೆ ಸದ್ಭಾವನೆಯ ಅಂತರ್ಗತ ಪ್ರತ್ಯಾರ್ಪಣೆ ಮಾಡಲಾಗಿತ್ತು. ಪಾಕಿಸ್ತಾನಕ್ಕೆ ಹೋದ ನಂತರ ಅವನು ಮತ್ತೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ಮುಂದುವರೆಸಿದ್ದನು.
ಅಮೆರಿಕದಿಂದ ಭಾರತದ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕ : Import Duty on India
ನಾಗರಿಕ ಅಣು ಒಪ್ಪಂದಕ್ಕಾಗಿ ಸೌದಿ ಅರೇಬಿಯಾ ಇಸ್ರೇಲ್ ಅನ್ನು ಒಪ್ಪಿಗೆ ನೀಡಬೇಕು ! : Recognize Israel
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban