ಚೆನ್ನೈಯಲ್ಲಿ ` ದಿ ಕೇರಳ ಸ್ಟೋರಿ’ ಚಲನಚಿತ್ರದ ಫಲಕವನ್ನು ಹರಿದ ಮುಸ್ಲಿಂ ಸಂಘಟನೆ !

`ನಾರಾ-ಎ- ತಕಬೀರ (ಅಲ್ಲಾ ಮಹಾನ್‌ ಆಗಿದ್ದಾನೆ) ಅಲ್ಲಾಹು ಅಕಬರ’ (ಅಲ್ಲಾ ಸರ್ವೋಚ್ಚನಾಗಿದ್ದಾನೆ) ಎಂದು ಘೋಷಣೆ

ವಿಆರ್ ಮಾಲ್ ಮತ್ತು ‘ದಿ ಕೇರಳ ಸ್ಟೋರಿ’ ಪ್ರದರ್ಶಿಸುವ ಇತರ ಚಿತ್ರಮಂದಿರಗಳ ಹೊರಗೆ ಪೊಲೀಸ್ ರಕ್ಷಣೆ

ಚೆನ್ನೈ(ತಮಿಳುನಾಡು) – `ದಿ ಕೇರಳ ಸ್ಟೋರಿ ಚಲನಚಿತ್ರ’ ಪ್ರದರ್ಶನಗೊಂಡ ಬಳಿಕ ಅದಕ್ಕೆ ಕೆಲವು ಸ್ಥಳಗಳಲ್ಲಿ ವಿರೋಧಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಈ ವಿಡಿಯೋ ಚೆನ್ನೈನಲ್ಲಿ ಮಾಡಲಾಗಿದೆಯೆಂದು ಹೇಳಲಾಗುತ್ತಿದೆ. ಇದರಲ್ಲಿ ಕೆಲವು ಜನರು ಚಲನಚಿತ್ರಗೃಹದ ಹೊರಗೆ ಹಚ್ಚಲಾಗಿದ್ದ ಈ ಚಲನಚಿತ್ರದ ದೊಡ್ಡ ಬಟ್ಟೆಯ ಫಲಕವನ್ನು ಹರಿಯುತ್ತಿರುವುದು ಕಂಡು ಬರುತ್ತಿದೆ. ಹಾಗೆಯೇ ಈ ಸಮಯದಲ್ಲಿ ಅವರು `ನಾರಾ-ಎ- ತಕಬೀರ, ಅಲ್ಲಾಹು ಅಕಬರ’ ಈ ಘೋಷಣೆ ನೀಡುತ್ತಿರುವುದು ಕಂಡು ಬರುತ್ತಿದೆ. ಅವರ ಕೈಯಲ್ಲಿ ತಮಿಳುನಾಡಿನ ಇಸ್ಲಾಮಿ ಸಂಘಟನೆ `ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಘಮ್’ ನ(ಟಿ.ಎಮ್.ಎಮ್.ಕೆ.ಯ) ಬಾವುಟ ಕಾಣಿಸುತ್ತಿದೆ. ಮತ್ತೊಂದು ವಿಡಿಯೋದಲ್ಲಿ ಇದೇ ಸಂಘಟನೆಯ ಕಾರ್ಯಕರ್ತನು ಚಲನಚಿತ್ರದ ಭಿತ್ತಿಪತ್ರಗಳನ್ನು ಹರಿಯುತ್ತಿರುವುದು ಕಂಡು ಬರುತ್ತಿದೆ. ಈ ವಿಡಿಯೋ ರಾಜ್ಯದ ಕೊಯಂಬತ್ತೂರ ನಗರದ್ದೆಂದು ಹೇಳಲಾಗುತ್ತಿದೆ. ಈ ಚಲನಚಿತ್ರವನ್ನು ಇಸ್ಲಾಮಿ ಸಂಘಟನೆ ಮೊದಲಿನಿಂದಲೂ ವಿರೋಧಿಸುತ್ತಿವೆ. ಜಮಿಯತ ಉಲೆಮಾ-ಎ-ಹಿಂದ ಈ ಸಂಘಟನೆಯು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ಚಲನಚಿತ್ರ ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿತ್ತು.

ಈ ವಿಡಿಯೋದಲ್ಲಿ ಸಾಮಾಜಿಕ ಮಾಧ್ಯಮದಿಂದ ಓರ್ವನು ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ, ಒಂದು ವೇಳೆ ಈ ಚಲನಚಿತ್ರ ಇಸ್ಲಾಮಿಕ ಸ್ಟೇಟ ವಿರೋಧದಲ್ಲಿದೆ ಮತ್ತು ಇಸ್ಲಾಮ ಮತ್ತು ಇಸ್ಲಾಮಿಕ ಸ್ಟೇಟಗಳಿಗೆ ಏನೂ ಸಂಬಂಧವಿಲ್ಲ, ಹೀಗಿರುವಾಗ ಜನರಿಗೆ ಅದರಿಂದ ಏಕೆ ತೊಂದರೆಯಾಗುತ್ತಿದೆ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾನೆ.

ಸಂಪಾದರಕ ನಿಲುವು

  • ಇಸ್ಲಾಮಿಕ ಸ್ಟೇಟ ಮತ್ತು ಲವ್ ಜಿಹಾದ ಭೀಕರತೆಯನ್ನು ತೋರಿಸಿದ್ದಕ್ಕೆ ಮತಾಂಧ ಮುಸಲ್ಮಾನರು ಮತ್ತು ಅವರ ಸಂಘಟನೆಗಳಿಗೆ ಖಾರ ಹತ್ತುವುದು ಸಹಜ !
  • ತಮಿಳುನಾಡಿನ ಮುಸಲ್ಮಾನಪ್ರೇಮಿ ದ್ರಮುಕ ಸರಕಾರ ಇಂತಹವರ ಮೇಲೆ ಕ್ರಮ ಕೈಕೊಳ್ಳುವ ಬದಲು ಅವರಿಗೆ ಸ್ವಾತಂತ್ರ್ಯ ನೀಡುತ್ತಿರುವುದರಿಂದ ಇಂತಹ ಘಟನೆಗಳನ್ನು ತಡೆಯಲು ಹಿಂದೂಗಳು ನ್ಯಾಯೋಚಿತ ಮಾರ್ಗದಿಂದ ಸರಕಾರದ ಮೇಲೆ ಒತ್ತಡ ಹೇರುವುದು ಆವಶ್ಯಕ.