ಬುಂದಿ (ರಾಜಸ್ಥಾನ) ಇಲ್ಲಿಯ ಶ್ರೀ ರಕ್ತದಂತಿಕಾಮಾತಾ ದೇವಸ್ಥಾನದಲ್ಲಿ ೧೩ ಲಕ್ಷ ರೂಪಾಯಿಗಳ ಲೂಟಿ !

ದರೋಡೆಕೋರರ ಹಲ್ಲೆಯಿಂದ ಅರ್ಚಕರು ಮತ್ತು ಇನ್ನೋರ್ವರಿಗೆ ಗಂಭೀರ ಗಾಯ !

ಬುಂದಿ (ರಾಜಸ್ಥಾನ) – ಇಲ್ಲಿಯ ಸಥೂರ ಪ್ರದೇಶದಲ್ಲಿ ದರೋಡೆಕೋರರು ಶ್ರೀ ರಕ್ತದಂತಿಕಾಮಾತಾ ದೇವಸ್ಥಾನದಲ್ಲಿ ಮಲಗಿದ್ದ ೨ ಅರ್ಚಕರು ಮತ್ತು ಒಬ್ಬ ಸಹಾಯಕರು ಇವರನ್ನು ಹೊಡೆದು ದೇವಸ್ಥಾನದಲ್ಲಿನ ಚಿನ್ನ ಬೆಳ್ಳಿಯ ಆಭರಣಗಳು ಮತ್ತು ಇತರ ಬೆಲೆಬಾಳುವ ೧೩ ಲಕ್ಷ ರೂಪಾಯಿ ಲೂಟಿ ಮಾಡಿದ್ದಾರೆ. ದರೋಡೆಕೋರರ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ದೇವಸ್ಥಾನವು ದೇವಸ್ಥಾನ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ದೇವಸ್ಥಾನಕ್ಕೆ ಕಟ್ಟುನಿಟ್ಟಾಎ ಸುರಕ್ಷಾ ವ್ಯವಸ್ಥೆ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳ ಅಭಾವದಿಂದ ದರೋಡೆಕೋರರ ಬಗ್ಗೆ ಮಾಹಿತಿ ದೊರೆಯಲು ಸಾಧ್ಯವಾಗಿಲ್ಲ. ಘಟನೆಯ ನಂತರ ಪೊಲೀಸರು ನಾಕಾಬಂದಿ ಮಾಡಿ ದರೋಡೆಕೋರರನ್ನು ಹುಎಉಕುತ್ತಿದ್ದಾರೆ.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ ನ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸುವುದರಲ್ಲಿ ಆಶ್ಚರ್ಯವೇನು ?