ಹಿಂದುಗಳನ್ನು ಮತಾಂತರಿಸುವ ಪ್ರಯತ್ನವನ್ನು ವಿಫಲಗೊಳಿಸಿದ ಬಜರಂಗದಳ ಕಾರ್ಯಕರ್ತರು!

  • ಪೊಲೀಸರಿಂದ ೧೮ ಹಿಂದುಗಳ ಬಿಡುಗಡೆ

  • ಪಂಜಾಬದಲ್ಲಿನ ಚರ್ಚನಲ್ಲಿ ಮತಾಂತರ

  • ಹಣ ಮತ್ತು ವಿದೇಶದಲ್ಲಿ ನೌಕರಿಯ ಆಮಿಷ ಒಡ್ಡಲಾಗಿತ್ತು

ಬಂಧಿಸಲಾದ ಆರೋಪಿ

ಗ್ವಾಲೆರ್ (ಮಧ್ಯಪ್ರದೇಶ) – ಇಲ್ಲಿಯ ಬಡ ಹಿಂದುಗಳನ್ನು ಪಂಜಾಬದ ಜಾಲಂದರದಲ್ಲಿನ ಚರ್ಚ್ ಗೆ ಕರೆದುಕೊಂಡು ಹೋಗಿ ಅಲ್ಲಿ ಮತಾಂತರ ಮಾಡುವ ಕ್ರೈಸ್ತರ ಪ್ರಯತ್ನವನ್ನು ಭಜರಂಗದಳದ ಕಾರ್ಯಕರ್ತರ ಸತರ್ಕತೆಯಿಂದ ವಿಫಲವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮಾರ್ಚ್ ೧೨ ರಂದು ತಡರಾತ್ರಿ ಪಾತಾಳಕೋಟೆ ಎಕ್ಸ್ಪ್ರೆಸ್‌ನಲ್ಲಿನ ೧೮ ಹಿಂದುಗಳನ್ನು ಬಿಡುಗಡೆಗೊಳಿಸಿದರು. ಅವರೆಲ್ಲರೂ ಕಾರ್ಮಿಕ ವರ್ಗದವರಾಗಿದ್ದರು.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಚಿಂದವಾಡ ಇಲ್ಲಿಯ ಸೇಜನಾಥ ಸೂರ್ಯವಂಶಿ ಮತ್ತು ವಿಜಯ ಕುಮಾರ ಇವರು ಕಾರ್ಮಿಕರಿಗೆ ‘ನೀವು ಕ್ರೈಸ್ತ ಧರ್ಮ ಸ್ವೀಕರಿಸಿದರೆ, ನಿಮಗೆ ಪ್ರತಿಯೊಬ್ಬರಿಗೂ ೧ ಲಕ್ಷ ರೂಪಾಯ ನೀಡುವೆವು, ನಿಮ್ಮ ಮಕ್ಕಳಿಗೆ ಒಳ್ಳೆಯ ಕ್ರೈಸ್ತ ಶಾಲೆಯಲ್ಲಿ ಶಿಕ್ಷಣ ನೀಡುವೆವು ಮತ್ತು ಅವರಿಗೆ ವಿದೇಶದಲ್ಲಿ ಉದ್ಯೋಗ ಕೂಡ ನೀಡುವೆವು’, ಎಂದು ಆಮಿಷ ಒಡ್ಡಿದ್ದರು. ಈ ಆಮಿಷಕ್ಕೆ ಮರುಳಾಗಿ ೧೮ ಜನರು ಮತಾಂತರಗೊಳ್ಳಲು ಇಬ್ಬರೂ ಕ್ರೈಸ್ತರ ಜೊತೆಗೆ ಪಾತಾಳಕೋಟ ಎಕ್ಸ್ಪ್ರೆಸ್ ನಿಂದ ಜಾಲಂಧರಗೆ ಹೊರಟಿದ್ದರು.

ಭಜರಂಗದಳದ ಕಾರ್ಯಕರ್ತರಿಗೆ ಈ ಮಾಹಿತಿ ದೊರೆಯುತ್ತಲೇ, ಅವರು ಮಾಹಿತಿಯನ್ನು ಪೊಲೀಸರಿಗೆ ನೀಡಿದರು. ಪೊಲೀಸರು ತಕ್ಷಣ ವಿದೇಶದಲ್ಲಿನ ಗಂಜಾ ರೈಲ್ವೆ ನಿಲ್ದಾಣದಲ್ಲಿ ಪಾತಾಳಕೋಟ ಎಕ್ಸ್ಪ್ರೆಸ್ ನಿಲ್ಲಿಸಿದರು ಮತ್ತು ೧೧ ಪ್ರಯಾಣಿಕರನ್ನು ವಶಕ್ಕೆ ಪಡೆದರು. ಅದರ ನಂತರ ಬೀನಾ ರೈಲು ನಿಲ್ದಾಣದಲ್ಲಿ ಇನ್ನೂ ೪ ಪ್ರಯಾಣಿಕರನ್ನು ವಶಕ್ಕೆ ಪಡೆದರು. ಅದರ ನಂತರ ಪೊಲೀಸರಿಗೆ ಎಸ್-೧ ಸಂಖ್ಯೆಯ ಭೋಗಿಯಲ್ಲಿ ಇನ್ನೂ ಮೂವರು ಇರುವ ಮಾಹಿತಿ ದೊರೆಯಿತು. ಪೊಲೀಸರು ಬಂದಿರುವ ಸುದ್ದಿ ತಿಳಿಯುತ್ತಲೇ ಅವರು ಮೂವರು ಓಡಿ ಹೋಗುವ ಪ್ರಯತ್ನದಲ್ಲಿ ಇರುವಾಗ ಪೊಲೀಸರು ಗ್ವಾಲ್ಹೇರ್ ನಿಲ್ದಾಣದಲ್ಲಿ ರೈಲು ನಿಲ್ಲಿಸಿ ಅವರನ್ನು ವಶಕ್ಕೆ ಪಡೆದರು. ಪೊಲೀಸರು ಈ ಪ್ರಕರಣವನ್ನು ಕುಲಂಕುಶವಾಗಿ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಮಧ್ಯಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನು ಇದ್ದರೂ ಕೂಡ ಅಲ್ಲಿಯ ಕ್ರೈಸ್ತರು ಹಿಂದುಗಳನ್ನು ಮತಾಂತರಿಸುವುದರಲ್ಲಿ ತೊಡಗಿದ್ದಾರೆ, ಇದರ ಅರ್ಥ ಮುಸಲ್ಮಾನರಂತೆ ಮತಾಂಧ ಕ್ರೈಸ್ತರು ಕೂಡ ಕಾನೂನನ್ನು ಲೆಕ್ಕಿಸುವುದಿಲ್ಲ, ಇದೇ ಇದರಿಂದ ಸ್ಪಷ್ಟವಾಗುತ್ತದೆ, ಇದರಿಂದ ಕೇವಲ ಕಾನೂನು ರೂಪಿಸಿ ಪ್ರಯೋಜನವಿಲ್ಲ, ಅದರಲ್ಲಿ ಕಠಿಣ ಶಿಕ್ಷೆಯ ವ್ಯವಸ್ಥೆ ಮಾಡಿ ಅದನ್ನು ಕಾರ್ಯಗತಗೊಳಿಸುವುದು ಅತ್ಯವಶ್ಯಕವಾಗಿದೆ.
  • ಹಿಂದೂ ಕಾರ್ಯಕರ್ತರು ಸತರ್ಕತೆ ತೋರಿಸಬಹುದಾದರೆ, ಪೊಲೀಸರಿಗೆ ಏಕೆ ಸಾಧ್ಯವಾಗುವುದಿಲ್ಲ ?
  • ಹಿಂದುಗಳಿಗೆ ಸ್ವಧರ್ಮದ ಶಿಕ್ಷಣ ನೀಡಿ ಅವರಲ್ಲಿ ಧರ್ಮಾಭಿಮಾನ ಹೆಚ್ಚಿಸುವುದು, ಇದೇ ಅವರ ಮತಾಂತರ ತಡೆಯುವ ಪರಿಣಾಮಕಾರಿ ಉಪಾಯ !