ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಆಯೋಜಿತ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಬಹುಮಾನವಾಗಿ ನೀಡಿರಿ !

ಶಾಲೆಗಳ ಮುಖ್ಯೋಪಾಧ್ಯಾಯ ಮತ್ತು ಮಹಾವಿದ್ಯಾಲಯಗಳ ಪ್ರಾಂಶುಪಾಲರಿಗೆ ಸವಿನಯ ವಿನಂತಿ !

೧. ವಾರ್ಷಿಕ ಸ್ನೇಹಸಮ್ಮೇಳನ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾಥಿಗಳಿಗೆ ವಿವಿಧ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ

ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಎಲ್ಲ ಶಾಲೆ ಮತ್ತು ಮಹಾ ವಿದ್ಯಾಲಯಗಳಲ್ಲಿ ವಾರ್ಷಿಕ ಸ್ನೇಹಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳ ಕೌಶಲ್ಯ ಮತ್ತು ಆಸಕ್ತಿಗನುಸಾರ ಗಾಯನ, ನೃತ್ಯ, ನಾಟ್ಯ, ಏಕಪಾತ್ರಾಭಿನಯ ಮುಂತಾದವುಗಳನ್ನು ಪ್ರದರ್ಶಿಸುತ್ತಾರೆ. ವಿದ್ಯಾರ್ಥಿಗಳಿಗೆ ಅವರ ಪ್ರಸ್ತುತೀಕರಣಕ್ಕನುಸಾರ ವಿವಿಧ ಬಹುಮಾನಗಳನ್ನು ನೀಡಲಾಗುತ್ತದೆ. ಅದೇ ರೀತಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿಯೂ ವರ್ಷವಿಡಿ ಭಾಷಣ, ಗಾಯನ, ವಾದನ, ಮೈದಾನದ ಆಟಗಳು ಮುಂತಾದ ವಿವಿಧ ಸ್ಪರ್ಧೆಗಳು ಆಗುತ್ತಿರುತ್ತವೆ. ಅದರಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನ ಹೀಗೆ ವಿವಿಧ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ.

೨. ವಿದ್ಯಾರ್ಥಿಗಳಿಗಾಗಿ ಉಪಯುಕ್ತವಾಗಿರುವ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳ ಹೆಸರುಗಳು

ವಿದ್ಯಾರ್ಥಿಗಳಿಗೆ ಸನಾತನವು ಪ್ರಕಟಿಸಿದ ‘ಬಾಲಸಂಸ್ಕಾರ’ ಈ ಗ್ರಂಥಮಾಲಿಕೆಯಲ್ಲಿನ, ಹಾಗೆಯೇ ಇತರ ಗ್ರಂಥಗಳನ್ನು ಬಹುಮಾನವೆಂದು ನೀಡಿದರೆ ಅವರ ಮನಸ್ಸಿನ ಮೇಲೆ ಸುಸಂಸ್ಕಾರಗಳ ಮಹತ್ವವನ್ನು ಬಿಂಬಿಸಲು ಸಹಾಯವಾಗುವುದು.

‘ವ್ಯವಹಾರಿಕ ಜೀವನದಲ್ಲಿ ಯಶಸ್ವಿಯಾಗುವುದೊಂದಿಗೆ ಗುಣಸಂಪನ್ನ ಮತ್ತು ಆದರ್ಶಪ್ರಾಯರಾಗಲು ಏನು ಮಾಡಬೇಕು ?’, ಈ ಕುರಿತು ಅಮೂಲ್ಯ ಮಾಹಿತಿಗಳನ್ನು ಈ ಗ್ರಂಥಗಳಲ್ಲಿ ಕೊಡಲಾಗಿದೆ. ವಿದ್ಯಾರ್ಥಿಗಳಿಗಾಗಿ ಆ ಗ್ರಂಥಗಳು ಮಾರ್ಗದರ್ಶಕವಾಗುವವು.

ಇಲ್ಲಿ ಕೊಟ್ಟಿರುವ ಪಟ್ಟಿಗನುಸಾರ ಗ್ರಂಥಗಳ ಬೇಡಿಕೆಯನ್ನು ಸ್ಥಳೀಯ ಸಾಧಕರ ಅಥವಾ ನಿಯತಕಾಲಿಕೆಗಳ ಮಾರಾಟಗಾರರ ಬಳಿ ಅಥವಾ ೯೩೨೨೩೧೫೩೧೭ ಕ್ರಮಾಂಕದಲ್ಲಿ ಸಂಪರ್ಕಿಸಬೇಕು. ಸನಾತನವು ಪ್ರಕಟಿಸಿದ ಇತರ ಗ್ರಂಥಗಳ ಬಗ್ಗೆ ತಿಳಿದುಕೊಳ್ಳಲು sanatanshop.com ಈ ಜಾಲತಾಣದಲ್ಲಿ ನೋಡಿರಿ !