ಹಲಾಲ ಪ್ರಮಾಣಪತ್ರದ ಬಗ್ಗೆ ವಿಚಾರಣೆ ಮಾಡಲು ಮನವಿ ಮಾಡುತ್ತೇನೆ !

ಭಾಜಪದ ರಾಷ್ಟ್ರೀಯ ವಕ್ತಾರರಾದ ಪ್ರೇಮ ಶುಕ್ಲಾರವರಿಂದ ಆಶ್ವಾಸನೆ !

ಶ್ರೀ. ರಮೇಶ ಶಿಂದೆಯವರು ಸಂಕಲಿಸಿರುವ ‘ಹಲಾಲ ಜಿಹಾದ’ ಎಂಬ ಪುಸ್ತಕವನ್ನು ಶ್ರೀ. ಪ್ರೇಮ ಶುಕ್ಲಾ ಇವರಿಗೆ ಉಡುಗೊರೆಯಾಗಿ ನೀಡಲಾಯಿತು

ವಾರಾಣಸಿ, ಮಾರ್ಚ ೨ (ವಾರ್ತೆ) – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರರಾದ ಶ್ರೀ. ಪ್ರೇಮ ಶುಕ್ಲಾರವರನ್ನು ಭೇಟಿಯಾದರು. ಈ ಸಮಯದಲ್ಲಿ ಶ್ರೀ. ರಮೇಶ ಶಿಂದೆಯವರು ‘ಹಲಾಲ ಪ್ರಮಾಣಪತ್ರದಿಂದ ನಡೆಯುತ್ತಿರುವ ಸಮಾನಾಂತರ ಆರ್ಥಿಕ ವ್ಯವಸ್ಥೆ ಹಾಗೂ ಅದರ ಅಪಾಯ’ದ ಸಂದರ್ಭದಲ್ಲಿ ಶುಕ್ಲಾರವರಿಗೆ ಮಾಹಿತಿ ನೀಡಿದರು. ಆಗ ಶುಕ್ಲಾರವರು ‘ಭಾಜಪದ ನೇತೃತ್ವದ ಬಳಿ ಈ ವಿಷಯದಲ್ಲಿ ಆಳವಾದ ತನಿಖೆ ಮಾಡಬೇಕಾಗಿ ಮನವಿ ಮಾಡುತ್ತೇನೆ’ ಎಂಬ ಆಶ್ವಾಸನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀ. ರಮೇಶ ಶಿಂದೆಯವರು ಸಂಕಲಿಸಿರುವ ‘ಹಲಾಲ ಜಿಹಾದ’ ಎಂಬ ಪುಸ್ತಕವನ್ನು ಅವರಿಗೆ ಉಡುಗೊರೆಯಾಗಿ ನೀಡಲಾಯಿತು.