ಹಿಂದೂ ಸಂಸ್ಕೃತಿಯ ಮಹತ್ವಪೂರ್ಣ ಅಂಗವಾಗಿರುವ ಯಜ್ಞಯಾಗಗಳ ಮಹತ್ವವನ್ನು ಎತ್ತಿ ತೋರಿಸುವ ಸಂಶೋಧನೆ !

ಯಜ್ಞಕುಂಡದ ಸಾಂದರ್ಭಿಕ ಚಿತ್ರ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

‘ಮಹರ್ಷಿಗಳ ಆಜ್ಞೆಯಂತೆ ಮೇ ೨೦೨೨ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಶ್ರೀ ಸುದರ್ಶನಯಾಗ (೧೯.೫.೨೦೨೨), ಮೃತ್ಯುಂಜಯಯಾಗ (೨೦.೫.೨೦೨೨), ಶ್ರೀ ಬಗಲಾಮುಖಿಯಾಗ (೨೪.೫.೨೦೨೨), ಶ್ರೀ.ಪ್ರತ್ಯಂಗಿರಾಯಾಗ (೨೫.೫.೨೦೨೨) ಮತ್ತು ಶ್ರೀ ಚಂಡಿ ಯಾಗವನ್ನು (೨೬ ಮತ್ತು ೨೭.೫.೨೦೨೨) ಮಾಡಲಾಯಿತು. ಹಾಗೆಯೇ ೨೦.೫.೨೦೨೨ ರಂದು ಸಂತರ (ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ)ಕೈಯಿಂದ ಶ್ರೀ ಕಾರ್ತಿಕೇಯ ಮತ್ತು ಶ್ರೀ.ಸಿದ್ಧಿವಿನಾಯಕ ಈ ದೇವತೆಗಳ ಮೂರ್ತಿಗಳಿಗೆ ಅಭಿಷೇಕವನ್ನು ಮಾಡಲಾಯಿತು.

ಸೌ. ಮಧುರಾ ಧನಂಜಯ ಕರ್ವೆ

ಸನಾತನದ ಆಶ್ರಮದಲ್ಲಾದ ಯಾಗಗಳ ಸಂದರ್ಭದಲ್ಲಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಸಂಶೋಧನೆ ಮಾಡಲಾಯಿತು. ಅದನ್ನು ಮುಂದೆ ಕೊಡಲಾಗಿದೆ.

‘ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಿಸುತ್ತಿರುವ ಶ್ರೀ. ಆಶಿಷ ಸಾವಂತ

೧ ಆ. ಯಾಗದ ನಂತರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರದ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಗುವುದು : ಮಹರ್ಷಿಗಳ ಆಜ್ಞೆಯಿಂದ ಯಾಗದಲ್ಲಿನ ಪೂಜೆಯ ರಚನೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರವನ್ನು ಇಡಲಾಯಿತು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀಗುರುಗಳ ಛಾಯಾಚಿತ್ರಕ್ಕೆ ಭಾವಪೂರ್ಣ ಪೂಜೆಯನ್ನು ಮಾಡಿರುವುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರದ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಗಿರುವುದು ಕಂಡುಬಂದಿತು.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೩.೪.೨೦೨೩)

ವಿ- ಅಂಚೆ : [email protected]

ವಾಚಕರಿಗೆ ಸೂಚನೆ : ‘ಯು.ಎ.ಎಸ್. ಈ ಉಪಕರಣದಿಂದ ಘಟಕಗಳಲ್ಲಿನ ಸಕಾರಾತ್ಮಕ ಊರ್ಜೆಯನ್ನು ಅಳೆಯುವಾಗ ಕೆಲವು ಘಟಕಗಳ ಪ್ರಭಾವಲಯ ೨ ಸಾವಿರ ೩೩೭ ಮೀಟರಗಳಿಗಿಂತಲೂ ಹೆಚ್ಚಿತ್ತು; ಆದರೆ ಅದನ್ನು ನಿಖರವಾಗಿ ಅಳೆಯಲು ಸ್ಥಳಾವಕಾಶದ ಕೊರತೆಯಿಂದ ಸಾಧ್ಯವಿರಲಿಲ್ಲ. ಆದ್ದರಿಂದ ಇಂತಹ ಘಟಕಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವನ್ನು ನಿಖರವಾಗಿ ಅಳೆಯಲು ‘ಲೋಲಕವನ್ನು ಬಳಸಲಾಯಿತು. ಇದನ್ನು ಗಮನದಲ್ಲಿ ತೆಗೆದುಕೊಂಡು ಕೋಷ್ಟಕಗಳನ್ನು ಓದಬೇಕು.