|

ಮಾಜಲಗಾವ (ಜಿಲ್ಲಾ ಬೀಡ) – ಉತ್ತರಪ್ರದೇಶದಲ್ಲಿನ ಕುಖ್ಯಾತ ಗೂಂಡ ಅತಿಕ ಅಹಮದ ಮತ್ತು ಅವನ ಸಹೋದರ ಅಶ್ರಫ್ ಅಹಮದ ನನ್ನು ಏಪ್ರಿಲ್ ೧೫ ರಂದು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಅದರ ನಂತರ ಇಲ್ಲಿಯ ವೃತ್ತದಲ್ಲಿ ಅತಿಕ ಮತ್ತು ಆಶ್ರಫ್ ಅನ್ನು ಬೆಂಬಲಿಸಿ ಹೋರ್ಡಿಂಗ್ಸ್ ಗಳನ್ನು ಹಾಕಲಾಗಿತ್ತು. ಈ ಹೋರ್ಡಿಂಗ್ಸ್ ಗಳ ಮೇಲೆ ಇಬ್ಬರಿಗೂ ‘ಹುತಾತ್ಮ’ರೆಂದು ಉಲ್ಲೇಖಿಸಲಾಗಿತ್ತು ಹಾಗೂ ಹೋರ್ಡಿಂಗ್ಸ್ ನ ಮೇಲೆ ಇಬ್ಬರ ಹತ್ಯೆಯನ್ನು ಬಹಿರಂಗವಾಗಿ ಖಂಡಿಸಲಾಗಿತ್ತು.
#Maharashtra 3 arrested after posters describing gangsters Atiq Ahmed, Ashraf as martyrs put up in Beedhttps://t.co/ivzCFx8fgX
— India TV (@indiatvnews) April 19, 2023
ಇದರ ಬಗ್ಗೆ ಮಾಹಿತಿ ದೊರೆಯುತ್ತಲೇ ಪೊಲೀಸರು ತಕ್ಷಣ ಈ ಹೋರ್ಡಿಂಗ್ಸ್ ಗಳನ್ನು ತೆಗೆದುಹಾಕಿದ್ದಾರೆ. ಇಲ್ಲಿಯ ‘ಮೋಹಸೀನ ಭೈಯ್ಶಾ ಮಿತ್ರ ಮಂಡಳ’ ವತಿಯಿಂದ ಈ ಫಲಕಗಳನ್ನು ಹಾಕಲಾಗಿತ್ತು ಎಂದು ಪೊಲೀಸರು ಹೇಳಿದರು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು. ಮೋಹಸೀನ ಪಟೇಲ್ ಇವನನ್ನು ಪೊಲೀಸರು ಹುಡುಕುತ್ತಿದ್ದಾರೆ.
(ಸೌಜನ್ಯ : Aaj Tak)
ಸಂಪಾದಕೀಯ ನಿಲುವುಇದರಿಂದ ಇಂತಹವರಿಗೆ ಪೊಲೀಸ್ ಮತ್ತು ಕಾನೂನಿನ ಸ್ವಲ್ಪವೂ ಭಯ ಇಲ್ಲದಿರುವುದು ಸ್ಪಷ್ಟವಾಗುತ್ತದೆ ! ಈ ರೀತಿಯ ಗೂಂಡಾಗಳ ಫಲಕ ಹಾಕುವ ಧೈರ್ಯ ಮಾಡುವವರನ್ನು ಆಳವಾಗಿ ವಿಚಾರಣೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!