ಹೊಸ ರೈಲು ಮಾರ್ಗದ ನಿರ್ಮಾಣದಲ್ಲಿ ದೇವಸ್ಥಾನ ಅಡಚಣೆಯಾದಾಗಾ ರೈಲ್ವೆ ಇಲಾಖೆಯಿಂದ ಶ್ರೀ ಹನುಮಂತನಿಗೆ ನೋಟಿಸ್ !

  • ಅತಿಕ್ರಮಣರನ್ನಾಗಿ ಮಾಡಿದರು ಶ್ರೀ ಹನುಮಂತನನ್ನು !

  • ಶ್ರೀ ಹನುಮಂತ ತಾವಾಗಿಯೇ ದೇವಸ್ಥಾನವನ್ನು ತೆರವುಗೊಳಿಸದಿದ್ದರೇ ಆಡಳಿತವರ್ಗದಿಂದ ಅದನ್ನು ತೆರವುಗೊಳಿಸಿ ಅದರ ಖರ್ಚನ್ನು ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ !

ಮುರೈನಾ (ಮಧ್ಯಪ್ರದೇಶ) – ಇಲ್ಲಿ ರೈಲ್ವೆ ಇಲಾಖೆಯಿಂದ ರೈಲ್ವೆ ಭೂಮಿಯಲ್ಲಿರುವ ಶ್ರೀ ಹನುಮಂತ ದೇವಸ್ಥಾನದಲ್ಲಿನ ಭಗವಾನ್ ಶ್ರೀ ಹನುಮಂತನಿಗೆ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ ನಲ್ಲಿ ಶ್ರೀ ಹನುಮಂತನಿಗೆ ಅತಿಕ್ರಮಣಕಾರ ಎಂದು ಹೇಳಿ ಏಳು ದಿನದಲ್ಲಿ ದೇವಸ್ಥಾನ ತೆರವುಗೊಳಿಸಲು ಹೇಳಿದೆ. ದೇವಸ್ಥಾನ ಏನಾದರೂ ತೆರವುಗೊಳಿಸದಿದ್ದರೆ ಆಗ ರೈಲ್ವೆ ಇಲಾಖೆಯು ತಾವಾಗಿ ಕ್ರಮ ಕೈಗೊಂಡು ಅದರ ಖರ್ಚು ಕೂಡ ವಸೂಲಿ ಮಾಡುವುದು ಎಂದು ಹೇಳಿದೆ.
ಗ್ವಾಲ್ಹೆರ-ಶ್ಯೋಪೂರ ‘ಬ್ರಾಡ್ ಗೇಜ್ ರೈಲ್ವೆ ಲೈನ್’ ನ ಕೆಲಸ ನಡೆಯುತ್ತಿದೆ. ಸಬಲಗಡ ತಾಲೂಕಿನಲ್ಲಿ ಹನುಮಂತನ ದೇವಸ್ಥಾನ ಈ ಮಾರ್ಗದ ಮಧ್ಯ ಬರುತ್ತದೆ. ಈ ಭೂಮಿ ರೈಲ್ವೆಯದಾಗಿದ್ದು ಅದರಲ್ಲಿ ಈ ದೇವಸ್ಥಾನ ಕಟ್ಟಲಾಗಿದೆ. ಆದ್ದರಿಂದ ರೈಲ್ವೆ ಇಲಾಖೆಯು ನೇರ ಶ್ರೀ ಹನುಮಂತನಿಗೆ ನೋಟಿಸ್ ಜಾರಿ ಮಾಡಿದೆ.

ಸಂಪಾದಕೀಯ ನಿಲುವು

ರೈಲ್ವೆ ಇಲಾಖೆಯು ಎಂದಾದರೂ ಚರ್ಚ್ ಅಥವಾ ಮಸೀದಿಗೆ ಈ ರೀತಿ ನೋಟಿಸ್ ಜಾರಿಗೊಳಿಸಿ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತದೆಯೇ ?