ಶಾಹಜಹಾನಪುರ (ಉತ್ತರ ಪ್ರದೇಶ) ಇಲ್ಲಿಯ ಹನುಮಾನ ದೇವಸ್ಥಾನದ ಬಳಿ ದುಷ್ಕರ್ಮಿಗಳಿಂದ ಗೋಮಾಂಸ ಎಸೆತ !

  • ಹಿಂದುತ್ವನಿಷ್ಠರಿಂದ ರಸ್ತೆ ತಡೆ ಆಂದೋಲನ !

  • ಪೊಲೀಸರ ಬಂದೋಬಸ್ತ್ ಇರುವಾಗಲೂ ನಡೆದ ಘಟನೆ !

ಶಾಹಜಹಾಪುರ (ಉತ್ತರಪ್ರದೇಶ) – ಇಲ್ಲಿಯ ಮೊಹಲ್ಲ ಕಚ್ಚಾ ಕಟರಾ ತಿಠಾ ಇಲ್ಲಿಯ ಹನುಮಾನ ದೇವಸ್ಥಾನದ ಬಳಿ ಒಂದು ಗೋಣಿ ಚೀಲದಲ್ಲಿ ಗೋಮಾಂಸಾ ದೊರೆತಿದೆ. ಹಿಂದುತ್ವನಿಷ್ಠ ಸಂಘಟನೆಗಳಿಗೆ ಇದರ ಮಾಹಿತಿ ದೊರೆತ ನಂತರ ಅವರು ಅಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು ಹಾಗೂ ಈ ಪ್ರಕರಣದಲ್ಲಿ ದೂರು ದಾಖಲಿಸಿ ಆರೋಪಿಗಳನ್ನು ತಕ್ಷಣ ಬಂಧಿಸಲು ಒತ್ತಾಯಿಸಲಾಗಿದೆ. ವಿಶೇಷವೆಂದರೆ ಈ ತೀಠಾದ ಸ್ಥಳದಲ್ಲಿ ಯಾವಾಗಲೂ ಪೊಲೀಸ್ ಬಂದೋಬಸ್ ಇರುತ್ತದೆ. ಆದರೂ ಕೂಡ ದುಷ್ಕರ್ಮಿಗಳು ಗೋಮಾಂಸ ಎಸೆದಿರುವುdu ಆಶ್ಚರ್ಯ ವ್ಯಕ್ತಪಡಿಸಲಾಗುತ್ತಿದೆ. ಹಿಂದುತ್ವನಿಷ್ಠ ಸಂಘಟನೆಯ ಪದಾಧಿಕಾರಿ ರಾಜೇಶ್ ಅವಸ್ಥಿ ಇವರು, ಇಂತಹ ಘಟನೆಗಳು ಸಹಿಸಲಾಗದು ಪೊಲೀಸರು ಈ ಪ್ರಕರಣದಲ್ಲಿ ಬೇಜವಬ್ದಾರಿತನ ತೋರಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ !
ಬೇಜವಾಬ್ದಾರಿತನದಿಂದ ವರ್ತಿಸುವ ಪೊಲೀಸರ ಮೇಲೆ ಕೂಡ ಕ್ರಮ ಕೈಗೊಳ್ಳುವುದು ಅವಶ್ಯಕ !