
ರಾಮನಾಥಿ, ೧೯ ಜೂನ್ (ವಾರ್ತೆ.) – ಭಾರತೀಯ ಕಾನೂನು ಆಯೋಗದ (‘ಲಾ ಕಮಿಶನ್’ನ) ಒಂದು ವರದಿಗನುಸಾರ ೨೦೦೦ ದಿಂದ ೨೦೧೫ ಈ ಕಾಲಾವಧಿಯಲ್ಲಿ ದೇಶದಲ್ಲಿನ ಸೆಷನ್ಸ್ ನ್ಯಾಯಾಲಯಗಳು ಒಟ್ಟು ೧ ಸಾವಿರದ ೭೯೦ ಜನರಿಗೆ ಗಲ್ಲು ಶಿಕ್ಷೆಯನ್ನು ನೀಡಿದವು. ಅವುಗಳಲ್ಲಿನ ೧ ಸಾವಿರದ ೫೧೨ ಪ್ರಕರಣಗಳು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳವರೆಗೆ ಬಂದವು. ಅದರಲ್ಲಿ ಕೇವಲ ಶೇ. ೪.೩ ಜನರಿಗೆ ಗಲ್ಲಿಗೇರಿಸಲಾಯಿತು. ಇತರರು ನಿರಪರಾದಿಗಳೆಂದು ಬಿಡುಗಡೆಯಾದರು. ಹಾಗಾದರೆ ಸೆಷನ್ಸ್ ನ್ಯಾಯಾಲಯಗಳ ನ್ಯಾಯಾಧೀಶರು ತಪ್ಪು ಮಾಡಿದರು ಎಂದು ಹೇಳಬೇಕೆ ? ಯಾರಾದರೊಬ್ಬ ಸರಕಾರಿ ಅಧಿಕಾರಿಗಳು ತಪ್ಪು ಮಾಡಿದರೆ ವಿಚಾರಣೆ ಮಾಡಲಾಗುತ್ತದೆ, ಹಾಗಾದರೆ ನ್ಯಾಯಾಧೀಶರ ತಪ್ಪು ನಿರ್ಣಯದ ಬಗ್ಗೆ ಏನು ಹೇಳುವುದು ? ಅಲಾಹಾಬಾದ್ ಉಚ್ಚ ನ್ಯಾಯಾಲಯವು ೧೯೭೬ ರಲ್ಲಿ ೪ ಜನರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ಅವರಲ್ಲಿನ ಒಬ್ಬ ಪೊಲೀಸ್ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟರು, ಒಬ್ಬನನ್ನು ಗಲ್ಲಿಗೇರಿಸಲಾಯಿತು, ಮತ್ತು ಇತರ ಇಬ್ಬರಿಗೆ ಕ್ಷಮಾದಾನ ಅರ್ಜಿಯ ಮೇರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಒಂದೇ ರೀತಿಯ ಅಪರಾಧವಿದ್ದರೂ ಅಪರಾದಿಗಳಿಗೆ ಬೇರೆ ಬೇರೆ ಶಿಕ್ಷೆ ಹೇಗಾಯಿತು ? ಇದರ ಹಿಂದೆ ಕರ್ಮಫಲಸಿದ್ಧಾಂತ ಇದೆ ಏನು ? ಒಬ್ಬನಿಂದ ಬಲಾತ್ಕಾರದಂತಹ ಅಪರಾಧವಾದಾಗ, ಅದರ ಹಿಂದೆ ‘ಕಾಮ’ ಮತ್ತು ಕ್ರೋಧ’ ಈ ಷಡ್ರಿಪುಗಳಲ್ಲಿನ ದೋಷಗಳ ಸಮಾವೇಶವಿರುತ್ತದೆ. ಈ ಬಗ್ಗೆ ಅಧ್ಯಯನ ಬೇಡವೇ ? ವಿವಿಧ ಅಪರಾಧಗಳ ಖಟ್ಲೆಗಳನ್ನು ನಡೆಸಲು ವಿಶೇಷ ನ್ಯಾಯಾಲಯಗಳ ಸ್ಥಾಪನೆಯನ್ನು ಮಾಡಲಾಗುತ್ತದೆ, ಹೊಸ ಹೊಸ ಕಾನೂನುಗಳನ್ನು ಮಾಡಲಾಗುತ್ತದೆ; ಆದರೆ ಈ ಅಪರಾಧಗಳು ಯಾವ ಷಡ್ರಿಪುಗಳಿಂದಾಗಿ ಆಗುತ್ತವೆ, ಎಂಬುದರ ಬಗ್ಗೆ ಅಧ್ಯಯನ ಯಾವಾಗ ? ಕಣ್ಣುಗಳ ಮೇಲೆ ಪಟ್ಟಿ ಕಟ್ಟಿಕೊಂಡಿರುವ ನ್ಯಾಯದೇವತೆಯ ಮೂರ್ತಿ ಕರ್ಮಫಲನ್ಯಾಯ ಸಿದ್ಧಾಂತವನ್ನು ಒಪ್ಪಿಕೊಳ್ಳದ ಪಾಶ್ಚಾತ್ಯ ಸಂಕಲ್ಪನೆಯ ಆಧಾರದ ಮೇಲಿದೆ. ಯಾವುದಾದರೊಂದು ಖಟ್ಲೆಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಅಮೇರಿಕಾ, ಇಂಗ್ಲಡ್ ಈ ದೇಶಗಳಲ್ಲಿನ ತೀರ್ಪುಗಳ ಅಧ್ಯಯನ ಮಾಡುತ್ತದೆ; ಆದರೆ ನಮ್ಮ ದೇಶದ ಕರ್ಮಫಲ ಸಿದ್ಧಾಂತದ ಅಧ್ಯಯನ ಏಕೆ ಮಾಡುವುದಿಲ್ಲ ? ನ್ಯಾಯವ್ಯವಸ್ಥೆಯಲ್ಲಿ ಕರ್ಮಫಲನ್ಯಾಯ ಸಿದ್ಧಾಂತಗಳ ಸಮಾವೇಶ ಅತ್ಯಾವಶ್ಯಕವಾಗಿದೆ. ಎಂದು ಹಿಂದು ವಿಧಿಜ್ಞ ಪರಿಷದ್ನ ಅಧ್ಯಕ್ಷ ವೀರೇಂದ್ರ ಇಚಲಕರಂಜೀಕರ ಇವರು ಹೇಳಿದರು. ಅವರು ಇಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನ (೧೯.೬.೨೦೨೩ ರಂದು) ಉಪಸ್ಥಿತರಿಗೆ ಸಂಬೋಧಿಸುತ್ತಿದ್ದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara