|

ನವ ದೆಹಲಿ – ಭಾರತದಲ್ಲಿ ರಾಮನವಮಿಯ ಶೋಭಾಯಾತ್ರೆಯ ಸಮಯದಲ್ಲಿ ನಡೆದ ಹಿಂಸಾಚಾರದ ಬಗ್ಗೆ ನಾವು ಕಳವಳ ವ್ಯಕ್ತ ಪಡಿಸುತ್ತಿದ್ದೇವೆ. ಭಾರತದಲ್ಲಿನ ಮುಸಲ್ಮಾನರನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ, ಎಂದು ‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್’ (OIC) ಈ ಇಸ್ಲಾಮಿ ದೇಶದ ಸಂಘಟನೆಗಳಿಂದ ಮನವಿ ಜಾರಿ ಮಾಡಿ ಹೇಳಿದೆ.
OIC General Secretariat Denounces Acts of Violence Against #Muslims in Several States in #India: https://t.co/jJ6a8AlzEG #NoToIslamophobia #EndIslamophobia pic.twitter.com/BxoRvk0wj4
— OIC (@OIC_OCI) April 4, 2023
OICಯ ಕಾರ್ಯದರ್ಶಿಯಿಂದ ಜಾರಿ ಮಾಡಿದ ಮನವಿಯಲ್ಲಿ ಬಿಹಾರದ ಬಿಹಾರ ಶರೀಫನಲ್ಲಿ ಮಾರ್ಚ್ ೩೧ ರ ಹಿಂಸಾಚಾರದ ವಿಶೇಷವಾಗಿ ಉಲ್ಲೇಖ ಮಾಡಲಾಗಿದೆ. ಇದರಲ್ಲಿ, ಇಲ್ಲಿ ಹಿಂದೂಗಳ ಗುಂಪಿನಿಂದ ಮದರಸಗಳು ಮತ್ತು ಒಂದು ಗ್ರಂಥಾಲಯಕ್ಕೆ ಬೆಂಕಿ ಹಚ್ಚಲಾಗಿತ್ತು. ನಾವು ಇಂತಹ ಹಿಂಸಾಚಾರವನ್ನು ಖಂಡಿಸುತ್ತೇವೆ. ಭಾರತೀಯ ಅಧಿಕಾರಿಗಳು ಇಂತಹ ಘಟನೆಯಲ್ಲಿನ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೂ ದೇಶದಲ್ಲಿನ ಮುಸಲ್ಮಾನರಿಗೆ ಸುರಕ್ಷೆ, ಹಕ್ಕು ಮತ್ತು ಗೌರವ ನೀಡಲು ನಾವು ಕರೆ ನೀಡುತ್ತೇವೆ. ಈ ರೀತಿಯ ಹಿಂಸಾಚಾರದ ಘಟನೆ ಇದು ಇಸ್ಲಾಮಿದ್ವೇಷದ ಜ್ವಲಂತ ಉದಾಹರಣೆ ಇದೆ ಎಂದು ಹೇಳಿದೆ.
OICಯ ಮನವಿ ಎಂದರೆ ಮತಾಂಧ ಮಾನಸಿಕತೆಯ ನಿದರ್ಶನ ! – ಭಾರತದಿಂದ ಕಪಾಳ ಮೋಕ್ಷ
ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ ಬಾಗಚಿ ಇವರು OICಯ ಮನವಿಯನ್ನು ಟೀಕಿಸಿದರು. ಅವರು, ನಾವು ಭಾರತದ ಬಗ್ಗೆ OIC ಇಂದ ಜಾರಿ ಮಾಡಲಾದ ಮನವಿ ಖಂಡಿಸುತ್ತೇವೆ, OICಯ ಮನವಿ ಅದರ ಮತಾಂಧ ಮಾನಸಿಕತೆ ಮತ್ತು ಭಾರತ ವಿರೋಧಿ ನೀತಿಯ ಒಂದು ನಿದರ್ಶನವಾಗಿದೆ. ಭಾರತ ವಿರೋಧಿ ಶಕ್ತಿಯ ಪ್ರಭಾವಕ್ಕೆ ಒಳಗಾಗಿ OIC ತನ್ನ ಪ್ರತಿಷ್ಠೆಗೆ ಹಾನಿ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
Our response to media queries on the statement issued by OIC Secretariat regarding India:https://t.co/CYtJely0hO pic.twitter.com/VnGUVyqXpf
— Arindam Bagchi (@MEAIndia) April 4, 2023
ಸಂಪಾದಕೀಯ ನಿಲುವುಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಈ ಇಸ್ಲಾಮಿ ದೇಶಗಳಲ್ಲಿ ಹಿಂದೂಗಳ ಮೇಲೆ ಪ್ರತಿದಿನ ನಡೆಯುವ ದಾಳಿಯ ಬಗ್ಗೆ, ಹಿಂದೂಗಳ ಹುಡುಗಿಯರ ಅಪಹರಣದ ಬಗ್ಗೆ OIC ಕಿವುಡು ಮತ್ತು ಕುರುಡಾಗೆ ಇರುತ್ತದೆಯೇ ? ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದರೆ ಅದು ಯೋಗ್ಯ ಮತ್ತು ಹಿಂದೂಗಳು ಸ್ವರಕ್ಷಣೆಗಾಗಿ ಪ್ರಯತ್ನ ಮಾಡಿದರೆ, ತಕ್ಷಣ OIC ಗೆ ಮುಸಲ್ಮಾನರ ಮೇಲೆ ಕನಿಕರ ಬರುತ್ತದೆ, ಇದನ್ನು ತಿಳಿದುಕೊಳ್ಳಿ ! ಖಡ್ಗ, ಬಂದೂಕು, ಬಾಂಬ್ ಮುಂತಾದರ ಮೂಲಕ ಹಿಂದೂಗಳ ಮೇಲೆ ದಾಳಿ ಮಾಡುವ ಮುಸಲ್ಮಾನರು ಭಾರತದಲ್ಲಿ ಅಸುರಕ್ಷಿತವಾಗಿ ಇದ್ದಾರೆ, ಹೇಗೆ ಎಂದಾದರೂ ಯಾರಾದರೂ ಹೇಳಲು ಸಾಧ್ಯವೇ ? |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !