ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸನ್ನದ್ಧರಾಗಿರಿ ! – ಸ್ವಾಮಿ ಧೀರೇಂದ್ರ ಕೃಷ್ಣ ಶಾಸ್ತ್ರಿ

ಸ್ವಾಮಿ ಧೀರೇಂದ್ರ ಕೃಷ್ಣ ಶಾಸ್ತ್ರಿ

ಕರ್ಣಾವತಿ (ಗುಜರಾತ) – ಬಾಗೇಶ್ವರ ಧಾಮ ಸ್ವಾಮಿ ಧೀರೇಂದ್ರ ಕೃಷ್ಣಶಾಸ್ತ್ರಿ ಇವರು 10 ದಿನಗಳ ಗುಜರಾತ ಪ್ರವಾಸದಲ್ಲಿದ್ದಾರೆ. ಅವರು ಕರ್ಣಾವತಿಗೆ ತೆರಳಿದ್ದಾರೆ. ಕರ್ಣಾವತಿಯ ವಟವಾದಲ್ಲಿ ಅವರು ದೇವಕಿನಂದನ ಮಹಾರಾಜರ ಶಿವಪುರಾಣ ಕಥೆಯ ಭಾಗವನ್ನು ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವಾಗ ಧೀರೇಂದ್ರ ಕೃಷ್ಣಶಾಸ್ತ್ರಿಯವರು ಮಾತನಾಡುತ್ತಾ, ಸನಾತನ ಧರ್ಮಕ್ಕಾಗಿ ಜಾಗೃತರಾಗುವ ಸಮಯ ಬಂದಿದೆ. ಸನಾತನ ಧರ್ಮದ ಅಪಮಾನ ಮಾಡುವವರನ್ನು ಕ್ಷಮೆ ಮಾಡಲು ಸಾಧ್ಯವಿಲ್ಲ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸನ್ನದ್ಧರಾಗಿರಿ. ಸನಾತನ ಧರ್ಮವನ್ನು ಗೌರವಿಸುವವರು ಸಂಘಟಿತರಾಗಬೇಕು. ಅವರು ಸನಾತನಕ್ಕಾಗಿ ಜಾಗೃತಗೊಳ್ಳಬೇಕು. ಇಲ್ಲವಾದರೆ ಮುಂದಿನ ಪೀಳಿಗೆಯಲ್ಲಿ ರಾಮಕಥಾ ವಾಚನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಮೇ 29, 2023 ರಂದು ಕರ್ಣಾವತಿಯಲ್ಲಿ `ದಿವ್ಯ ದರಬಾರ’ ಆಯೋಜಿಸಲಾಗಿದ್ದು, ಅದರಲ್ಲಿ ನಾನು ಸನಾತನ ಧರ್ಮದ ಪರವಾಗಿ ಮಾತನಾಡುವವನಿದ್ದೇನೆ ಎಂದು ಧೀರೇಂದ್ರ ಕೃಷ್ಣಶಾಸ್ತ್ರಿಯವರು ಹೇಳಿದರು. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ“’ಅಯೋಧ್ಯೆಯಲ್ಲಿ ಶ್ರೀರಾಮನ ರಾಜ್ಯಾಭಿಷೇಕವಾಯಿತು. ಈಗ ಶ್ರೀಕೃಷ್ಣನ ರಾಜ್ಯಾಭಿಷೇಕವಾಗಲಿದೆ. `ನಾನು ಹೆದರುವುದಿಲ್ಲ; ಕಾರಣ ಸೀತಾರಾಮ ಮತ್ತು ಹನುಮಾನ ಮೇಲಿದ್ದಾರೆ’’ ಎಂದು ಹೇಳಿದರು.