
‘ನನಗೆ ರಾಮನಾಥಿ (ಗೋವಾ)ಯಲ್ಲಿನ ಸನಾತನ ಆಶ್ರಮದಲ್ಲಿ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನ ಪ್ರಕ್ರಿಯೆಯನ್ನು ಕಲಿಯುವ ಅವಕಾಶ ಸಿಕ್ಕಿತು. ಆಗ ನನಗೆ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರ್ ಇವರು ವ್ಯಷ್ಟಿ ಸಾಧನೆಯ ವರದಿಯಲ್ಲಿ ನೀಡಿದ ದೃಷ್ಟಿಕೋನವನ್ನು ಮುಂದಿಡುತ್ತಿದ್ದೇನೆ.

೧. ‘ಅಂತರ್ಮುಖತೆ, ಎಂದರೆ ಸತತ ಕಲಿಯುತ್ತಾ ಇರುವುದು !
೨. ಸಮಷ್ಟಿಯಲ್ಲಿರುವುದರ ಲಾಭ
ಅ. ಸಮಷ್ಟಿ ಎಂಬುದು ಕನ್ನಡಿಯಾಗಿದ್ದು ನಮ್ಮ ಮನಸ್ಸಿನ ಸ್ಥಿತಿಯು ಸಮಷ್ಟಿಯ ಮೂಲಕ ಸ್ಪಷ್ಟವಾಗಿ ಅರಿವಾಗುತ್ತದೆ.
ಆ. ಸಮಷ್ಟಿಯೆಂದರೆ ನಮ್ಮ ಅಂತರ್ಮನಸ್ಸು !
ಇ. ಸಮಷ್ಟಿಯು ನಮ್ಮಲ್ಲಿನ ಸ್ವಭಾವದೋಷ ಹಾಗೂ ಅಹಂನ ಮಜಲುಗಳನ್ನು ತೋರಿಸಿದರೆ ನಾವು ವಿಚಲಿತರಾಗಬಾರದು. ನಾವು
ಪರಿಸ್ಥಿತಿಯನ್ನು ಸ್ವೀಕರಿಸಬೇಕು ಹಾಗೂ ಅದರಿಂದ ಕಲಿಯಬೇಕು.
ಈ. ‘ನಮ್ಮ ಸಾಧನೆ ಯೋಗ್ಯ ರೀತಿಯಲ್ಲಿ ನಡೆಯಬೇಕೆಂದು ಈಶ್ವರನು ಇದೆಲ್ಲವನ್ನೂ ತೋರಿಸಿದ್ದಾನೆ. ಇದನ್ನು ಗಾಂಭೀರ್ಯ ದಿಂದ ಸ್ವೀಕರಿಸಿ ಕೃತಜ್ಞತಾಭಾವದಲ್ಲಿರುವುದು’, ಮೊದಲ ಹಂತದ ಅಂತರ್ಮುಖತೆ !
ಉ. ನಾವು ಪ್ರಾಮಾಣಿಕವಾಗಿ ಅಂತರ್ಮನಸ್ಸಿನಿಂದ ಚಿಂತನೆ ಮಾಡಿದರೆ ನಮ್ಮಿಂದ ಚೈತನ್ಯವು ಗ್ರಹಿಸಲ್ಪಟ್ಟು ಮನಃಪೂರ್ವಕವಾಗಿ ನಮ್ಮಿಂದ ವ್ಯಷ್ಟಿ ಸಾಧನೆಯ ಪ್ರಯತ್ನಗಳಾಗುತ್ತವೆ.
೩. ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆಯಾಗಿದೆ !
ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆಯಾಗಿದೆ. ಅದಕ್ಕೆ ಶಾರೀರಿಕ ಕ್ಷಮತೆಯೊಂದಿಗೆ ಯಾವುದೇ ಸಂಬಂಧವಿಲ್ಲ. ‘ಶಾರೀರಿಕ ಅಡಚಣೆಯಿಂದ ವ್ಯಷ್ಟಿ ಸಾಧನೆ ಆಗಿಲ್ಲ’, ಎಂದು ಹೇಳುವುದೆಂದರೆ ಸಹಾನುಭೂತಿಯನ್ನು ಅಪೇಕ್ಷಿಸುವುದು, ಮತ್ತು ರಿಯಾಯಿತಿ ತೆಗೆದುಕೊಳ್ಳುವುದು ಎಂದಾಗಿದೆ. ಯಾವುದೇ ಅಡಚಣೆ ಇದ್ದರೂ ಅದನ್ನು ವ್ಯಷ್ಟಿ ಸಾಧನೆಯ ವರದಿಯಲ್ಲಿ ಹೇಳಿ ಅಲ್ಲಿ ಹೇಳಿದಂತಹ ಪ್ರಯತ್ನಗಳನ್ನು ಮಾಡಬೇಕು.’
– ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨). ಮಂಗಳೂರು. (೧೫.೪.೨೦೨೨)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !