ನಿಜವಾದ ಗುರುಗಳ ಲಕ್ಷಣಗಳು

(ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು

‘ಯಾರು ಸತ್ಕುಲದಲ್ಲಿ ಜನಿಸಿದ್ದಾರೆ, ಸದಾಚಾರಿಯಾಗಿದ್ದಾರೆ, ಶುದ್ಧ ಭಾವನೆಗಳನ್ನು ಹೊಂದಿದ್ದಾರೆ, ಇಂದ್ರಿಯಗಳನ್ನು ತಮ್ಮ ಹತೋಟಿಯಲ್ಲಿರಿಸಿದ್ದಾರೆ, ಯಾರು ಎಲ್ಲಾ ಶಾಸ್ತ್ರಗಳ ಸಾರವನ್ನು ಅರಿತಿದ್ದಾರೆ, ಪರೋಪಕಾರಿಯಾಗಿದ್ದಾರೆ. ಸದಾ ಭಗವಂತನ ಅನು ಸಂಧಾನದಲ್ಲಿರುತ್ತಾರೆ, ಯಾರ ವಾಣಿ ಚೈತನ್ಯಮಯವಾಗಿದೆ, ಯಾರಲ್ಲಿ ತೇಜಸ್ಸು ಮತ್ತು ಆಕರ್ಷಣಶಕ್ತಿಯಿದೆ, ಯಾರು ಶಾಂತವಾಗಿರುತ್ತಾರೋ; ಯಾರು ವೇದ, ವೇದಾರ್ಥಗಳನ್ನು ತಿಳಿದಿದ್ದಾರೆ; ಯೋಗಮಾರ್ಗದಲ್ಲಿ ಯಾರ ಪ್ರಗತಿಯಿದೆ. ಯಾರ ಹೃದಯವು ಈಶ್ವರನಂತಿದೆ (ಅವರ ಕಾರ್ಯಗಳು ಈಶ್ವರನ ಇಚ್ಛೆಯಿಂದ ಆಗುತ್ತವೆ) ಇಂತಹ ಗುಣಗಳು ಯಾರಲ್ಲಿವೆಯೋ ಅವರೇ ಶಾಸ್ತ್ರಸಮ್ಮತ ಗುರುಗಳಾಗಲು ಅರ್ಹರಾಗಿದ್ದಾರೆ. ಅಂತಹ ಗುರುಗಳ ದೀಕ್ಷೆ ಪಡೆದ ಶಿಷ್ಯನ ಮಾತ್ರವಲ್ಲದೆ ಇಡೀ ಜಗತ್ತಿನ ಹಿತವನ್ನುಂಟುಬಲ್ಲರು. (ಸಂದರ್ಭ : ಶಾರದಾತಿಲಕ)  – ಪರಾತ್ಪರ ಗುರು (ದಿ.) ಪರಶರಾಮ ಪಾಂಡೆ ಮಹಾರಾಜರು (೩೦.೬.೨೦೧೮)