ತಮಿಳುನಾಡಿನ ಕನ್ಯಾಕುಮಾರಿಯ ಮಂಡಯಿಕ್ಕಡು ಭಗವತಿ ಅಮ್ಮನ ದೇವಸ್ಥಾನದಲ್ಲಿನ ಘಟನೆ !

ಚೆನ್ನೈ – ತಮಿಳುನಾಡಿನ ಕನ್ಯಾಕುಮಾರಿಯ ಮಂಡಯಿಕ್ಕಡೂ ಭಗವತಿ ಅಮ್ಮನ ದೇವಸ್ಥಾನದಲ್ಲಿ ‘ಹೈಂದವ ಸೇವಾ ಸಂಗಮ್’ ಈ ಹಿಂದೂ ಸಂಘಟನೆಗೆ ಧಾರ್ಮಿಕ ಪರಿಷತ್ತು ಆಯೋಜಿಸಲು ಡಿ.ಎಮ್.ಕೆ ಸರಕಾರವು ನಿರ್ಬಂಧ ಹೇರಿದೆ. ಈ ದೇವಸ್ಥಾನದಲ್ಲಿ ಕಳೆದ 89 ವರ್ಷಗಳಿಂದ ಈ ಪರಿಷತ್ತು ಆಯೋಜಿಸಲಾಗುತ್ತಿತ್ತು. ಬ್ರಿಟಿಶರ ಅಧಿಕಾರಾವಧಿಯಲ್ಲಿ ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡುವುದು ಮತ್ತು ಕ್ರೈಸ್ತ ಮಿಶನರಿಗಳಿಂದ ಹಿಂದೂಗಳ ಮತಾಂತರ ತಡೆಯುವುದೇ ಈ ಪರಿಷತ್ತನ್ನು ಆಯೋಜಿಸುವ ಉದ್ದೇಶವಾಗಿತ್ತು.
Tamil Nadu: How The DMK Government Seeks To Break An 89-Year-Old Tradition Of This Devi Temple
HRCE is now trying to ban the religious conference that Haindava Seva Sangham, from 89 years, traditionally organises in Mandaikadu.@arvindneela https://t.co/8eMO6gtvxU— Swarajya (@SwarajyaMag) February 14, 2023
1936 ರಿಂದ ಯಾವುದೇ ಅಡೆತಡೆಗಳಿಲ್ಲದೇ ಈ ಪರಿಷತ್ತನ್ನು ದೇವಸ್ಥಾನದಲ್ಲಿ ಆಯೋಜಿಸಲಾಗುತ್ತಿತ್ತು; ಆದರೆ ಈ ವರ್ಷ ಡಿ.ಎಮ್.ಕೆ ಸರಕಾರವು, ‘ದೇವಸ್ಥಾನದಲ್ಲಿ ಯಾವುದೇ ರೀತಿಯ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಬಾರದು’, ಎಂದು ಹೇಳಿ ಈ ಪರಿಷತ್ತಿಗೆ ಅನುಮತಿಯನ್ನು ನಿರಾಕರಿಸಿದೆ. ‘ಹೈಂದವ ಸೇವಾ ಸಂಗಮ’ವು ಪರಿಷತ್ತಿನ ಆಯೋಜನೆಯನ್ನು ಮಾಡಿ ಕಾರ್ಯಕ್ರಮದ ಪತ್ರಿಕೆಯನ್ನು ಪ್ರಸಾರ ಕೂಡ ಮಾಡಿತ್ತು. ಅದಕ್ಕಾಗಿ ಮಂಟಪವನ್ನು ಕೂಡ ನಿರ್ಮಿಸಲಾಗಿತ್ತು; ಆದರೆ ಸರಕಾರವು ಕೊನೆಯ ಕ್ಷಣದಲ್ಲಿ ಪರಿಷತ್ತಿಗೆ ಅನುಮತಿ ನಿರಾಕರಿಸಿದೆ.
ಸಂಪಾದಕೀಯ ನಿಲುವುತಮಿಳುನಾಡಿನ ಡಿ.ಎಮ್.ಕೆ ಸರಕಾರದ ಹಿಂದೂದ್ವೇಷ ! ತಮಿಳುನಾಡಿನಲ್ಲಿ ಡಿ.ಎಮ್.ಕೆ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಪರಿಣಾಮಕಾರಿ ಹಿಂದೂ ಸಂಘಟನೆಯಿಂದಲೇ ಅವುಗಳನ್ನು ತಡೆಯಲು ಸಾಧ್ಯ ! |
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!