|

ಹಾಸನ – ರಾಜ್ಯದ ಬೇಲೂರಿನ ಐತಿಹಾಸಿಕ ದೇವಸ್ಥಾನ ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಓದಬಾರದು; ಎಂದು ಹಿಂದೂತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಮಾರ್ಚ್ ೨೮ ರಂದು ದೇವಸ್ಥಾನದ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು. ಏಪ್ರಿಲ್ ೪ ಮತ್ತು ೫ ರಂದು ಈ ರಥೋತ್ಸವ ಆಯೋಜಿಸಲಾಗಿದೆ. ಈ ರಥೋತ್ಸವ ದಿನದಂದು ಕುರಾನ್ ಓದುವ ಪರಂಪರೆ ಇದೆ. ಪ್ರತಿವರ್ಷ ಇದಕ್ಕೆ ವಿರೋಧ ವ್ಯಕ್ತವಾಗುತ್ತದೆ; ಆದರೆ ಈ ವರ್ಷ ಕುರಾನ್ ಓದಬಾರದೆಂದು ಹಿಂದುತ್ವನಿಷ್ಠ ಸಂಘಟನೆಗಳು ಹೆಚ್ಚು ಕಾರ್ಯನಿರತವಾಗಿವೆ.
(ಸೌಜನ್ಯ : ಏಷ್ಯಾನೆಟ್ ಸುವರ್ಣ)
ಇಲ್ಲಿ ಪ್ರತಿಭಟನೆ ನಡೆಯುವಾಗ ಬೈಕಿನಲ್ಲಿ ಬಂದ ಓರ್ವ ಮುಸಲ್ಮಾನ ಯುವಕನು ‘ಕುರಾನ್ ಜಿಂದಾಬಾದ್’ ಎಂದು ಘೋಷಣೆ ನೀಡಿದನು. ಆದ್ದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಅವನನ್ನು ಅಡ್ಡಗಟ್ಟಿದರು. ಆ ಸಮಯದಲ್ಲಿ ಬಜರಂಗದಳದ ಕಾರ್ಯಕರ್ತ ಮತ್ತು ಸಂಬಂಧ ಪಟ್ಟ ಯುವಕ ಇವರಲ್ಲಿ ಮಾತಿನ ಚಕಮಕಿ ನಡೆಯಿತು. ಆದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆ ಸಮಯದಲ್ಲಿ ಪೊಲೀಸರು ಪರಿಸ್ಥಿತಿ ಹದಗೆಡಬಾರದೆಂದು; ಲಾಠಿಚಾರ್ಜ್ ಮಾಡಿದರು. ಹಾಗೂ ಸಂಬಂಧಪಟ್ಟ ಯುವಕನನ್ನು ವಶಕ್ಕೆ ಪಡೆದರು. ಘಟನಾ ಸ್ಥಳದಲ್ಲಿ ಪೊಲೀಸರ ಹೆಚ್ಚಿನ ಬಂದೋಬಸ್ತ್ ನೇಮಿಸಲಾಗಿದೆ.
ಸಂಪಾದಕರ ನಿಲುವುಮೊಹರಂ ಮೆರವಣಿಗೆಯಲ್ಲಿ ಶ್ರೀಮದ್ ಭಗವದ್ಗೀತೆಯ ಅಥವಾ ವೇದಮಂತ್ರ ಪಠಣ ಎಂದಾದರೂ ಆಗುತ್ತದೆಯೆ ? ಅಥವಾ ಹೀಗಾಗಲು ಸಾಧ್ಯವೇ ? ಆದ್ದರಿಂದ ಹಿಂದೂಗಳು ಮಾತ್ರ ಸರ್ವಧರ್ಮಸಮಭಾವ ಎಷ್ಟು ದಿನ ತೋರಿಸಬೇಕು ? |
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ಭಾರತದ ಮಹಾನ್ ಗಣಿತಜ್ಞ ‘ಆರ್ಯಭಟ’ ಅವರ ವಿಡಂಬನೆ; ಹಿಂದೂ ಜನಜಾಗೃತಿ ಸಮಿತಿಯಿಂದ ‘ಅಮೆಜಾನ್ ಇಂಡಿಯಾ’ಗೆ ಕಾನೂನು ನೋಟಿಸ್ !
ಯುವತಿಗೆ ಬಲವಂತವಾಗಿ ಗರ್ಭಪಾತ ಮಾತ್ರೆ ನೀಡಿದ ಮುಸ್ಲಿಂ ಯುವಕ; ಯುವತಿ ಸಾವು!
ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಶಿಖರದ ಮೇಲೆ ಸುವರ್ಣ ಕಳಸ ವಿರಾಜಮಾನ !