ಸನಾತನದ ಮೊದಲನೇ ಬಾಲಸಂತರಾದ ಪೂ. ಭಾರ್ಗವರಾಮ ಪ್ರಭು (ವಯಸ್ಸು ೬) ಇವರು ಅನಾರೋಗ್ಯದಲ್ಲಿದ್ದಾಗ ಅರಿವಾದ ಅವರ ಸಹನಶೀಲತೆ, ಸ್ಥಿರತೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲಿನ ದೃಢ ಶದ್ಧೆ !

ಪೂ. ಭಾರ್ಗವರಾಮ ಪ್ರಭು ಇವರ ೬ ನೇ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಅವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು !
ಸೌ. ಭವಾನಿ ಭರತ ಪ್ರಭು

ವೈಶಾಖ ಶುಕ್ಲ ದಶಮಿಯಂದು (೩೦.೪.೨೦೨೩) ಮೊದಲನೇ ಬಾಲಕಸಂತರಾದ ಮಂಗಳೂರಿನ ಪೂ. ಭಾರ್ಗವರಾಮ ಇವರ ೬ ನೇ ಹುಟ್ಟುಹಬ್ಬವಿದೆ. ಆ ನಿಮಿತ್ತ ಅವರ ತಾಯಿ ಸೌ. ಭವಾನಿ ಪ್ರಭು ಇವರಿಗೆ ಅರಿವಾದ ಪೂ. ಭಾರ್ಗವರಾಮ ಇವರ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ತಿಳುವಳಿಕೆ ಮತ್ತು ಸಹನಶೀಲತೆ !

೧ ಅ. ನೋವು ಸಹಿಸಿಕೊಳ್ಳುವುದು : ನಾನು ಪೂ. ಭಾರ್ಗವರಾಮ ಇವರಿಗೆ, “ನಿಮ್ಮ ಗಂಟಲು ಮತ್ತು ಮೈ ನೋಯುತ್ತಿದೆಯೇ ? ಎಂದು ಕೇಳಿದೆನು. ಆಗ ಅವರು “ಹೌದು. ನನ್ನ ಗಂಟಲು ಮತ್ತು ಮೈ ತುಂಬಾ ನೋಯುತ್ತಿದೆ, ಎಂದರು. ಅವರು ನೋವಾಗುತ್ತಿರುವುದನ್ನು ತೋರಿಸಿಕೊಳ್ಳದೇ ಅದನ್ನು ಸಹಿಸಿಕೊಂಡರು.

೧ ಆ. ಆಸ್ಪತ್ರೆಗೆ ಸೇರಿಸುವ ಬಗ್ಗೆ ಭಯವೆನಿಸದಿರುವುದು : ನಾನು ಪೂ. ಭಾರ್ಗವರಾಮ ಇವರಿಗೆ, “ನಿಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣವೇ ? ಎಂದು ಕೇಳಿದೆನು. ಆಗ ಅವರು ಅತ್ಯಂತ ಸಹಜವಾಗಿ, “ಸರಿ ಎಂದು ಹೇಳಿದರು. (ಚಿಕ್ಕ ಮಕ್ಕಳು ಆಸ್ಪತ್ರೆಗೆ ಹೋಗಲು ಹೆದರುತ್ತಾರೆ; ಆದರೆ ಪೂ. ಭಾರ್ಗವರಾಮ ಇವರು ಹೆದರಲಿಲ್ಲ.)

೧ ಇ. ಆಧುನಿಕ ವೈದ್ಯರಿಗೆ ಬರಲು ತುಂಬಾ ತಡವಾಗುತ್ತಿದ್ದರೂ ಶಾಂತವಾಗಿರುವುದು : ನಾವು ಆಸ್ಪತ್ರೆಗೆ ಹೋಗಿ ೨ ಗಂಟೆಗಳಾದರೂ ತುರ್ತು ವೈದ್ಯಕೀಯ ಸೇವಾ ವಿಭಾಗದಲ್ಲಿನ (Casualty) ಆಧುನಿಕ ವೈದ್ಯರು ಬಂದಿರಲಿಲ್ಲ. ಆದ್ದರಿಂದ ನಾನು ಅಸಮಾಧಾನವನ್ನು ವಕ್ತಪಡಿಸಿದೆನು. ಆಗ ತಕ್ಷಣ ಪೂ. ಭಾರ್ಗವರಾಮ ಇವರು, “ನಾವು ದಾರಿ ಕಾಯೋಣ ಆಧುನಿಕ ವೈದ್ಯರು ಈಗ ಬರಬಹುದು ಎಂದು ಹೇಳಿದರು. ಅದನ್ನು ಕೇಳಿ ನನಗೆ ನನ್ನ ತಪ್ಪಿನ ಅರಿವಾಗಿ ನನ್ನ ಅಂತರ್ಮುಖತೆ ಹೆಚ್ಚಾಯಿತು. ಇದರಿಂದ ನನಗೆ, ‘ಪೂ. ಭಾರ್ಗವರಾಮರಲ್ಲಿ ಸಹನಶೀಲತೆಯು ಅದೆಷ್ಟು ಪ್ರಮಾಣದಲ್ಲಿದೆ, ಎಂಬುದು ಅರಿವಾಯಿತು.

೧ ಈ. ಪೂ. ಭಾರ್ಗವರಾಮ ಇವರಿಗೆ ಮಾತನಾಡುವಾಗ ತೊಂದರೆ ಆಗುತ್ತಿದ್ದರೂ ಆಧುನಿಕ ವೈದ್ಯರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಅವರು ಸ್ವತಃ ಉತ್ತರಗಳನ್ನು ಕೊಟ್ಟರು. 

೧ ಉ. ಚಿಕಿತ್ಸೆ ನಡೆಯುತ್ತಿರುವಾಗ ಪೂ. ಭಾರ್ಗವರಾಮ ಇವರಿಗೆ ತುಂಬಾ ನೋವಾಗುತ್ತಿದ್ದರೂ ಅವರು ಅಳದೇ ಎಲ್ಲವನ್ನು ಸಹಿಸಿಕೊಳ್ಳುವುದು : ೪ ಪ್ರಕಾರದ ಪರೀಕ್ಷಣೆಗಾಗಿ ಪೂ. ಭಾರ್ಗವರಾಮ ಇವರ ರಕ್ತವನ್ನು ತೆಗೆದುಕೊಂಡರು. ಅವರಿಗೆ ೨ ಇಂಜೆಕ್ಶನ್ ನೀಡಲಾಯಿತು ಮತ್ತು ನರಕ್ಕೆ ಔಷಧಗಳನ್ನು ಕೊಡಲು ನರದಲ್ಲಿ ಸೂಜಿಯನ್ನು (Jelco cannula) ಚುಚ್ಚಿಡಲಾಯಿತು. ಅವರಿಗೆ ಅನೇಕ ಬಾರಿ ಸೂಜಿಯಿಂದ ಚುಚ್ಚಿದರೂ, ಅವರು ಒಮ್ಮೆಯೂ ಅಳಲಿಲ್ಲ. ಅವರಿಗೆ ನೋವಾಗುತ್ತಿರುವಾಗ ಕೇವಲ ಹುಬ್ಬುಗಳನ್ನು ಹತ್ತಿರ ಮಾಡಿ ಹಣೆಯನ್ನು ಗಂಟಿಕ್ಕಿ ‘ನೋವಾಗುತ್ತಿದೆ ಎಂದು ತೋರಿಸುತ್ತಾ ಎಲ್ಲವನ್ನು ಸಹಿಸಿಕೊಂಡರು.

೨. ಪೂ. ಭಾರ್ಗವರಾಮ ಇವರ ವರ್ತನೆಯಿಂದ ‘ಸಂತರಿಗೆ ದೇಹಬುದ್ಧಿ ಇರುವುದಿಲ್ಲ’, ಎಂಬುದನ್ನು ಅನುಭವಿಸುವುದು

ಅದನ್ನು ನೋಡಿ ಹಿರಿಯ ನರ್ಸ (ದಾದಿ) ಒಬ್ಬರು ನನಗೆ, “ಆಸ್ಪತ್ರೆಯಲ್ಲಿನ ೨೬ ವರ್ಷಗಳ ನನ್ನ ಅನುಭವದಲ್ಲಿ ‘ರಕ್ತನಾಳಕ್ಕೆ ಸೂಜಿಯನ್ನು (Cannula) ಚುಚ್ಚುವಾಗ ಅಳದ ಮಗುವನ್ನು ನಾನು ನೋಡಿಲ್ಲ, ಎಂದು ಹೇಳಿದರು. ಅದನ್ನು ಕೇಳಿ ನನಗೆ, ‘ಈ ವಿಷಯದಲ್ಲಿ ಪೂ. ಭಾರ್ಗವರಾಮ ಇವರ ಸಂತತ್ವವನ್ನು ತೋರಿಸುತ್ತಿದೆ, ಎಂದೆನಿಸಿತು. ಆಗ ನನಗೆ ಗುರುದೇವರ ಬಗ್ಗೆ ತುಂಬಾ ಕೃತಜ್ಞತೆ ಎನಿಸಿತು. ‘ಸಂತರಲ್ಲಿ ದೇಹಬುದ್ಧಿ ಇರುವುದಿಲ್ಲ, ಎಂಬುದನ್ನು ನಾನು ಪೂ. ಭಾರ್ಗವರಾಮ ಇವರಿಗೆ ಆಸ್ಪತ್ರೆಯಲ್ಲಿ ಸೇರಿಸಿದ ನಂತರ ಅನುಭವಿಸಿದೆನು.

ಪೂ. ಭಾರ್ಗವರಾಮ ಇವರು ಆಸ್ಪತ್ರೆಯಲ್ಲಿರುವಾಗ ಒಮ್ಮೆಯೂ ಹಠ ಮಾಡಲಿಲ್ಲ ಅಥವಾ ಅವರು ಒಮ್ಮೆಯೂ ಅಳಲಿಲ್ಲ. ಸಾಮಾನ್ಯವಾಗಿ ಮಕ್ಕಳು ಅನಾರೋಗ್ಯವಿರುವಾಗ ತುಂಬಾ ಅಳುತ್ತಾರೆ; ಆದರೆ ಪೂ. ಭಾರ್ಗವರಾಮ ಇವರು ದೊಡ್ಡವರಂತೆ ಶಾಂತವಾಗಿ ಮಲಗಿರುತ್ತಿದ್ದರು.

೩. ಪೂ. ಭಾರ್ಗವರಾಮ ಇವರನ್ನು ಚಿಕ್ಕ ಮಕ್ಕಳ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿದ ನಂತರ ಅವರ ತಲೆದಿಂಬಿನ ಹಿಂದೆ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’  ಗ್ರಂಥವನ್ನು ಇಟ್ಟನಂತರ ಅಲ್ಲಿನ ವಾತಾವರಣವು ಹಗುರವಾಗಿ ಬೆಳಕು ಹೆಚ್ಚಾದುದರ ಅರಿವಾಗುವುದು

ನಡುರಾತ್ರಿಯಲ್ಲಿ ಪೂ. ಭಾರ್ಗವರಾಮ ಇವರನ್ನು ಚಿಕ್ಕ ಮಕ್ಕಳ ತೀವ್ರ ನಿಗಾ ಘಟಕಕ್ಕೆ (Peಜiಚಿಣಡಿiಛಿ IಅU ನಲ್ಲಿ) ಸ್ಥಳಾಂತರಿಸಲಾಯಿತು. ಆಗ ಅಲ್ಲಿನ ವಾತಾವರಣದಲ್ಲಿ ತುಂಬಾ ಜಡತ್ವ ಇತ್ತು. ಅಲ್ಲಿಗೆ ಹೋದನಂತರ ನಾನು ಪೂ. ಭಾರ್ಗವರಾಮ ಇವರ ಮಂಚವನ್ನು ತಕ್ಷಣ ಕರ್ಪೂರ, ಅತ್ತರ ಮತ್ತು ವಿಭೂತಿ ಇವುಗಳಿಂದ ಶುದ್ಧಿ ಮಾಡಿದೆನು. ನಂತರ ಪೂ. ಭಾರ್ಗವರಾಮ ಇವರ ತಲೆದಿಂಬಿನ ಹಿಂದೆ ತಲೆಯ ಹತ್ತಿರ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ ಎಂಬ ಗ್ರಂಥವನ್ನು ಇಟ್ಟೆನು. ಅನಂತರ ಸ್ವಲ್ಪ ಸಮಯದೊಳಗೆ ಅಲ್ಲಿನ ವಾತಾವರಣ ತುಂಬಾ ಹಗುರವಾಯಿತು. ನನಗೆ ‘ರಾತ್ರಿಯ ಸಮಯದಲ್ಲಿಯೂ ಆ ಸ್ಥಳದಲ್ಲಿ ಬೆಳಕು ಹೆಚ್ಚಾಯಿತು, ಎಂದೆನಿಸಿತು.

೪. ಪೂ. ಭಾರ್ಗವರಾಮರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮೇಲಿರುವ ಅಪಾರ ಶ್ರದ್ಧೆ !

೪ ಅ. ಪೂ. ಭಾರ್ಗವರಾಮ ಇವರು ಮಂಚದ ಹತ್ತಿರ ಬರುವ ಪ್ರತಿಯೊಬ್ಬರಿಗೆ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ ಈ ಗ್ರಂಥವನ್ನು ತೋರಿಸಿ ಅವರ ಬಗ್ಗೆ ಹೇಳುತ್ತಿದ್ದರು.

೪ ಆ. ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ ಈ ಗ್ರಂಥವನ್ನು ನೋಡಿ ನರ್ಸ ಒಬ್ಬಳು ಅವರನ್ನು ‘ಭಗವಂತ ಎಂದು ಕರೆಯುವುದು ಮತ್ತು ‘ಪೂ. ಭಾರ್ಗವರಾಮ ಇವರಿಗೆ ಭಗವಂತನ (ಗುರುದೇವರ) ಆಶೀರ್ವಾದ ಇರುವುದರಿಂದ ಅವರಿಗೆ ಏನು ಆಗುವುದಿಲ್ಲ, ಎಂದು ಹೇಳುವುದು : ಪೂ. ಭಾರ್ಗವರಾಮ ಇವರು ಒಬ್ಬ ದಾದಿಗೆ (ನರ್ಸ ಒಬ್ಬಳಿಗೆ) ಕರೆದು ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾ ಚಿತ್ರಮಯ ಜೀವನದರ್ಶನ ಈ ಗ್ರಂಥವನ್ನು ಅವಳ ಕೈಗೆ ಕೊಟ್ಟರು ಮತ್ತು ಅವಳಿಗೆ ಅದನ್ನು ಕುಳಿತುಕೊಂಡು ನೋಡಲು ಹೇಳಿದರು. ಆ ದಾದಿಯು ಆ ಪೂರ್ಣ ಗ್ರಂಥವನ್ನು ನೋಡಿದಳು. ಅವಳಿಗೆ ಆ ಗ್ರಂಥವು ತುಂಬಾ ಇಷ್ಟವಾಯಿತು. ಅವಳಿಗೆ ಭಾವಜಾಗೃತಿಯಾಯಿತು ಮತ್ತು ಅವಳು ಗುರುದೇವರನ್ನು ‘ಭಗವಂತನೆಂದು ಕರೆಯತೊಡಗಿದಳು. ಅವಳು ನನಗೆ, “ಭಾರ್ಗವರಾಮನಿಗೆ ಭಗವಂತನ (ಗುರುದೇವರ) ತುಂಬಾ ಆಶೀರ್ವಾದ ಇದೆ. ಅವನಿಗೆ ಏನು ಆಗುವುದಿಲ್ಲ ಎಂದಳು.

೪ ಇ. ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ ಈ ಗ್ರಂಥದ ಕಡೆಗೆ ನೋಡಿ ಪೂ. ಭಾರ್ಗವರಾಮ ಇವರು ‘ನನಗೆ ಭಯವೆನಿಸುವುದಿಲ್ಲ, ಎಂದು ನರ್ಸಗೆ (ದಾದಿಗೆ) ಹೇಳುವುದು : ನರ್ಸ್ ಇಂಜೆಕ್ಶನ್ ಕೊಡಲು ಬಂದನಂತರ ಪೂ. ಭಾರ್ಗವರಾಮ ಇವರಿಗೆ, “ಹೆದರಬೇಡ. ಇಂಜೆಕ್ಶನ್ ಚಿಕ್ಕದಿದೆ ಎಂದಳು. ಆಗ ಪೂ. ಭಾರ್ಗವರಾಮ ಇವರು ತಕ್ಷಣ ಅವರ ತಲೆಯ ಹಿಂದೆ ಇಟ್ಟಿರುವ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ ಗ್ರಂಥದ ಕಡೆಗೆ ಬೆರಳು ತೋರಿಸಿ, ‘ಇಲ್ಲಿ ನೋಡಿ, ನನ್ನ ಹಿಂದೆ ಯಾರಿ ದ್ದಾರೆ ! ಆದ್ದರಿಂದ ನನಗೆ ಭಯವೆನಿಸುವುದಿಲ್ಲ ಮತ್ತು ನನಗೆ ನೋವೂ ಆಗುವುದಿಲ್ಲ ಎಂದರು.

೫. ಸ್ವಚ್ಛತೆಯ ಕೆಲಸ ಮಾಡುವ ಮಹಿಳೆಯು ಪೂ. ಭಾರ್ಗವರಾಮ ಇವರ ಚರಣಗಳನ್ನು ಸ್ಪರ್ಶಿಸಿ ‘ಇವರು ಭಗವಂತನ ರೂಪವೇ ಆಗಿದ್ದಾರೆ’, ಎಂದು ಹೇಳುವುದು

ಒಬ್ಬ ಕೆಲಸದವಳು ಚಿಕ್ಕ ಮಕ್ಕಳ ತೀವ್ರ ನಿಗಾ ಘಟಕವನ್ನು ಸ್ವಚ್ಛ ಮಾಡಲು ಬರುತ್ತಿದ್ದಳು. ಅವಳು ಒಮ್ಮೆ ಪೂ. ಭಾರ್ಗವರಾಮ ಇವರ ಚರಣಗಳನ್ನು ಸ್ಪರ್ಶಿಸುತ್ತ, “ಇವರು ಭಗವಂತನ ರೂಪವೇ ಆಗಿದ್ದಾರೆ” ಎಂದು ಹೇಳಿದಳು. ಅವಳು ಪೂ. ಭಾರ್ಗವರಾಮ ಇವರ ಕಡೆಗೆ ದಿಟ್ಟಿಸಿ ನೋಡುತ್ತಿದ್ದಳು. ಪೂ. ಭಾರ್ಗವರಾಮ ಇವರು ಅವಳಿಗೆ ‘ನೀವು ಇಲ್ಲಿ ತುಂಬಾ ಚೆನ್ನಾಗಿ ಸ್ವಚ್ಛತೆ ಮಾಡಿದ್ದೀರಿ’, ಎಂದು ಹೇಳಿ ಅವಳನ್ನು ಪ್ರಶಂಸಿಸಿದರು.

೬. ಪೂ. ಭಾರ್ಗವರಾಮ ಇವರಲ್ಲಿರುವ ನಿರಂತರ ಸ್ಥಿರತೆಯನ್ನು ನೋಡಿ ನಾನು ದಿನವಿಡಿ ಭಾವಸ್ಥಿತಿಯಲ್ಲಿರುತ್ತಿದ್ದೆನು.

೭. ಪೂ. ಭಾರ್ಗವರಾಮ ಇವರಿಂದ ಸಿಗುವ ಚೈತನ್ಯದಿಂದ ಅರಿವಾದ ಪರಿಣಾಮ !

ಅ. ನನಗೆ ಆಸ್ಪತ್ರೆಯಲ್ಲಿ ಮಲಗಲು ಸ್ಥಳ ಇಲ್ಲದಿರುವುದರಿಂದ ರಾತ್ರಿ ನನಗೆ ನಿದ್ರೆ ಸರಿಯಾಗಿ ಆಗುತ್ತಿರಲಿಲ್ಲ. ನನಗೆ ಕೇವಲ ೩೦ ನಿಮಿಷಗಳಷ್ಟು ಮಲಗಿದ ನಂತರ ೪ ಗಂಟೆ ಮಲಗಿ ಎದ್ದಿರುವಂತೆ ಉತ್ಸಾಹವೆನಿಸುತ್ತಿತ್ತು.

ಆ. ಆಸ್ಪತ್ರೆಯಲ್ಲಿ ನಾನು ರಾತ್ರಿ ಒಬ್ಬಳೇ ಇದ್ದರೂ ನನಗೆ ದಣಿವು ಆಗುತ್ತಿರಲಿಲ್ಲ.

ಇ. ಆಸ್ಪತ್ರೆಯಿಂದ ನಮ್ಮ ಮನೆ ದೂರವಿದೆ; ಆದರೆ ನಾನು ಮನೆಗೆ ಹೋಗಿ ಸ್ನಾನವನ್ನು ಮಾಡಿ ಡಬ್ಬ ತೆಗೆದುಕೊಂಡು ಇತರ ವಿಷಯಗಳನ್ನು ಮಾಡಿ ಆಧುನಿಕ ವೈದ್ಯರು ಪೂ. ಭಾರ್ಗವರಾಮ ಇವರಿಗೆ ಪರೀಕ್ಷಿಸಲು ಬರುವಷ್ಟರಲ್ಲಿ ಮರಳಿ ಬರುತ್ತಿದ್ದೆನು. ಆಗ ನನ್ನ ಎಲ್ಲ ಕೆಲಸಗಳು ಕಡಿಮೆ ಸಮಯದಲ್ಲಿ ಆಗುತ್ತಿದ್ದವು.

೮. ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯಗಳನ್ನು ಮಾಡಿದ ನಂತರ ಪೂ. ಭಾರ್ಗವರಾಮ ಇವರ ಆರೋಗ್ಯ ಬೇಗ ಸುಧಾರಿಸುವುದು

‘ಪೂ. ಭಾರ್ಗವರಾಮ ಇವರ ರಕ್ತದ ವರದಿಯ ಪ್ರಕಾರ ಅವರ ಆರೋಗ್ಯ ಇಷ್ಟೇಕೆ ಹದಗೆಟ್ಟಿದೆ ?’, ಎಂಬುದರ ಕಾರಣವನ್ನು ಆಧುನಿಕ ವೈದ್ಯರಿಗೆ ಮತ್ತು ನನಗೆ ತಿಳಿಯುತ್ತಿರಲಿಲ್ಲ. ಆಗ ‘ಇದರ ಹಿಂದೆ ಖಂಡಿತ ಆಧ್ಯಾತ್ಮಿಕ ಕಾರಣವಿದೆ’, ಎಂಬುದು ನಮ್ಮ ಗಮನಕ್ಕೆ ಬಂದಿತು. ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಪೂ. ಪಾಚ್ಚಿ (ಪೂ. ರಾಧಾ ಅಜ್ಜಿ, ಪೂ. ಭಾರ್ಗವರಾಮ ಇವರ ಮುತ್ತಜ್ಜಿ, ತಂದೆಯ ಅಜ್ಜಿ ಮತ್ತು ಸನಾತನದ ೪೪ ನೇಯ ಸಮಷ್ಟಿ ಸಂತರು) ಇವರಿಬ್ಬರು ಪ್ರತಿದಿನ ಪೂ. ಭಾರ್ಗವರಾಮ ಇವರ ಸಲುವಾಗಿ ನಾಮಜಪವನ್ನು ಮಾಡುತ್ತಿದ್ದರು. ಆ ಇಬ್ಬರು ಸಂತರು ಆಧ್ಯಾತ್ಮಿಕ ಉಪಾಯವನ್ನು ಮಾಡಿದ್ದರಿಂದಲೇ ಪೂ. ಭಾರ್ಗವರಾಮ ಇವರ ಆರೋಗ್ಯವು ಬೇಗನೇ ಸುಧಾರಿಸಿತು.

೯. ಪೂ. ಭಾರ್ಗವರಾಮ ಇವರು ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥದಿಂದ ಹಳದಿ ಬೆಳಕು ಪ್ರಕ್ಷೇಪಿತವಾಗುತ್ತಿರುವುದರಿಂದ ಒಳ್ಳೆಯದೆನಿಸುತ್ತಿದೆ’, ಎಂದು ಹೇಳುವುದು ಮತ್ತು ಪೂ. ವಾಮನ ರಾಜಂದೇಕರ (ಸನಾನತದ ಎರಡನೇ ಬಾಲಕಸಂತರು, ವಯಸ್ಸು ೪) ಇವರೂ ಹಾಗೆ ಹೇಳುವುದು

ಪೂ. ವಾಮನ ರಾಜಂದೇಕರ

ಪೂ. ಭಾರ್ಗವರಾಮ ಇವರು, “ನನ್ನ ಹತ್ತಿರ ಇಟ್ಟಿರುವ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥದಿಂದ ಹಳದಿ ಬೆಳಕು ಪ್ರಕ್ಷೇಪಿತವಾಗುತ್ತಿರುವುದರಿಂದ ನನಗೆ ಒಳ್ಳೆಯದೆನಿಸುತ್ತಿದೆ.” ಯೋಗಾ ಯೋಗದಿಂದ ಅದೇ ದಿನ ಸೌ. ಮಾನಸಿ ಅಕ್ಕನವರು (ಪೂ. ವಾಮನ ರಾಜಂದೇಕರ (ಸನಾತನದ ಎರಡನೇಯ ಬಾಲಕಸಂತರು, ವಯಸ್ಸು ೪) ಇವರ ತಾಯಿಯು (ಆಧ್ಯಾತ್ಮಿಕ ಮಟ್ಟ ಶೇ. ೬೧)) ಸಂಚಾರವಾಣಿಯಿಂದ ನನಗೆ, “ಪೂ. ವಾಮನ ರಾಜಂದೇಕರ ಇವರೂ ಹೀಗೆಯೇ ಹೇಳಿದರು” ಎಂದು ಹೇಳಿದರು. ಅದೇ ದಿನ ಪೂ. ಭಾರ್ಗವರಾಮನವರಿಗೆ ಆಸ್ಪತ್ರೆಯಿಂದ ಮನೆಗೆ ಹೋಗಲು ಹೇಳಿದರು.

೧೦. ಕೃತಜ್ಞತೆ

ಗುರುದೇವರ ಕೃಪೆಯಿಂದ ನಾನು ಪೂ. ಭಾರ್ಗವರಾಮ ಇವರಲ್ಲಿ ಗುರುದೇವರ ಮೇಲಿನ ಅಪಾರ ಶ್ರದ್ಧೆ ಮತ್ತು ಸ್ಥಿರತೆ ಇರುವ ಈ ಪ್ರಸಂಗಗಳನ್ನು ಬರೆಯಲು ಸಾಧ್ಯವಾಯಿತು. ಅದಕ್ಕಾಗಿ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– ಕೃತಜ್ಞತಾಪೂರ್ವಕ,

– ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು, ಕರ್ನಾಟಕ. (೧೦.೬.೨೦೨೨)