
ಟೊರೆಂಟೊ(ಕೆನಡಾ)- ನಮಗೆ ಪಂಜಾಬಿನ ಘಟನಾವಳಿಗಳ ಬಗ್ಗೆ ತಿಳಿದಿದೆ. ನಾವು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಸಿಕ್ಖ್ ಸಮಾಜದ ಜನರ ಚಿಂತೆಯನ್ನು ದೂರ ಮಾಡುವ ಪ್ರಯತ್ನವನ್ನು ಮುಂದುವರಿಸುತ್ತೇವೆ ಎಂದು ಕೆನಡಾ ವಿದೇಶಾಂಗ ಸಚಿವ ಮೆಲಾನಿ ಜೊಲಿಯವರು ಕೆನಡಾ ಸದನದಲ್ಲಿ ಉತ್ತರಿಸಿದರು. ಸಿಕ್ಖ ಶಾಸಕ ಇಕವಿಂದರ ಗಹೀರ ಇವರು `ಭಾರತದ ಪಂಜಾಬನಲ್ಲಿ ಇಂಟರನೆಟ ಸ್ಥಗಿತಗೊಳಿಸಲಾಗಿದೆ. ಪಂಜಾಬಿನಲ್ಲಿರುವ ಕೆನಡಾದ ಜನರಿಗೆ ಸಂಬಂಧಿಕರು, ಮಿತ್ರರೊಂದಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.
Thank you for the update, Minister. https://t.co/mslnLgRJLA
— Sonia Sidhu (@SoniaLiberal) March 24, 2023
ಶಾಸಕ ಸೋನಿಯಾ ಸಿದ್ಧೂ ಇವರು ಟ್ವೀಟ ಮಾಡಿ, `ನನಗೆ ಪಂಜಾಬಿನಿಂದ ದೂರವಾಣಿ ಕರೆಗಳು ಬರುತ್ತಿವೆ,ನಾನು ಇದರಿಂದ ಬಹಳ ಚಿಂತೆಗೊಳಗಾಗಿದ್ದೇನೆ. ಈ ಸ್ಥಿತಿ ಬೇಗನೆ ತಿಳಿಗೊಳ್ಳುವುದು ಮತ್ತು ಕೆನಡಾ ಜನರು ತಮ್ಮಕುಟುಂಬದವರೊಂದಿಗೆ ಪುನಃ ಸಂಪರ್ಕ ಸಾಧಿಸಬಹುದು’ಎಂದು ಆಶಿಸುತ್ತೇನೆಂದು ಹೇಳಿದರು. 2021 ರ ಜನಗಣತಿಯನುಸಾರ ಕೆನಡಾದಲ್ಲಿ 9 ಲಕ್ಷ 50 ಸಾವಿರ ಸಿಕ್ಖ್ ಜನಸಂಖ್ಯೆಯಿದೆ. ಇದು ದೇಶದ ಜನಸಂಖ್ಯೆಯ ಶೇ. 2.6 ರಷ್ಟು ಇದೆ.
I am receiving calls from my residents and am deeply concerned about reports coming out of Punjab, India regarding SMS and internet blackouts.
I hope the situation is resolved soon & Canadians travelling to the region are able to connect with their families and friends in Canada.— Sonia Sidhu (@SoniaLiberal) March 19, 2023
ಕೆನಡಾದಲ್ಲಿರುವ ಓಂಟಾರಿಯೋದಲ್ಲಿ ಖಲಿಸ್ತಾನಿಗಳು ಮಾರ್ಚ 24 ರಂದು ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಅಪಮಾನಿಸಿ ಅದಕ್ಕೆ ಹಾನಿ ಮಾಡಿದ್ದರು.
ಸಂಪಾದಕೀಯ ನಿಲುವುಕೆನಡಾ ವಿದೇಶಾಂಗ ಸಚಿವರು ಭಾರತದ ಬದಲಾಗಿ ಕೆನಡಾದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ಖಲಿಸ್ತಾನವಾದಿಗಳಿಂದ ನಡೆಯುವ ಆಕ್ರಮಣದ ಕಡೆಗೆ ಗಮನಹರಿಸುವ ಆವಶ್ಯಕತೆಯಿದೆ. |
Hormuz Oil Tankers Explodes : ಎರಡು ತೈಲ ಟ್ಯಾಂಕರ್ ನೌಕೆಗಳಲ್ಲಿ ಸ್ಫೋಟ
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia