
ನ್ಯೂಯಾರ್ಕ (ಅಮೇರಿಕಾ) – ಓಡಿಸ್ಸಾದಲ್ಲಿ ನಡೆದ ಭೀಕರ ರೇಲ್ವೆ ಅಪಘಾತದ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮುಖಂಡ ರಾಹುಲ ಗಾಂಧಿಯವರು ಅಮೇರಿಕಾದಿಂದಲೇ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ. ನ್ಯೂಯಾರ್ಕನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರ ಎಂದಿಗೂ ವಾಸ್ತವವನ್ನು ಸ್ವೀಕರಿಸುವುದಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿರುವಾಗ ಇಂತಹುದೇ ಒಂದು ರೇಲ್ವೆ ಅಪಘಾತವಾಗಿತ್ತು. ಆಗ ಕಾಂಗ್ರೆಸ್ ಆಂಗ್ಲರ ತಪ್ಪಿನಿಂದ ಆ ಅಪಘಾತವಾಗಿತ್ತು ಎಂದು ಹೇಳಿರಲಿಲ್ಲ. ನಾವು ನಮ್ಮ ಜವಾಬ್ದಾರಿಯನ್ನು ಸ್ವೀಕರಿಸಿ ಆಗಿನ ರೇಲ್ವೆ ಸಚಿವರು ತ್ಯಾಗಪತ್ರ ನೀಡುವಂತೆ ಮಾಡಿದ್ದೆವು. ಭಾಜಪ ಸ್ಪಷ್ಟೀಕರಣ ನೀಡುತ್ತಿದ್ದು, ವಾಸ್ತವವನ್ನು ಸ್ವೀಕರಿಸುವುದಿಲ್ಲ. ಭಾಜಪಕ್ಕೆ ದೋಷಾರೋಪ ಮಾಡುವ ಮತ್ತು ತಪ್ಪುಗಳನ್ನು ಸ್ವೀಕರಿಸದಿರುವ ರೂಢಿಯಿದೆಯೆಂದು ಹೇಳಿದರು.
270 ಕ್ಕಿಂತಲೂ ಹೆಚ್ಚು ಜನರು ಸಾವನ್ನಪಿರುವುದು ಖೇದಕಾರಿಯಾಗಿದೆ ಅಪಘಾತದ ಜವಾಬ್ದಾರಿಯನ್ನು ಸ್ವೀಕರಿಸುವುದರಿಂದ ಮೋದಿ ಸರಕಾರ ಜಾರಿಕೊಳ್ಳಲು ಸಾಧ್ಯವಿಲ್ಲ. ಪ್ರಧಾನಮಂತ್ರಿಗಳು ತಕ್ಷಣವೇ ಇದರ ವಿಚಾರಣೆಯನ್ನು ನಡೆಸಬೇಕು ಮತ್ತು ರೇಲ್ವೆ ಸಚಿವರು ತ್ಯಾಗಪತ್ರ ನೀಡಬೇಕು ಎಂದು ರಾಹುಲ ಗಾಂಧಿಯವರು ಇತ್ತೀಚೆಗೆ ಟ್ವೀಟ ಮಾಡಿದ್ದರು.
While addressing the Indian diaspora in #NewYork, Rahul #Gandhi slammed the Central government over the Odisha train accident and said ask the BJP anything, they will look back and pass the blame.#Congress #NewYork #RahulGandhiInUSA #OdishaTrainAccident https://t.co/wvNmBIueCR
— ABP LIVE (@abplive) June 5, 2023
ಸಂಪಾದಕರ ನಿಲುವುಯಾವುದೇ ವಿಷಯದ ಕುರಿತು ರಾಜಕಾರಣ ಮಾಡದಿದ್ದರೆ, ಅವರೆಂತಹ ರಾಜಕಾರಣಿಗಳು ? ಯಾವುದೇ ಸಾಮಾಜಿಕ ಆಘಾತದ ಪ್ರಸಂಗದಲ್ಲಿ ಜನತೆಗೆ ಒಗ್ಗಟ್ಟನ್ನು ಕಾಯ್ದುಕೊಳ್ಳುವಂತೆ ಕರೆ ನೀಡುವ ರಾಜಕಾರಣಿಗಳು ಸ್ವತಃ ಮಾತ್ರ ಅದರ ಪಾಲನೆಯನ್ನು ಯಾವತ್ತೂ ಮಾಡುವುದಿಲ್ಲ ಎನ್ನುವುದನ್ನು ಅರಿಯಬೇಕು ! |
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!