ಸರಕಾರವೇ ವೆಬ್‌ಸಿರಿಸ್ ಮೇಲೆ ನಿಯಂತ್ರಣವಿಟ್ಟು ಸೆನ್ಸಾರ್ ಬೋರ್ಡ್ ಜಾರಿಗೆ ತರಬೇಕು ! – ಸತೀಶ ಕಲ್ಯಾಣಕರ್, ಮಾಜಿ ಸದಸ್ಯರು, ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾದ ‘ಓಟಿಟಿ’ಯ ವೆಬ್ ಸಿರಿಸ್‌ಗಳೊ ಅಥವಾ ಅಶ್ಲೀಲ ಮಾಧ್ಯಮಗಳೋ ?’ ಈ ವಿಷಯದ ಆನ್‌ಲೈನ್ ಕುರಿತು ವಿಶೇಷ ಸಂವಾದ !

(ಟಿಪ್ಪಣಿ : ‘ಓಟಿಟಿ ಅಂದರೆ ‘ಓವರ ದ ಟಾಪ್ ! ಚಲನಚಿತ್ರ ಇತ್ಯಾದಿ ನೋಡಲು ಆನ್‌ಲೈನ್ ಮಾಧ್ಯಮ)

ಶ್ರೀ. ಸತೀಶ ಕಲ್ಯಾಣಕರ

ಮುಂಬೈ– ಇಂದು ವೆಬ್ ಸಿರೀಸ್ ಪರಿಣಾಮಕಾರಿ ಮಾಧ್ಯಮವಾಗಿ ಮಾರ್ಪಟ್ಟಿದೆ. ವೆಬ್ ಸರಣಿ/ಓ.ಟಿ.ಟಿ.ಗೆ ಯಾವುದೇ ಸೆನ್ಸಾರ್‌ಶಿಪ್ ವಿಧಿಸಲಾಗಿಲ್ಲ. ವೆಬ್ ಸಿರೀಸ್ ಮೇಲೆ ಸರಕಾರ ನಿಯಂತ್ರಣ ಹೇರಬೇಕು. ವೆಬ್ ಸಿರೀಸ್ ಜೊತೆ ವಾಹಿನಿಗಳಲ್ಲಿ ತೋರಿಸಲಾಗುವ ಸಿರೀಸ್‌ಗಳು, ಕಾರ್ಯಕ್ರಮಗಳ ಮೇಲೆಯೂ ಸೆನ್ಸಾರ್ ಬೋರ್ಡ್ ಜಾರಿಗೊಳಿಸಬೇಕು, ಎಂದು ‘ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿಯ ಮಾಜಿ ಸದಸ್ಯ ಶ್ರೀ. ಸತೀಶ ಕಲ್ಯಾಣಕರ್ ಇವರು ಆಗ್ರಹಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಓ.ಟಿ.ಟಿ.ಯ ವೆಬ್ ಸಿರಿಸ್‌ಗಳೋ ಅಥವಾ ಅಶ್ಲೀಲ ಮಾಧ್ಯಮಗಳೋ ? ಈ ವಿಷಯದ ಕುರಿತು ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ವೆಬ್ ಸಿರೀಸ್‌ಗಳಿಂದ ಮಕ್ಕಳ ಮೇಲೆ ವಿದಾರಕ ಪರಿಣಾಮವಾಗುತ್ತಿದೆ ! – ಗಾಯತ್ರಿ ಎನ್, ಸಂಸ್ಥಾಪಕಿ,

ಗಾಯತ್ರಿ ಎನ್

ಭಾರತ ವಾಯಿಸ್ ಚಲನಚಿತ್ರಗಳಿಗೆ ಸೆನ್ಸರ್ ಬೋರ್ಡ್ ಇದೆ ಆದರೆ ವೆಬ್‌ಸಿರಿಸ್ ಮತ್ತು ಓಟಿಟಿ ಇವುಗಳಿಗೆ ಅವು ಅನ್ವಯವಾಗಿರುವುದು ಕಾಣಿಸುತ್ತಿಲ್ಲ. ವೆಬ್ ಸಿರೀಸ್‌ನ ಸಂವಾದದಿಂದ ಬಳಸುವ ಅವಾಚ್ಯ ಭಾಷೆ ಮತ್ತು ತೋರಿಸಲಾಗುವ ಹಿಂಸೆಯಿಂದಾಗಿ ದೇಶ-ವಿದೇಶಗಳಲ್ಲಿನ ಮಕ್ಕಳೂ ಅದನ್ನು ಅನುಸರಿಸುತ್ತಿದ್ದಾರೆ. ಇದನ್ನು ತಡೆಯುವುದು ಆವಶ್ಯಕವಾಗಿದೆ.

ವೆಬ್ ಸಿರೀಸ್ ವಿರುದ್ಧ ಸರಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ತನಕ ಹೋರಾಡುತ್ತೇವೆ ! – ನ್ಯಾಯವಾದಿ ಅಮಿತಾ ಸಚದೇವ, ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ನ್ಯಾಯವಾದಿ ಅಮಿತಾ ಸಚದೇವ

‘ಇಂದು ವೆಬ್ ಸಿರೀಸ್‌ಗಳ ಮೂಲಕ ಹಿಂಸೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಹಿಂದೂ ಧರ್ಮ, ದೇಶದ ಸೇನೆ ಇವುಗಳ ತಪ್ಪು ಚಿತ್ರಣವನ್ನು ತೋರಿಸುವ ವೆಬ್ ಸಿರೀಸ್‌ಗಳಿಗೆ ಸೆನ್ಸಾರ್ ಬೋರ್ಡ್ ಇಲ್ಲ. ಈ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಕಳೆದ ಕೆಲವು ವರ್ಷಗಳಿಂದ ನ್ಯಾಯಾಂಗ ಹೋರಾಟ ನಡೆಸುತ್ತಿದೆ. ಈ  ಬಗ್ಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವವರೆಗೂ ಈ ಹೋರಾಟ ಮುಂದುವರಿಯಲಿದೆ.

ಸೆನ್ಸಾರ್ ಬೋರ್ಡ್ ನ ವ್ಯಕ್ತಿಗಳಿಗೆ ತರಬೇತಿ ನೀಡದಿರುವುದು ಆಘಾತಕಾರಿ – ಶ್ರೀ. ಸತೀಶ ಕಲ್ಯಾಣಕರ

‘ಸೆನ್ಸಾರ್ ಬೋರ್ಡ್ ಈಗಾಗಲೇ ಸೂಕ್ತ ಮತ್ತು ತಿಳಿದಿರುವ ವ್ಯಕ್ತಿಗಳನ್ನು ನೇಮಿಸಿಲ್ಲ. ಸೆನ್ಸಾರ್ ಮಂಡಳಿಯಲ್ಲಿರುವ ಜನರಿಗೆ ದೇಶ, ಸಮಾಜ ಮತ್ತು ಸಂಸ್ಕೃತಿಯ ಬಗ್ಗೆ ಅವರ ಜವಾಬ್ದಾರಿಯ ಬಗ್ಗೆ ಕಾನೂನುಗಳು ಯಾವುವು ಎಂದು ತಿಳಿದಿದೆಯೇ ? ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರದೊಂದಿಗೆ ಪತ್ರ ವ್ಯವಹಾರ ನಡೆಸಿದ್ದೇನೆ. ಸೆನ್ಸಾರ್ ಬೋರ್ಡ್‌ಗೆ ನೇಮಕಗೊಂಡವರಿಗೆ ತರಬೇತಿ ನೀಡಲು ಅವಕಾಶವಿದ್ದರೂ ತರಬೇತಿ ನೀಡದಿರುವುದು ಆಘಾತಕಾರಿಯಾಗಿದೆ. ಸೆನ್ಸಾರ್ ಬೋರ್ಡ್‌ನ ತರಬೇತಿಯಲ್ಲಿ ಉತ್ತೀರ್ಣರಾದವರಿಗೆ ಅಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು.