ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕನ ಬಂಧನ

ದೇವಸ್ಥಾನದ ಹಣ ಲೂಟಿ ಮಾಡಿ ಜಿಹಾದಿಗಳಿಗೆ ಪೂರೈಸುವ ಜಿಹಾದಿಗಳ ಷಡ್ಯಂತ್ರ ಬಹಿರಂಗ !

ತಿರುವನಂತಪುರಂ – ರಾಷ್ಟ್ರೀಯ ತನಿಖಾ ದಳದಿಂದ (‘ಎನ್.ಐ.ಎ.’ಯು) ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಂಘಟನೆಯ ಒಂದು ನೆಲೆ ನಾಶಗೊಳಿಸಿ ನಬಿಲ್ ಅಹಮದ್ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ. ಟೆಲಿಗ್ರಾಂ ಮಾಧ್ಯಮದಿಂದ ಅವನು ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ಗಾಗಿ ಭಯೋತ್ಪಾದಕರನ್ನು ಸೇರಿಸುವ ಕೆಲಸ ಮಾಡುತ್ತಿದ್ದನು. ಅದಕ್ಕಾಗಿ ಅವನು ‘ಪೆಟ್ ಲವರ್ಸ್’ ಹೆಸರಿನ ಒಂದು ಗುಂಪು ಕಟ್ಟಿಕೊಂಡಿದ್ದನು. ಭಯೋತ್ಪಾದಕರಿಗೆ ಹಣ ಪೂರೈಕೆಗಾಗಿ ಅವನು ತ್ರಿಶೂರ್ ಮತ್ತು ಪಲಕ್ಕಡ್ ಈ ಜಿಲ್ಲೆಯಲ್ಲಿನ ದೇವಸ್ಥಾನಗಳ ಲೂಟಿ ಮಾಡುವ ಯೋಜನೆ ರೂಪಿಸಿದ್ದನು. ನಬೀಲ್ ಅಹ್ಮದ್ ಕತಾರದಲ್ಲಿನ ‘ಇಸ್ಲಾಮಿಕ್ ಸ್ಟೇಟ್’ ಭಯೋತ್ಪಾದಕರ ಸಂಪರ್ಕದಲ್ಲಿದ್ದನು. ಅವನು ಭಯೋತ್ಪಾದಕರ ಸಹಾಯದಿಂದ ಕೇರಳದಲ್ಲಿ ಭಯೋತ್ಪಾದಕ ಜಾಲ ನಿರ್ಮಿಸುವುದಕ್ಕಾಗಿ ಅವನ ಎಲ್ಲಾ ಶಕ್ತಿ ಪಣಕಿಟ್ಟಿದ್ದನು. ಈ ಪ್ರಕರಣದಲ್ಲಿ ಇನ್ನೊಬ್ಬನನ್ನು ಬಂಧಿಸಲಾಗಿದೆ, ಎಂದು ‘ಎನ್.ಐ.ಎ’ ಹೇಳಿದೆ. ‘ಎನ್.ಐ.ಎ.’ ಯು ಈ ಹಿಂದೆ ಇಸ್ಲಾಮಿಕ್ ಸ್ಟೇಟ್ ನಲ್ಲಿ ಸಹಭಾಗಿಯಾಗಲು ಹಣ ಲೂಟಿಯ ಪ್ರಕರಣದಲ್ಲಿ ತ್ರಿಶೂರದ ನಿವಾಸಿ ಆಶ್ರಫ್ ಇವನನ್ನು ಬಂಧಿಸಿದ್ದರು. ಅವನ ಗುಂಪು ಕೇರಳದಲ್ಲಿ ಚಿನ್ನದ ಕಳ್ಳ ಸಾಗಾಣಿಕೆಯಲ್ಲಿ ಸಹಭಾಗಿ ಆಗಿರುವುದು ಕಂಡುಬಂದಿತ್ತು.

ಸಂಪಾದಕೀಯ ನಿಲುವು

ಇಲ್ಲಿಯವರೆಗೆ ಜಿಹಾದಿಗಳನ್ನು ತಡೆಯದ ಕೇರಳ ಸರಕಾರ ಅಧಿಕಾರದಲ್ಲಿ ಇರುವ ಯೋಗ್ಯತೆ ಇದೆಯೇ ? ಜಿಹಾದಿಗಳ ಬಂದೋಬಸ್ತ್ ಮಾಡುವುದಕ್ಕಾಗಿ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಮುಂದೆ ಇಟ್ಟುಕೊಂಡು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !