ಇಡೀ ದೇಶವನ್ನು ಹಲಾಲ್‌ ಮುಕ್ತ ಮಾಡುವುದು ಧ್ಯೆಯವಾಗಿರಬೇಕು ! – ಶ್ರೀ. ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಮೋಹನ ಗೌಡ

ರಾಮನಾಥ ದೇವಸ್ಥಾನ – ಹಲಾಲ್ ಅರ್ಥವ್ಯವಸ್ಥೆ ದೇಶದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ. ಹಲಾಲ್ ಇದು ಮಾಂಸಕ್ಕೆ ಸೀಮಿತವಾಗಿರದೇ ಪ್ರತಿಯೊಂದು ಉತ್ಪನ್ನ ಅಂದರೆ, ಸಸ್ಯಹಾರ ಉತ್ಪನ್ನಗಳು, ಇಲೆಕ್ಟ್ರಾನಿಕ್‌ ವಸ್ತುಗಳು, ಔಷಧಿಗಳು, ಆಸ್ಪತ್ರೆಗಳು ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರವೇಶಿಸಿದೆ. ಇವತ್ತು ಹಲಾಲ್‌ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಇಸ್ಲಾಮಿಕ್ ಸಂಘಟನೆಗಳು ಸಂಗ್ರಹಿಸುತ್ತಿವೆ. ನಮ್ಮ ದೇಶದಲ್ಲಿ ಎಫ್‌ಎಸ್‌ಎಸ್‌ಎಐ ಮತ್ತು ಎಫ್‌ಡಿಐ.ದಂತಹ ಕೇಂದ್ರ ಸರಕಾರದ ಪ್ರಮಾಣಿಕೃತ ಸಂಸ್ಥೆಗಳಿರುವಾಗಲೂ ಭಾರತದಲ್ಲಿ ಕಾನೂನುಬಾಹಿರವಾಗಿ ಹಲಾಲ್ ಪ್ರಮಾಣಪತ್ರವನ್ನು ಮುಸಲ್ಮಾನ ಸಂಘಟನೆಗಳು ನೀಡುತ್ತಿವೆ ಇದರಿಂದ ದೊರೆತ ಹಣವನ್ನು ಭಯೋತ್ಪಾದಕರಿಗೆ ಕಾನೂನು ಸಹಾಯಕ್ಕೆ ಬಳಕೆಯಾಗುತ್ತಿರುವುದು ದೇಶಕ್ಕೆ ಅಪಾಯಕಾರಿಯಾಗಿದೆ. ಸಮಸ್ತ ಹಿಂದೂ ಸಂಘಟನೆಗಳು ಹಲಾಲ್ ಅರ್ಥವ್ಯಸಸ್ಥೆ ವಿರುದ್ಧ ಹೋರಾಟ ಮಾಡಬೇಕಾಗಿದೆ. ಕಳೆದ ವರ್ಷ ಹಲಾಲ್ ಸಕ್ತಿವಿರೋಧಿ ಸಮಿತಿಯನ್ನು ರಚಿಸಿ ಅನೇಕ ಜನಜಾಗೃತಿ ಕಾರ್ಯಗಳಾದ ವ್ಯಾಖ್ಯಾನಗಳಾದಿ ಮಾಡಲಾಯಿತು. ಕರ್ನಾಟಕ ರಾಜ್ಯದಲ್ಲಿ ಹಲಾಲ್‌ಮುಕ್ತ ದೀಪಾವಳಿ, ಹಲಾಲ್‌ಮುಕ್ತ ಯುಗಾದಿಯ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದೆವು ಇಷ್ಟಕ್ಕೇ ಸೀಮಿತವಾಗಿರದೇ ಇಡೀ ದೇಶವನ್ನು ಹಲಾಲ್‌ಮುಕ್ತ ಮಾಡುವುದು ನಮ್ಮ ಧ್ಯೆಯವಾಗಿರಬೇಕು ಎಂದು ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರು ಹೇಳಿದರು. ಅವರು ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಮಾತನಾಡುತ್ತಿದ್ದರು.