|
ಮೊಗಾ (ಪಂಜಾಬ್) – ಇಲ್ಲಿ ಮಾರ್ಚ್ 13ರ ರಾತ್ರಿ ಅಜ್ಞಾತ ದುಷ್ಕರ್ಮಿಗಳು ಶಿವಸೇನೆಯ ಜಿಲ್ಲಾಧ್ಯಕ್ಷ ಮಂಗತ ರಾಯ್ ಮಂಗಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಗುಂಡಿನ ದಾಳಿಯಲ್ಲಿ 11 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದಾನೆ. ಮಂಗತ ರಾಯ್ ರಾತ್ರಿ 10 ಗಂಟೆ ಸುಮಾರಿಗೆ ಗಿಲ್ ಪ್ಯಾಲೇಸ್ ಬಳಿಯ ಡೈರಿಯಲ್ಲಿ ಹಾಲು ಖರೀದಿಸುತ್ತಿದ್ದಾಗ ಬೈಕ್ನಲ್ಲಿ ಬಂದ ಮೂವರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆಯುತ್ತಿರುವುದನ್ನು ಕಂಡು ಮಂಗತ ರಾಯ್ ತಮ್ಮ ಬೈಕ್ನಲ್ಲಿ ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದಾಗ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿದರು. ಈ ವೇಳೆ ಒಂದು ಗುಂಡು ಅವರಿಗೆ ತಗುಲಿದ್ದು, ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ನಂತರ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಮಂಗತ ರಾಯ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಗಾಯಗೊಂಡ ಅವರ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೊಗಾ ಪೊಲೀಸರ ಪ್ರಕಾರ, ಮಂಗಾ ಅವರು ಇತ್ತೀಚೆಗೆ ಸ್ಥಳೀಯ ಪ್ರತಿಸ್ಪರ್ಧಿಗಳ ಗುಂಪಿನೊಂದಿಗೆ ಜಗಳವಾಡಿದ್ದರು. ಇದು ಆ ಜಗಳದ ಪರಿಣಾಮವಾಗಿರಬಹುದು. ಮೊಗಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ ಗಾಂಧಿ ಅವರು ಈ ಹತ್ಯೆಯು ಭಯೋತ್ಪಾದಕ ದಾಳಿಯಲ್ಲ ಎಂದು ನಿರಾಕರಿಸಿದ್ದಾರೆ.
ಕ್ಷೌರದ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ
ಮತ್ತೊಂದು ಘಟನೆಯಲ್ಲಿ, ರಾತ್ರಿ 9 ಗಂಟೆ ಸುಮಾರಿಗೆ ಮೊಗಾದ ಬಾಗಿಯಾನ ಬಸ್ತಿಯಲ್ಲಿರುವ ಕ್ಷೌರದ ಅಂಗಡಿಯಲ್ಲಿ ಕೂದಲು ಕತ್ತರಿಸಲು ಮೂವರು ಬಂದಿದ್ದರು. ಅವರು ಅಂಗಡಿ ಮಾಲೀಕ ದೇವೇಂದ್ರ ಕುಮಾರ್ ಅವರ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದೇವೇಂದ್ರ ಅವರ ಕಾಲಿಗೆ ಗುಂಡು ತಗುಲಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Shiv Sena district president shot dead in Moga, Punjab
11-year-old son also injured in the firing
Police deny terrorist involvement
Targeted killings of Hindu leaders have been escalating in Punjab in recent years.
With the resurgence of Khalistani terrorism, it’s imperative… pic.twitter.com/EbZ1AtsnDx
— Sanatan Prabhat (@SanatanPrabhat) March 14, 2025
ಸಂಪಾದಕೀಯ ನಿಲುವುಪಂಜಾಬ್ನಲ್ಲಿ ಕಳೆದ ಕೆಲವು ವರ್ಷಗಳಿಂದ ಹಿಂದೂ ನಾಯಕರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ. ಪಂಜಾಬ್ನಲ್ಲಿ ಖಲಿಸ್ತಾನಿ ಭಯೋತ್ಪಾದನೆ ಮತ್ತೆ ತಲೆ ಎತ್ತುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸುವುದು ಅವಶ್ಯಕ! |