ಕೆನಡಾದ ಬ್ರಿಟಿಷ್ ಕೊಲಂಬಿಯಾ ರಾಜ್ಯದ ರಾಜ್ಯಪಾಲರು ಪ್ರಧಾನಮಂತ್ರಿ ಟ್ರುಢೋ ಇವರ ಮಾನ ಕಳೆದರು !

ಓಟಾವ್ (ಕೆನಡಾ) – ಖಲಿಸ್ತಾನಿ ಭಯೋತ್ಪಾದಕ ಹರದೀಪಸಿಂಹ ನಿಜ್ಜರ್ ಇವನ ಕೆನಡಾದಲ್ಲಿನ ಬ್ರಿಟಿಷ್ ಕೊಲಂಬಿಯಾ ರಾಜ್ಯದಲ್ಲಿನ ಸರೆ ನಗರದಲ್ಲಿ ಹತ್ಯೆ ಮಾಡಿದ ನಂತರ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಈ ಹತ್ಯೆಯಲ್ಲಿ ಭಾರತದ ಕೈವಾಡ ಇರುವುದೆಂದು ಆರೋಪಿಸುತ್ತಾ ಅದರ ಬಗ್ಗೆ ಸಾಕ್ಷಿ ಇರುವ ಬಗ್ಗೆ ಕೂಡ ದಾವೆ ಮಾಡಿದ್ದರು; ಆದರೆ ಅವರು ಯಾವುದೇ ಸಾಕ್ಷಿ ಪ್ರಸ್ತುತಪಡಿಸಿಲ್ಲ. ಇದರ ಬಗ್ಗೆ ಈಗ ಬ್ರಿಟಿಷ್ ಕೊಲಂಬಿಯಾ ರಾಜ್ಯದ ರಾಜ್ಯಪಾಲ ಡೇವಿಡ್ ಎ.ಬಿ ಇವರು ಟ್ರುಡೋ ಇವರ ಮಾನ ಕಳೆದಿದ್ದಾರೆ. ಅವರು, ನಿಜ್ಜರ್ ನ ಹತ್ಯೆಯ ಬಗ್ಗೆ ನಮಗೆ ಏನೆಲ್ಲಾ ತಿಳಿದಿದೆ ಅದು ಸಾರ್ವಜನಿಕ ಸ್ಥಳದಲ್ಲಿ ಲಭ್ಯವಿದೆ. ಇದು ಬಹಳ ನಿರಾಶದಾಯಕವಾಗಿದೆ. ಟ್ರುಡೋ ಇವರು ಕೆನಡಾದ ಗೂಢಾಚಾರ ಇಲಾಖೆಯಿಂದ ಮಾಹಿತಿ ಪಡೆದಿದ್ದರು; ಆದರೆ ಅದು ಇಂಟರ್ನೆಟ್ ನಲ್ಲಿ ಲಭ್ಯವಿದೆ. ಆ ಮಾಹಿತಿ ಅಲ್ಲದೆ ನನಗೆ ಬೇರೆ ಏನು ತಿಳಿದಿಲ್ಲ ಎಂದು ಹೇಳಿದರು.
Open source, available on the internet: British Columbia Premier David Eby on briefings by Canadian intelligence agency on Khalistani terrorist Hardeep Singh Nijjarhttps://t.co/L5MzeOuZ6x
— OpIndia.com (@OpIndia_com) September 23, 2023
ಸಂಪಾದಕೀಯ ನಿಲುವುಟ್ರುಡೋ ಇವರು ಭಾರತದ ಮೇಲೆ ಆರೋಪ ಮಾಡಿದಾಗಿನಿಂದ ಅವರ ದೇಶದಲ್ಲಿನ ಪ್ರಸಾರ ಮಾಧ್ಯಮಗಳು, ವಿರೋಧಿ ಪಕ್ಷದ ನಾಯಕರು, ರಾಜಕೀಯ ಮುಖಂಡರು ಹಾಗೂ ಜನರು ಕೂಡ ಅವರನ್ನು ಟೀಕಿಸುತ್ತಿದ್ದಾರೆ. ಇದರಿಂದ ಟ್ರುಡೋ ಜಗತ್ತಿನೆದರೂ ನೆಲಕಚ್ಚಿದ್ದಾರೆ. |
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map