ಗುರುಗೀತೆಯಲ್ಲಿ ವರ್ಣಿಸಿರುವ ಶ್ರೀ ಗುರುಮಹಾತ್ಮೆ ಹಾಗೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ವಿವರಿಸಿದ ಅದರ ಭಾವಾರ್ಥ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಸ್ಮರಣೆ, ‘ಸ್ತವನ, ‘ನಮನ ಹಾಗೂ ‘ಭಜನೆಗಳೆ ಸಾಧಕರ ಉದ್ಧಾರದ ಏಕೈಕ ಮಾರ್ಗ !

‘ಶ್ರೀಮತ್ಪರಬ್ರಹ್ಮ ಗುರುಮ್ ಸ್ಮರಾಮಿ |

ಶ್ರೀಮತ್ಪರಬ್ರಹ್ಮ ಗುರುಮ್  ವದಾಮಿ | ಶ್ರೀಮತ್ಪರಬ್ರಹ್ಮ ಗುರುಮ್ ನಮಾಮಿ |

ಶ್ರೀಮತ್ಪರಬ್ರಹ್ಮ ಗುರುಮ್ ಭಜಾಮಿ || – ಗುರುಗೀತೆ, ಶ್ಲೋಕ ೮೮

ಅರ್ಥ : ನಾನು ಶ್ರೀಮತ್ ಪರಬ್ರಹ್ಮ ಗುರುಗಳನ್ನು ಸ್ಮರಿಸುತ್ತೇನೆ. ನಾನು ಶ್ರೀಮತ್ ಪರಬ್ರಹ್ಮ ಗುರುಗಳ ಸ್ತವನ ಮಾಡುತ್ತೇನೆ. ನಾನು ಶ್ರೀಮತ್ ಪರಬ್ರಹ್ಮ ಗುರುಗಳಿಗೆ ನಮಿಸುತ್ತೇನೆ ಹಾಗೂ ನಾನು ಶ್ರೀಮತ್ ಪರಬ್ರಹ್ಮ ಗುರುಗಳನ್ನು ಭಜಿಸುತ್ತೇನೆ.

ಭಾವಾರ್ಥ : ಸನಾತನದ ಸಾಧಕರ ಜೀವನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವತರಿಸಿದರು ಹಾಗೂ ಅವರೇ ಸಾಧಕರ ಸರ್ವಸ್ವವಾದರು; ಆದ್ದರಿಂದ ಸಾಧಕರೆ, ಶ್ರೀಮತ್ ಪರಬ್ರಹ್ಮಸ್ವರೂಪಿ ಗುರುದೇವರನ್ನೇ ಅಖಂಡವಾಗಿ ಸ್ಮರಿಸೋಣ ! ಶ್ರೀಮತ್ ಪರಬ್ರಹ್ಮ ಸ್ವರೂಪಿ ಗುರುದೇವರ ದೈವೀ ಅವತಾರಿ ಕಾರ್ಯವನ್ನು ಹಾಗೂ ವಿವಿಧ ಗುಣಗಳನ್ನು ಅಖಂಡ ಸ್ತವನ ಮಾಡೋಣ ! ಶ್ರೀಮತ್ ಪರಬ್ರಹ್ಮಸ್ವರೂಪಿ ಗುರುದೇವರ ದೈವೀ ಅವತಾರಿ ಸ್ವರೂಪಕ್ಕೆ ಪ್ರತಿ ಕ್ಷಣ ನಮಿಸೋಣ ! ಶ್ರೀಮತ್ ಪರಬ್ರಹ್ಮಸ್ವರೂಪಿ ಗುರುದೇವರು ಕಲಿಸಿದ ಸಾಧನೆಯನ್ನು ಮಾಡಿ ಆ ಸಾಧನೆಯ ಪ್ರಯತ್ನದ ಮೂಲಕ ಅವರನ್ನು ಭಜಿಸೋಣ. ಇದೇ ನಮ್ಮ ಉದ್ಧಾರದ ಏಕೈಕ ಅಮೂಲ್ಯ ಮಾರ್ಗವಾಗಿದೆ.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೧.೫.೨೦೨೩)