ಯಾರಾದರೂ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ಓಟಿಪಿಗಳಂತಹ ಗೌಪ್ಯ ಮಾಹಿತಿಯನ್ನು ಕೇಳಿದರೆ ವಂಚನೆಗೊಳಗಾಗದಿರಲು ಅದರತ್ತ ದುರ್ಲಕ್ಷಿಸಿ !

ಸಾಧಕರಿಗೆ ಸೂಚನೆ ಮತ್ತು ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಇತ್ತೀಚೆಗೆ ಕೊರೋನಾ ಲಸಿಕೆಯ ನೋಂದಣಿಗಾಗಿ ಆಧಾರ ಕಾರ್ಡ್ ಕ್ರಮಾಂಕ ಅಥವಾ ಸಂಚಾರವಾಣಿಯ ಮೇಲೆ ‘ಓಟಿಪಿ’ (ವನ್ ಟೈಮ್ ಪಾಸವರ್ಡ್) ಕಳುಹಿಸಿ, ಅದನ್ನು ಕೇಳುತ್ತಿದ್ದಾರೆ. ಈ ರೀತಿ ನಾಗರಿಕರನ್ನು ಮೋಸಗೊಳಿಸುವ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿಂದೆಯೂ ಆಯಾ ಸಮಯಕ್ಕೆ ಎದುರಾಗುವ ಸಾಮಾಜಿಕ ಸಮಸ್ಯೆ, ನಾಗರಿಕರ ಅಜ್ಞಾನ ಮತ್ತು ಮುಗ್ಧತೆ ಇತ್ಯಾದಿ ಕಾರಣಗಳಿಂದ ಸಮಾಜದ ದುಷ್ಟಶಕ್ತಿಗಳು ಜನರನ್ನು ಲೂಟಿ ಮಾಡುತ್ತಿರುವುದು ಕಂಡು ಬಂದಿದೆ. ಇದೇ ರೀತಿ ಮುಂದೆ ತಿಳಿಸಿರುವ ಕೆಲವು ಕಾರಣಗಳಿಗಾಗಿ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ‘ಓಟಿಪಿ’ ಕೇಳುವುದು ಅಥವಾ ಕಳುಹಿಸಿದ ಲಿಂಕ್ ‘ಕ್ಲಿಕ್’ ಮಾಡಲು ಹೇಳಿ, ಈ ಹಿಂದೆಯೂ ನಾಗರಿಕರಿಗೆ ಮೋಸ ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ.

೧. ‘ಕೌನ ಬನೇಗಾ ಕರೋಡಪತಿ’ಯಲ್ಲಿ ಬಹುಮಾನ ಬಂದಿದೆ.

೨. ‘ಆನ್‌ಲೈನ್’ ಲಾಟರಿ ಗೆದ್ದಿದ್ದೀರಿ.

೩. ಪತಿ-ಪತ್ನಿ ಅಥವಾ ಕುಟುಂಬದ ಸಮೇತ ಪ್ರಯಾಣಕ್ಕೆ (‘ಟ್ರಾವಲ್ ಪ್ಯಾಕೇಜ್’ಗಾಗಿ) ನೀವು ಆಯ್ಕೆಯಾಗಿದ್ದೀರಿ.

೪. ನಿಮಗೆ ವಿದೇಶ ಪ್ರಯಾಣದ ವಿಮಾನದ ಟಿಕೀಟು ಸಿಕ್ಕಿದೆ.

೫. ಯಾವುದಾದರೂ ಕಂಪನಿಯ ಭಾಗ್ಯಶಾಲಿ ಗ್ರಾಹಕರೆಂದು (ಲಕಿ ಕಸ್ಟಮರ್) ಆಯ್ಕೆಯಾಗಿದ್ದೀರಿ.

೬. ಅಬಕಾರಿ ಇಲಾಖೆಯಿಂದ (‘ಫಾರೆನ್ ಎಕ್ಸಚೇಂಜ’ನಿಂದ) ಬೆಲೆಬಾಳುವ ಸಾಮಗ್ರಿಯನ್ನು ಬಿಡಿಸಿಕೊಳ್ಳಬೇಕಾಗಿದೆ.

೭. ಚತುಷ್ಚಕ್ರ ವಾಹನ, ತಂಪುಪೆಟ್ಟಿಗೆ (ಫ್ರಿಡ್ಜ್), ಎಲ್.ಇ.ಡಿ. ಟಿ.ವಿ. ಇತ್ಯಾದಿ ಬೆಲೆಬಾಳುವ ಸಾಮಗ್ರಿಗಳ ಬಹುಮಾನವನ್ನು ಗೆದ್ದಿದ್ದೀರಿ.

೮. ಸಂಚಾರವಾಣಿಯ ‘ಸಿಮ್‌ಕಾರ್ಡ’ನ್ನು ಇತರ ಕಂಪನಿಗಳಿಗೆ ಉಚಿತವಾಗಿ ಬದಲಾಯಿಸಿ (ಪೋರ್ಟ್) ಕೊಡಲಾಗುವುದು.

೯. ಕಡಿಮೆ ಬಡ್ಡಿದರದಲ್ಲಿ ಸಾಲ ಮಂಜೂರಾತಿಯಾಗಿದೆ.

೧೦. ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಲಾಗಿದೆ.

೧೧. ನಿಮ್ಮ ಖಾತೆಯ ‘ಪಿನ್’ ಕ್ರಮಾಂಕವನ್ನು ಬದಲಾಯಿಸಬೇಕಾಗಿದೆ.

ಈ ರೀತಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಮಧುರವಾದ ಮಾತಿನಲ್ಲಿಯೇ ನಾಗರಿಕರನ್ನು ಮರಳು ಮಾಡುತ್ತಾರೆ. ಈ ರೀತಿ ಅಜಾಗರೂಕತೆಯಿಂದ ಮೋಸಗೊಳಿಸುವ ಜನರ ಮರಳುಮಾತಿಗೆ ಅಥವಾ ಬಹುಮಾನದ ಆಮಿಷಗಳಿಗೆ ಬಲಿಯಾಗಿ ನಾಗರಿಕರು ಮೋಸಕ್ಕೊಳಗಾಗುತ್ತಾರೆ.

ವಾಸ್ತವದಲ್ಲಿ ಯಾವುದೇ ಕಾರಣಕ್ಕೂ ನಾಗರಿಕರಿಂದ ಸಂಚಾರವಾಣಿಯಲ್ಲಿ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ಓಟಿಪಿಯನ್ನು ಕೇಳುವುದಿಲ್ಲವೆಂದು ಸರಕಾರ-ಆಡಳಿತ ಸಂಸ್ಥೆಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದವರು ಆಗಾಗ ಸ್ಪಷ್ಟಪಡಿಸಿದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ಯಾರಾದರೂ ನಿಮ್ಮ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್’ ಪಿನ್, ಒಟಿಪಿಗಳಂತಹ ಗೌಪ್ಯ ಮಾಹಿತಿಯನ್ನು ಕೇಳಿದರೆ ಅಥವಾ ಬಹುಮಾನ ಬಂದಿದೆಯೆಂದು ತಿಳಿಸಿ ‘ಲಿಂಕ್’ ಕಳುಹಿಸಿ ಅದನ್ನು ಕ್ಲಿಕ್ ಮಾಡಲು ಹೇಳಿದರೆ, ತಕ್ಷಣವೇ ಅದನ್ನು ನಿರ್ಲಕ್ಷಿಸಬೇಕು ಹಾಗೂ ಈ ರೀತಿ ಮೋಸ ಮಾಡುವವರ ಕರೆಗಳಿಗೆ ಸ್ಪಂದಿಸದೇ ನಿಮ್ಮ ಆರ್ಥಿಕ ಹಾನಿಯಾಗುವುದನ್ನು ತಡೆಯಬೇಕು.

ಈ ರೀತಿ ಮೋಸದ ಪ್ರಕರಣಗಳ ದೂರು ದಾಖಲಿಸಿದ ಬಳಿಕ ಅದರ ತನಿಖೆ ನಡೆದರೂ ಯಾವುದೇ ಪ್ರಯೋಜನವಾಗುವುದಿಲ್ಲ. ತಪ್ಪಿತಸ್ಥರು ಸಿಗುವ ಮತ್ತು ಅವರಿಗೆ ಶಿಕ್ಷೆಯಾಗುವ ಪ್ರಮಾಣವು ಬಹಳ ಕಡಿಮೆಯಿದೆ ಅಥವಾ ಇಲ್ಲವೆಂದೇ ಹೇಳಬಹುದು. ‘Prevension is better than cure’ ಎನ್ನುವಂತೆ ಸಮಯ ಇರುವಾಗಲೇ ಜಾಗರೂಕರಾಗಿ ಸಂಭಾವ್ಯ ಹಾನಿ ತಡೆಯಬೇಕು. ಅದೇ ರೀತಿ ಕುಟುಂಬದವರು, ಸ್ನೇಹಿತರನ್ನು ಎಚ್ಚರಿಸಬೇಕು.