`ದಿ. ಕೇರಳ ಸ್ಟೋರಿ’ ಈ ಸಿನೆಮಾ ಇಸ್ಲಾಮಿ ವಿಚಾರಸರಣಿಯ ಅಪಾಯದಿಂದ ಎಚ್ಚರಿಸಲಿದೆ ! – ನೆದರಲ್ಯಾಂಡ ಶಾಸಕ ಗೀರ್ಟ ವಿಲ್ಡರ್ಸ

ಮುಂಬಯಿ – `ದಿ ಕೇರಳ ಸ್ಟೋರಿ’ ಈ ಚಲನಚಿತ್ರ ಇಸ್ಲಾಮಿ ವಿಚಾರಸರಣಿಯ ಅಪಾಯದಿಂದ ಮತ್ತು ಹುಡುಗಿಯರನ್ನು ಬಲವಂತವಾಗಿ ಇಸ್ಲಾಂ ಸ್ವೀಕರಿಸುವ ಅಪಾಯದ ವಿರುದ್ಧ ಜಾಗೃತಗೊಳಿಸುವಂತಹದ್ದಿದೆ. ಈ ಸಿನೆಮಾವನ್ನು ಸ್ವಾಗತಿಸುತ್ತೇನೆ. ಇದು ಜಯಭೇರಿ ಬಾರಿಸಲಿ, ಎಂದು ನೆದರಲ್ಯಾಂಡ `ಪಾರ್ಟಿ ಆಫ್ ಫ್ರೀಡಮ್’ ಪಕ್ಷದ ಅಧ್ಯಕ್ಷ ಮತ್ತು ಶಾಸಕ ಗೀರ್ಟ ವಿಲ್ಡರ್ಸ ಇವರು ಟ್ವೀಟ ಮಾಡಿದ್ದಾರೆ.

`ದಿ ಕೇರಳ ಸ್ಟೋರಿ’ ಚಲನಚಿತ್ರ ನೆದರಲ್ಯಾಂಡ ಸಂಸತ್ತಿನಲ್ಲಿಯೂ ತೋರಿಸಲಿದ್ದಾರೆ !

ಮತ್ತೊಂದು ಟ್ವೀಟನಲ್ಲಿ ಅವರು, ಭಾರತದಲ್ಲಿರುವ ಮತ್ತು ಜಗತ್ತಿನಾದ್ಯಂತವಿರುವ ನನ್ನ ಎಲ್ಲ ಹಿಂದೂ ಸ್ನೇಹಿತರು ಈ ಸಿನೆಮಾವನ್ನು ವೀಕ್ಷಿಸುವರು ಎಂದು ಆಶಿಸುತ್ತೇನೆ. ಇದು ಉತ್ತಮ ಚಲನಚಿತ್ರವಾಗಿದ್ದು, ಯುರೋಪಿನ ಜನರೂ ವೀಕ್ಷಿಸಬೇಕು ! ಸಿನೆಮಾದ ನಿರ್ಮಾಪಕರಾದ ವಿಫುಲ ಅಮೃತಲಾಲ ಶಹಾ ಮತ್ತು ನಿರ್ದೇಶಕ ಸುದೀಪ್ತೊ ಸೇನ ಇವರು ಯುರೋಪಿನ ಸಿನೆಮಾಗೃಹಗಳಲ್ಲಿಯೂ ಬಿಡುಗಡೆ ಮಾಡಬೇಕು. ನಿಮ್ಮ ಇಚ್ಛೆಯಿದ್ದರೆ ನಾನು ಅದನ್ನು ನಮ್ಮ ಸಂಸತ್ತಿನಲ್ಲಿ ಅಭಿಮಾನದಿಂದ ಪ್ರದರ್ಶಿಸಲು ಪ್ರಯತ್ನಿಸುತ್ತೇನೆ. ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಎಲ್ಲಿ `ದಿ ಕೇರಳ ಸ್ಟೋರಿ’ ಯ ಗಂಭೀರತೆಯನ್ನು ಗಮನಿಸುವ ಯುರೋಪಿನ ಸಂವೇದನಾಶೀಲ ರಾಜಕಾರಣಿ, ಎಲ್ಲಿಯ ಕೇವಲ ಮುಸಲ್ಮಾನರ ಓಲೈಕೆಗಾಗಿ `ಲವ್ ಜಿಹಾದ’ ಸಂಕಟವನ್ನು ನಿರಾಕರಿಸುವ ಭಾರತದ ನತದೃಷ್ಟ ಜಾತ್ಯತೀತ ರಾಜಕಾರಣಿ.