
ಸಿಯಾಲಕೋಟ್ (ಪಾಕಿಸ್ತಾನ್) – ಭಾರತದಲ್ಲಿನ ಪಠಣಕೋಟ ಇಲ್ಲಿಯ ಸೈನ್ಯದ ನೆಲೆಯ ಮೇಲೆ ೨೦೧೬ ರಲ್ಲಿ ನಡೆದಿರುವ ಜಿಹಾದಿ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರದಾರ ಶಾಹಿದ್ ಲತೀಫ್ ಇವನನ್ನು ಪಾಕಿಸ್ತಾನದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಇಲ್ಲಿಯ ಮಸೀದಿಯ ಹೊರಗೆ ಈ ಹತ್ಯೆ ಮಾಡಲಾಗಿದೆ. ಅವನು ರಾಷ್ಟ್ರೀಯ ತನಿಖಾ ದಳದ ಪರಾರಿ ಭಯೋತ್ಪಾದಕರ ಪಟ್ಟಿಯಲ್ಲಿದ್ದನು. ಪಠಾನಕೋಟದ ದಾಳಿಯಲ್ಲಿ ಭಾರತದ ೭ ಸೈನಿಕರು ಹುತಾತ್ಮರಾಗಿದ್ದರು. ಜೈಶ ಎ ಮಹಮ್ಮದ್ ಈ ಭಯೋತ್ಪಾದಕ ಸಂಘಟನೆಯಿಂದ ಈ ದಾಳಿ ನಡೆಸಲಾಗಿತ್ತು. ಇಲ್ಲಿ ೩೬ ಗಂಟೆಗಳ ಕಾಲ ಚಕಿಮಕಿ ಮುಂದುವರೆದಿತ್ತು. ೧೯೯೯ ರ ಇಂಡಿಯನ್ ಏರ ಲೈನ್ಸ್ ವಿಮಾನದ ಅಪಹರಣ ಮಾಡಿರುವ ಭಯೋತ್ಪಾದಕರಲ್ಲಿ ಲತೀಫ್ ನ ಸಮಾವೇಶ ಇರುವುದಾಗಿ ಕೂಡ ಆರೋಪವಿದೆ.
ಆಗಿನ ಕಾಂಗ್ರೆಸ್ ಸರಕಾರವು ಲತೀಫ್ ಇವನನ್ನು ‘ಸದ್ಭಾವನಾ’ ಎಂದು ಪಾಕಿಸ್ತಾನಕ್ಕೆ ಒಪ್ಪಿಸಿತ್ತು.
ಶಾಹಿದ್ ಸಿಯಾಲಕೋಟ ಪ್ರದೇಶದಲ್ಲಿ ಜೈಶ್ ಏ ಮಹಮ್ಮದ್ ನ ಉನ್ನತ ಕಮಂಡರ್ ಆಗಿದ್ದನು. ಅವನನ್ನು ಭಾರತದಲ್ಲಿ ಬಂಧಿಸಿದ ನಂತರ ಶಿಕ್ಷೆ ವಿಧಿಸಿತ್ತು. ೨೦೧೦ ರಲ್ಲಿ ಶಿಕ್ಷೆ ಪೂರ್ಣವಾದ ನಂತರ ಭಾರತದಿಂದ ಅವನನ್ನು ಪಾಕಿಸ್ತಾನಕ್ಕೆ ಸದ್ಭಾವನೆಯ ಅಂತರ್ಗತ ಪ್ರತ್ಯಾರ್ಪಣೆ ಮಾಡಲಾಗಿತ್ತು. ಪಾಕಿಸ್ತಾನಕ್ಕೆ ಹೋದ ನಂತರ ಅವನು ಮತ್ತೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ಮುಂದುವರೆಸಿದ್ದನು.
US-IRAN Peace Deal : ಅಮೆರಿಕ-ಇರಾನ್ ಯುದ್ಧ ಅಂತ್ಯ!
ಬಾಂಗ್ಲಾದೇಶದ ಶಿವಗಂಜ್ ಉಪಜಿಲ್ಲೆಯ ಹೆಸರು ಬದಲಾಯಿಸಿ ‘ಮಹಾಸ್ಥಾನ’ ಆಗಲಿದೆ !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು
ಈಗ ಯುನೈಟೆಡ್ ಕಿಂಗ್ಡಮ್ ಕೂಡ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯ ಮೇಲೆ ನಿರ್ಬಂಧ ಹೇರಿದೆ!