ನೋಡಿ ಆ ದಿವ್ಯ ತೇಜ, ಆ ದಿವ್ಯ ಪ್ರಭೆಯನ್ನು |
ಭಕ್ತರೇ ಅವತರಿಸಿದ್ದಾನೆ ನೋಡಿ ಭಗವಂತನನ್ನು |
ಸಂಗ್ರಹಿಸೋಣ ಹೃದಯದಲ್ಲಿ ದಿವ್ಯ ರೂಪವನ್ನು |
ಶ್ರೀಮನ್ನಾರಾಯಣಸ್ವರೂಪ ಗುರುಗಳನ್ನು |
ಕೃತಜ್ಞತೆಯಿಂದ ಜೋಡಿಸೋಣ ಕೈಗಳನ್ನು |
ವಂದಿಸೋಣ ಸುಂದರ ಗುರುಮೂರ್ತಿಯನ್ನು ||
ಶ್ರೀಗುರುಗಳ ಕಲ್ಯಾಣಕಾರಿ ಆ ದೃಷ್ಟಿ |
ಆನಂದಗೊಂಡಿತು ಈ ಸಂಪೂರ್ಣ ಸೃಷ್ಟಿ |
ಸಾಧಕರಿಗಾಯಿತು ಶ್ರೀಗುರುಕೃಪೆಯ ವೃಷ್ಟಿ |
ಲಭಿಸಿತು ಶ್ರೀ ಮಹಾವಿಷ್ಣುವಿನ ಅನುಭೂತಿ |
ದರ್ಶನದಿಂದ ಆಯಿತು ಆಕಾಂಕ್ಷೆಯ ಪೂರ್ತಿ |
ನಮ್ಮಲ್ಲಿ ಹೆಚ್ಚಾಗಲಿ ಸತತ ಶರಣಾಗತಿ ||

ರಥಾರೂಢ ಮಹಾವಿಷ್ಣುವನ್ನು ಗಾಯನ, ವಾದನ ಹಾಗೂ ನೃತ್ಯಗಳ ಮೂಲಕ ಸ್ತುತಿಸುವುದೆಂದರೆ ಬ್ರಹ್ಮೋತ್ಸವ ! ಶ್ರೀವಿಷ್ಣುರೂಪದಲ್ಲಿ ರಥದಲ್ಲಿ ವಿರಾಜಮಾನರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಬ್ರಹ್ಮೋತ್ಸವದ ನಿಮಿತ್ತ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಕಲೆಯ ಮೂಲಕ ಭಾವಾರ್ಪಣೆ ಮಾಡಿದರು. ನೃತ್ಯ, ಗಾಯನ ಹಾಗೂ ವಾದನ ಸೇವೆಯು ಎಷ್ಟು ಭಾವಪೂರ್ಣವಾಯಿತೆಂದರೆ, ಅದರಿಂದ ಉಪಸ್ಥಿತ ಸಾಧಕರಿಗೂ ಭಾವಜಾಗೃತಿಯಾಯಿತು !
೧. ಎಲ್ಲರ ಭಾವಜಾಗೃತಗೊಳಿಸುವ ನೃತ್ಯಸೇವೆ !
‘ಅಚ್ಯುತ್ತಾಷ್ಟಕ್ಕಮ್ ಈ ಶ್ರೀವಿಷ್ಣುಸ್ತುತಿಯ ಹಾಡಿನೊಂದಿಗೆ ೧೨ ಸಾಧಕಿಯರು ಭಾವನೃತ್ಯ ಪ್ರಸ್ತುತಪಡಿಸಿದರು, ಈ ನೃತ್ಯದ ಸಂದರ್ಭದಲ್ಲಿ ಶ್ರೀವಿಷ್ಣುವಿನ ದಶಾವತಾರದಲ್ಲಿನ ರೂಪಗಳನ್ನು ತೋರಿಸುವಾಗಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೨೦೧೮ ರಲ್ಲಿ ನಡೆದ ಜನ್ಮೋತ್ಸವದ ಶೇಷಶಯನ ಶ್ರೀವಿಷ್ಣುರೂಪವನ್ನೂ ಪ್ರಸ್ತುತಪಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ನೃತ್ಯ ಅಭ್ಯಾಸಕಿ ಸೌ. ಸಾವಿತ್ರಿ ವೀರೇಂದ್ರ ಇಚಲಕರಂಜೀಕರ ಇವರು ಈ ನೃತ್ಯದ ಸಂಯೋಜನೆ ಮಾಡಿದ್ದರು.

೨. ಭಗವಂತನನ್ನು ಸ್ತುತಿಸುವ ಗಾಯನಸೇವೆ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಸಮನ್ವಯಕಿ ಸುಶ್ರೀ ತೇಜಲ ಪಾತ್ರಿಕರ (ಸಂಗೀತ ವಿಶಾರದೆ, ಆಧ್ಯಾತ್ಮಿಕ ಮಟ್ಟ ಶೇ. ೬೨) ಸೌ. ಅನಘಾ ಜೋಶಿ (ಬಿ.ಎ. (ಸಂಗೀತ), ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರು ‘ಆತ್ಮಾರಾಮಾ ಆನಂದರಮಣಾ… ಈ ಹಾಡನ್ನು ಪ್ರಸ್ತುತಪಡಿಸಿದರು. ಅವರಿಗೆ ಕು. ಮಯೂರಿ ಆಗಾವಣೆ, ಕು. ರೇಣುಕಾ ಕುಲಕರ್ಣಿ ಹಾಗೂ ಸೌ. ಭಕ್ತಿ ಕುಲಕರ್ಣಿ ಇವರು ಜೊತೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ. ಗಿರಿಜಯ ಪ್ರಭುದೇಸಾಯಿ ಇವರು ತಬಲಾವಾದನ, ಶ್ರೀ. ಮನೋಜ ಸಹಸ್ರಬುದ್ಧೆ (ಆಧ್ಯಾತ್ಮಿಕ ಮಟ್ಟ ಶೇ. ೬೦) ಇವರು ಸಿತಾರವಾದನ ಹಾಗೂ ಶ್ರೀ. ಶೈಲೇಶ ಬೆಹೆರೆ ಇವರು ತಾಳವನ್ನು ನುಡಿಸಿದರು.
೩. ಚಿತ್ತವೃತ್ತಿಯನ್ನು ಜಾಗೃತಗೊಳಿಸುವ ವಾದನಸೇವೆ !


ಶ್ರೀ ಮಹಾವಿಷ್ಣುವಿಗೆ ಮೊರೆಯಿಡುವ ವಾದನ ಸೇವೆ ಮಾಡುವಾಗ ಶ್ರೀ. ಮನೋಜ ಸಹಸ್ರಬುದ್ಧೆ ಇವರು ಸಿತಾರನಲ್ಲಿ ‘ಪೂರ್ವಿರಾಗವನ್ನು ನುಡಿಸಿದರು. ಅವರಿಗೆ ಶ್ರೀ. ಗಿರಿಜಯ ಪ್ರಭುದೇಸಾಯಿ ಇವರು ತಬಲಾದಲ್ಲಿ ಜೊತೆ ನೀಡಿದರು. ‘ಪೂರ್ವಿ ಇದು ಸಾಯಂಕಾಲದ ಪ್ರಹರದರಾಗವಾಗಿದೆ. ಬ್ರಹ್ಮೋತ್ಸವ ಕೂಡ ಅದೇ ಅವಧಿಯಲ್ಲಿತ್ತು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿವಿಧ ಕೃತಿಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !