
೧. ‘ಹೊಟ್ಟೆ ಖಾಲಿ ಇದ್ದಾಗ ವ್ಯಾಯಾಮವನ್ನು ಮಾಡಬೇಕು. ತಿಂದ ನಂತರ ಕೂಡಲೇ ವ್ಯಾಯಾಮ ಮಾಡಬಾರದು. ತಿಂದ ನಂತರ ವ್ಯಾಯಾಮ ಮಾಡುವುದಿದ್ದರೆ ನಡುವೆ ಒಂದೂವರೆಯಿಂದ ೩ ಗಂಟೆಗಳ ಅಂತರವಿರಬೇಕು.
೨. ವ್ಯಾಯಾಮ ಮಾಡಿದ ನಂತರ ಕೂಡಲೇ ತಿನ್ನಬಾರದು. ಕನಿಷ್ಟ ಪಕ್ಷ ೧೫ ನಿಮಿಷ ಸಮಯವನ್ನಾದರೂ ಬಿಡಬೇಕು. ವ್ಯಾಯಾಮದ ನಂತರ ಸ್ನಾನ ಮಾಡುವುದಿದ್ದರೆ ಅದನ್ನು ೧೫ ನಿಮಿಷಗಳ ನಂತರ ಮಾಡಬೇಕು. ‘ವ್ಯಾಯಾಮ, ಸ್ನಾನ ಮತ್ತು ತಿನ್ನುವುದು, ಈ ರೀತಿ ಅನುಕ್ರಮಗಳಿರಬೇಕು.
೩. ವ್ಯಾಯಾಮದ ಮೊದಲು, ವ್ಯಾಯಾಮವನ್ನು ಮಾಡುವಾಗ ಮಧ್ಯಮಧ್ಯದಲ್ಲಿ, ಹಾಗೆಯೇ ವ್ಯಾಯಾಮ ಮಾಡಿದ ನಂತರ ಆವಶ್ಯಕತೆಗನುಸಾರ ೧-೨ ಗುಟುಕು ನೀರನ್ನು ಕುಡಿಯ ಬಹುದು; ಆದರೆ ಒಂದೇ ಸಲಕ್ಕೆ ಬಹಳ ನೀರು ಕುಡಿಯಬಾರದು.
‘ಕುತ್ತಿಗೆ, ಭುಜ ಇತ್ಯಾದಿ ಅವಯವಗಳಿಗಾಗಿ ಸ್ವಲ್ಪ ಸಮಯ ಮಾಡುವ ವ್ಯಾಯಾಮಗಳು ಮತ್ತು ತುಂಬಾ ಶ್ರಮವಾಗುವುದಿಲ್ಲ, ಅಂತಹ ವ್ಯಾಯಾಮಗಳು, ಅಂದರೆ ‘ಸೂಕ್ಷ್ಮ ವ್ಯಾಯಾಮ. ಸೂಕ್ಷ್ಮ ವ್ಯಾಯಾಮಗಳ ಸಂದರ್ಭದಲ್ಲಿ ಮೇಲಿನ ನಿಯಮವನ್ನು ಪಾಲಿಸುವ ಆವಶ್ಯಕತೆ ಇರುವುದಿಲ್ಲ.
– ವೈದ್ಯ ಮೇಘರಾಜ ಮಾಧವ ಪರಾಡಕರ
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!