ಅಮೃತಸರದ ಸ್ವರ್ಣ ಮಂದಿರದಲ್ಲಿ ಯುವಕನಿಂದ ಭಕ್ತರ ಮೇಲೆ ದಾಳಿ: 5 ಜನರಿಗೆ ಗಾಯ

ಅಮೃತಸರ(ಪಂಜಾಬ) – ಅಮೃತಸರದ ಸ್ವರ್ಣ ಮಂದಿರದಲ್ಲಿ ಸಿಖ್ಖರ ಹೊಸವರ್ಷ ಆಚರಿಸುವ 5 ಭಕ್ತರ ಮೇಲೆ ಹರಿಯಾಣದ ಯಮುನಾನಗರದ ರಹಿವಾಸಿಯಾಗಿರುವ ಜುಲ್ಫಾನ್ ಹೆಸರಿನ ಯುವಕನು ಕಬ್ಬಿಣದ ರಾಡ್ ನಿಂದ ದಾಳಿ ನಡೆಸಿದನು. ಇದರಲ್ಲಿ 3 ಭಕ್ತರು ಮತ್ತು ಸ್ವರ್ಣ ಮಂದಿರದ 2 ಸೇವಕರು ಸೇರಿ ಒಟ್ಟು 5 ಜನರು ಗಾಯಗೊಂಡರು.

ಇದರಲ್ಲಿ ಓರ್ವ ಭಕ್ತ ಮತ್ತು ಒಬ್ಬ ಸೇವಕನ ಸ್ಥಿತಿ ಗಂಭೀರವಾಗಿದೆಯೆಂದು ಹೇಳಲಾಗಿದೆ. ಸಿ.ಸಿ.ಟಿ.ವಿ ದೃಶ್ಯಗಳ ಸಹಾಯದಿಂದ ಜುಲ್ಫಾನನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಘಟನೆಯ ಬಳಿಕ ಸ್ವರ್ಣ ಮಂದಿರದಲ್ಲಿ ಭಕ್ತರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರು ತಪಾಸಣೆಯನ್ನು ಹೆಚ್ಚಿಸಿದ್ದಾರೆ.

ಸಂಪಾದಕೀಯ ನಿಲುವು

ಈ ಘಟನೆಯ ಬಗ್ಗೆ ಖಲಿಸ್ತಾನ್ ಬೆಂಬಲಿಗರು ಏಕೆ ಮೌನವಾಗಿದ್ದಾರೆ?