ಶ್ರೀಲಂಕಾದಲ್ಲಿ ಸರಕಾರಿ ಮಟ್ಟದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ!

  • ದೇವತೆಗಳ ಮೂರ್ತಿಯನ್ನು ಧ್ವಂಸಗೊಳಿಸುವಿಕೆ ಅಥವಾ ದೇವಸ್ಥಾನದಿಂದ ಮೂರ್ತಿಗಳು ಕಣ್ಮರೆಯಾಗುತ್ತಿರುವ ಪ್ರಕರಣಗಳು

  • ಪುರಾತತ್ವ ಇಲಾಖೆಯು ದೇವಸ್ಥಾನಗಳನ್ನು ಮುಚ್ಚಿಸಿ ಹಾಳುಗೆಡಹುತ್ತಿದೆಎಂದು ಹಿಂದೂಗಳಿಂದ ಆರೋಪ

ಕೊಲಂಬೊ(ಶ್ರೀಲಂಕಾ)- ಕಳೆದ ಕೆಲವು ದಿನಗಳಿಂದ ಶ್ರೀಲಂಕೆಯ ಹಿಂದೂ ದೇವಸ್ಥಾನಗಳ ಮೇಲೆ ದಾಳಿಗಳ ಘಟನೆ ನಡೆಯುತ್ತಿದ್ದು, ಈ ಮೂಲಕ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವುದು ಅಥವಾ ಕೆಲವು ಪ್ರಸಂಗಗಳಲ್ಲಿ ದೇವಸ್ಥಾನಗಳ ಮೂರ್ತಿಗಳು ಕಾಣೆಯಾಗುತ್ತಿರುವುದು ಕಂಡು ಬಂದಿದೆ. ಇದೆಲ್ಲವೂ ಶ್ರೀಲಂಕಾ ಸರಕಾರದ ಪುರಾತತ್ವ ಇಲಾಖೆಯಿಂದ ನಡೆಯುತ್ತಿದೆಯೆನ್ನುವ ಮಾಹಿತಿ ಬಹಿರಂಗವಾಗಿದೆ. ಇದರಿಂದ ಇಲ್ಲಿಯ ತಮಿಳು ಹಿಂದೂಗಳಲ್ಲಿ ಆಕ್ರೋಶದ ಅಲೆಗಳು ಉಕ್ಕುತ್ತಿದ್ದು, ಇಲ್ಲಿಯ ಹಿಂದೂ ಮುಖಂಡರು ಎಪ್ರಿಲ್ 25ರಂದು ಪ್ರತಿಭಟನೆಯನ್ನು ನಡೆಸಲು ಕರೆ ನೀಡಿದ್ದಾರೆ. ದೇಶದಲ್ಲಿ ವೇಗವಾಗಿ `ಸಿಂಹಳೀಕರಣ’ (ಬೌದ್ಧರಾಗಿರುವ ಸಿಂಹಳಿ ಸಮಾಜದ ಶಕ್ತಿಯನ್ನು ಹೆಚ್ಚಿಸುವುದು) ನಡೆಯುತ್ತಿದೆ ಎಂದೂ ಅವರು ಆರೋಪಿಸುತ್ತಿದ್ದಾರೆ.

1.ಶ್ರೀಲಂಕೆಯ ಉತ್ತರ ಭಾಗದಲ್ಲಿರುವ ಹಿಂದೂಬಾಹುಳ್ಯ ಜಾಫ್ನಾ ನಗರದಲ್ಲಿ ಪ್ರಮುಖವಾಗಿ ಈ ದಾಳಿಗಳಾಗುತ್ತಿವೆ ಎಂಬ ಮಾಹಿತಿಯನ್ನು `ದಿ ಹಿಂದೂ’ ಪತ್ರಿಕೆಯು ಪ್ರಕಾಶಿಸಿದ ಒಂದು ವರದಿಯಿಂದ ಬಹಿರಂಗವಾಗಿದೆ.

2.ಇಲ್ಲಿ ಕೆಲವು ತಮಿಳು ಹಿಂದೂಗಳು ಒಂದು ಸಾರ್ವಜನಿಕ ಸ್ಥಳದಲ್ಲಿ ಹಿಂದೂಗಳ ದೇವತೆಗಳ ಮೂರ್ತಿಗಳನ್ನು ಸ್ಥಾಪಿಸಿರುವ ಬಗ್ಗೆ ಅಲ್ಲಿಯ ಪೊಲೀಸರು ಇದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿ ಮೂರ್ತಿಯನ್ನು ತೆಗೆದುಹಾಕುವಂತೆ ಕೋರಿದ್ದಾರೆ.

3.ಒಂದು ಕಡೆ ಹಿಂದೂ ಮಂದಿರಗಳನ್ನು ಗುರಿ ಮಾಡಲಾಗುತ್ತಿದ್ದರೆ, ಇನ್ನೊಂದೆಡೆ ಹಿಂದೂ ಬಾಹುಳ್ಯವಿರುವ ಉತ್ತರ ಶ್ರೀಲಂಕೆಯಲ್ಲಿ ಹೊಸ ಬೌದ್ಧ ಸ್ಥಳಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡು ಬರುತ್ತಿದೆ. ಈ ಕ್ಷೇತ್ರದಲ್ಲಿ ಹಿಂದೂಗಳ ಬಳಿಕ ಕ್ರೈಸ್ತರ ಮತ್ತು ಮುಸಲ್ಮಾನರ ಸಂಖ್ಯೆ ಅಧಿಕವಿದ್ದು, ಬೌದ್ಧರ ಸಂಖ್ಯೆ ಅವರಿಗಿಂತಲೂ ಕಡಿಮೆಯಿದೆ.

4.ಕಳೆದ ಕೆಲವು ವರ್ಷಗಳಲ್ಲಿ ಕುರುಂಥರಮಲಯಿ ಹಾಗೂ ಮುಲ್ಲಯಿತಿವು ಇಲ್ಲಿನ ಅಯ್ಯರ ದೇವಸ್ಥಾನದಲ್ಲಿ ಬೌದ್ಧ ವಿಹಾರಗಳ ಸಂಖ್ಯೆಯಲ್ಲಿ ವೇಗವಾಗಿ ಹೆಚ್ಚಳವಾಗಿದೆ. ಸ್ಥಳೀಯ ಹಿಂದೂಗಳ ಅಭಿಪ್ರಾಯದಂತೆ ಮಾಜಿ ರಾಷ್ಟ್ರಪತಿ ಗೋಟಾಬಯಾ ರಾಜಪಕ್ಷೆ ಮತ್ತು ಅವರ ಪರಿವಾರವು ಸಿಂಹಳೀಕರಣಕ್ಕೆ ಅಧಿಕ ಬಲವನ್ನು ನೀಡಿದೆ. ಸಧ್ಯದ ರಾಷ್ಟ್ರಪತಿ ರಾನಿಲ ವಿಕ್ರಮಸಿಂಘೆಯವರು ಇದರೆಡೆಗೆ ನಿರ್ಲಕ್ಷ ತೋರುತ್ತಿದ್ದಾರೆ.

ತಮಿಳು ಹಿಂದೂಗಳ ಅಧಿಕಾರದ ಮೇಲೆ ಆಕ್ರಮಣ- ಜಾಫ್ನಾ ಶಾಸಕ ಗಜೇಂದ್ರಕುಮಾರ ಪೊನ್ನಂಬಲಮ್

ಗಜೇಂದ್ರಕುಮಾರ ಪೊನ್ನಂಬಲಮ್

ಜಾಫ್ನಾ ಶಾಸಕ ಮತ್ತು `ತಮಿಳು ನ್ಯಾಷನಲ್ ಪೀಪಲ್ಸ ಫ್ರಂಟ’ ಮುಖಂಡ ಗಜೇಂದ್ರಕುಮಾರ ಪೊನ್ನಂಬಲಮ್ ಇವರು ಮಾತನಾಡುತ್ತಾ, ಪೂಜೆಯಷ್ಟೇ ಅಲ್ಲ ತಮಿಳು ಹಿಂದೂಗಳ ಅಧಿಕಾರಗಳ ಮೇಲೆಯೂ ಆಕ್ರಮಣವಾಗುತ್ತಿದೆಯೆಂದು ಹೇಳಿದ್ದಾರೆ. `ತಮಿಳು ಹಿಂದೂಗಳು ಮತ್ತು ಶ್ರೀಲಂಕನ್ ಸೈನ್ಯದ ನಡುವಿನ ಯುದ್ಧದ ಬಳಿಕ ಅಂದರೆ ಕಳೆದ 3 ದಶಕಗಳಿಂದ ಅಲ್ಲಿಯ ಸರಕಾರವು ನಿರಂತರವಾಗಿ ಉತ್ತರ ಮತ್ತು ಪೂರ್ವ ಶ್ರೀಲಂಕೆಯಲ್ಲಿ `ಸಿಂಹಳೀಕರಣ’ ಅಭಿಯಾನ ಶೀಘ್ರಗತಿಯಲ್ಲಿ ಜಾರಿಗೊಳಿಸುತ್ತಿದೆ’, ಎಂದೂ ಪೊನ್ನಂಬಲಮ್ ಹೇಳಿದ್ದಾರೆ.

 

ಪ್ರಕರಣ ಹೇಗೆ ಬಯಲಾಯಿತು?

ಹಿಂದೂಬಾಹುಳ್ಯವಿರುವ ಉತ್ತರ ಮತ್ತು ಪೂರ್ವ ಶ್ರೀಲಂಕೆಯಲ್ಲಿ ಪುರಾತತ್ವ ಇಲಾಖೆಯ ಹೆಚ್ಚುತ್ತಿರುವ ಕಾರ್ಯಾಚರಣೆಯಿಂದ ದೇವಸ್ಥಾನಗಳ ಮೇಲಿನ ದಾಳಿಗಳ ಘಟನಾವಳಿ ಬಹಿರಂಗವಾಯಿತು. ಸರಕಾರಿ ಅಧಿಕಾರಿಗಳು ಐತಿಹಾಸಿಕ ಸ್ಥಳಗಳ ಸಂಶೋಧನೆಯ ಕಾರಣವನ್ನು ನೀಡುತ್ತಾ ಕೆಲವು ದೇವಸ್ಥಾನಗಳಲ್ಲಿ ಹಿಂದೂಗಳಿಗೆ ಪ್ರವೇಶವನ್ನು ನಿರ್ಬಂಧಿಸಿದರು. ವಾವುನಿಯಾದ ವೇದುಕ್ಕುನಾರಿಮಲಾಯಿಯಲ್ಲಿರುವ ಒಂದು ದೇವಸ್ಥಾನದಲ್ಲಿ ಪೂಜೆ ಮಾಡಲು ಹೋಗಿದ್ದ ಒಬ್ಬ ಹಿಂದೂ ಯುವಕನನ್ನು ಬಂಧಿಸಿರುವ ಮಾಹಿತಿ ಬಹಿರಂಗವಾದ ಬಳಿಕ ಅವರು ದೇವಸ್ಥಾನದ ಮೂರ್ತಿಯನ್ನು ಧ್ವಂಸಗೊಳಿಸಿರುವುದು ಕಂಡು ಬಂದಿತು. ಕಳೆದ ಕೆಲವು ತಿಂಗಳ ಹಿಂದೆ ಆ ಪ್ರದೇಶದಲ್ಲಿ ಹಿಂದೂಗಳು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು.

 

ಸಂಪಾದಕರ ನಿಲುವು

  • ಶ್ರೀಲಂಕಾ ಸರಕಾರದಿಂದಾಗುತ್ತಿರುವ ದಾಳಿಗಳು ಖಂಡನೀಯವಾಗಿದ್ದು ಈ ನಿಟ್ಟಿನಲ್ಲಿ ಭಾರತವು ಶ್ರೀಲಂಕಾ ಸರಕಾರವನ್ನು ಕಠೋರವಾಗಿ ವಿಚಾರಿಸುವ ಅವಶ್ಯಕತೆಯಿದೆ !
  • ಯಾವಾಗಲೂ ಭಾರತದಲ್ಲಿರುವ ಅಲ್ಪಸಂಖ್ಯಾತ ಮುಸಲ್ಮಾನರು ಅಥವಾ ಕ್ರೈಸ್ತರ ಮೇಲಾದ ಕಥಿತ ದಾಳಿಗಳ ಬಗ್ಗೆ ಹಿಂದೂಗಳನ್ನು ದೂಷಿಸುವ ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಶ್ರೀಲಂಕೆಯಲ್ಲಿ ನಡೆಯುತ್ತಿರುವ ಈ ಪ್ರಕರಣಗಳ ಬಗ್ಗೆ ಏಕೆ ಮೌನವಹಿಸಿವೆ ?
  • ಸುಮಾರು 3 ವರ್ಷಗಳ ಹಿಂದೆ ` ಪೌರತ್ವ ತಿದ್ದುಪಡಿ ಕಾಯಿದೆ ಮತ್ತು `ರಾಷ್ಟ್ರೀಯ ಜನಸಂಖ್ಯಾ ನೊಂದಣಿ’ ಜಾರಿಗೊಳಿಸಿ ಪಕ್ಕದ ರಾಷ್ಟ್ರದಿಂದ ಹಿಂತಿರುಗಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಯಿತು. ಆದರೆ ಆ ದೇಶಗಳಲ್ಲಿರುವ ದೇವಸ್ಥಾನಗಳನ್ನು ಸಂರಕ್ಷಿಸಲು ಈಗಲೂ ಯಾವುದೇ ಕ್ರಮಗಳನ್ನು ಕೈಕೊಳ್ಳಲಾಗಿಲ್ಲ. ಭಾರತ ಸರಕಾರವು ಈ ಸಂದರ್ಭದಲ್ಲಿ ಸೂಕ್ತ ಕ್ರಮಗಳನ್ನು ಕೈಕೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ.