ಹಮಿರಪುರ್ (ಉತ್ತರಪ್ರದೇಶ) ಇಲ್ಲಿ ದುಷ್ಕರ್ಮಿಗಳಿಂದ ದೇವಸ್ಥಾನದಲ್ಲಿನ ಶಿವಲಿಂಗ ಧ್ವಂಸ !

ಶಿವಲಿಂಗ ಮತ್ತು ನಂದಿಯ ಕಳವು !

ಹಮಿರಪುರ್ (ಉತ್ತರಪ್ರದೇಶ) – ಇಲ್ಲಿಯ ಬಾಂಧುರ ಖುರ್ದ ಗ್ರಾಮದ ಹೊರಗಿನ ದೇವಸ್ಥಾನದಲ್ಲಿನ ಶಿವಲಿಂಗ ಮತ್ತು ನಂದಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿ ಅದನ್ನು ಕಳವು ಮಾಡಿರುವ ಘಟನೆ ನಡೆದಿದೆ. ಇದರಿಂದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ಘಟನೆಯ ವಿಚಾರಣೆ ನಡೆಸುತ್ತಿದ್ದಾರೆ. ಈ ದೇವಸ್ಥಾನದಲ್ಲಿ ಯಾವುದೇ ಅರ್ಚಕರ ನೇಮಕ ಮಾಡಿರಲಿಲ್ಲ. ಈ ದೇವಸ್ಥಾನ ಗ್ರಾಮದಿಂದ ೨೦೦ ಮೀಟರ್ ದೂರದಲ್ಲಿದೆ. ಇದರ ಹತ್ತಿರ ಯಾವುದೇ ಮನೆಗಳಿಲ್ಲ. ಬೆಳಗ್ಗೆ ತೋಟಕ್ಕೆ ಹೋಗುವ ರೈತರು ದೇವಸ್ಥಾನದ ದ್ವಂಸ ಆಗಿರುವುದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾನವೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ

ಸಂಪಾದಕೀಯ ನಿಲುವು

ಇಂತಹ ಘಟನೆ ಯಾವುದಾದರೂ ಚರ್ಚ್ ಅಥವಾ ಮಸೀದಿಯ ಸಂದರ್ಭದಲ್ಲಿ ನಡೆದಿದ್ದರೆ, ಆಗ ‘ದೇಶದಲ್ಲಿ ಅಲ್ಪಸಂಖ್ಯಾತರು ಆಸುರಕ್ಷಿತರಾಗಿದ್ದಾರೆ’, ಎಂದು ಕೂಗಾಡುತ್ತಿದ್ದರು ಮತ್ತು ಹಿಂದುಗಳನ್ನು ತಾಲಿಬಾನಿ ಎಂದು ಹೇಳುತ್ತಿದ್ದರು; ಆದರೆ ಹಿಂದೂಗಳ ಸಂದರ್ಭದಲ್ಲಿ ಘಟನೆ ನಡೆದಿರುವುದರಿಂದ ಎಲ್ಲರೂ ಶಾಂತವಾಗಿದ್ದಾರೆ !