ನಟ ಆಮೀರ್ ಖಾನ್ ‘ಲವ್ ಜಿಹಾದ್’ ನ ‘ಬ್ರ್ಯಾಂಡ್ ಅಂಬಾಸಿಡರ್’ ! – ಸಚಿವ ನಿತೇಶ್ ರಾಣೆ, ಮಹಾರಾಷ್ಟ್ರ

ಅವರ ಚಲನಚಿತ್ರಗಳನ್ನು ಬಹಿಷ್ಕರಿಸಿ

(‘ಬ್ರ್ಯಾಂಡ್ ಅಂಬಾಸಿಡರ್’ ಎಂದರೆ ಯಾವುದೇ ಸಂಸ್ಥೆ ಅಥವಾ ಉತ್ಪನ್ನದ ಪ್ರಚಾರಕ್ಕಾಗಿ ಆಯ್ಕೆ ಮಾಡಲಾದ ವ್ಯಕ್ತಿ)

ಎಡಭಾಗದಲ್ಲಿ ನಿತೇಶ್ ರಾಣೆ.

ಅಹಲ್ಯಾನಗರ (ಮಹಾರಾಷ್ಟ್ರ) – ನಟ ಆಮೀರ್ ಖಾನ್ ಅವರು ‘ಲವ್ ಜಿಹಾದ್’ ನ ‘ಬ್ರ್ಯಾಂಡ್ ಅಂಬಾಸಿಡರ್’ ಆಗಿದ್ದಾರೆ. (ನಟ ಆಮೀರ್ ಖಾನ್ ಅವರು ಇತ್ತೀಚೆಗೆ ತಮ್ಮ 61ನೇ ವಯಸ್ಸಿನಲ್ಲಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಮೂರನೇ ಮದುವೆಯಾಗಿದ್ದಾರೆ. ಈ ಹಿಂದಿನ ಇಬ್ಬರು ಪತ್ನಿಯರಿಗೆ ಅವರು ವಿಚ್ಛೇದನ ನೀಡಿದ್ದಾರೆ. ಅವರ ಮೂವರೂ ಪತ್ನಿಯರು ಹಿಂದೂಗಳಾಗಿದ್ದಾರೆ.) ಹಿಂದೂ ಸಮಾಜದ ಯುವಕರು ಆಮೀರ್ ಖಾನ್ ಅವರ ಚಲನಚಿತ್ರಗಳನ್ನು ನೋಡಬಾರದು ಎಂದು ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸರಕಾರದ ಸಚಿವ ನಿತೇಶ್ ರಾಣೆ ಕರೆ ನೀಡಿದ್ದಾರೆ. ಅವರು ಶಿರಡಿಗೆ ಸಾಯಿಬಾಬಾರ ದರ್ಶನಕ್ಕಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಮೇಲಿನಂತೆ ಹೇಳಿದರು.

ಅವರು,

1. ಶ್ರೀರಾಮ ಮಂದಿರದ ದಾನದ ಕಳ್ಳತನದ ಬಗ್ಗೆ ಮಾತನಾಡುವವರು ಹಜ್ ಹಗರಣದ ಬಗ್ಗೆ ಏಕೆ ಸುಮ್ಮನಿದ್ದಾರೆ? ಇತರ ಧಾರ್ಮಿಕ ಸಂಸ್ಥೆಗಳಲ್ಲಿ ನಡೆಯುವ ಹಗರಣಗಳ ಬಗ್ಗೆ ಅವರು ಏಕೆ ಮಾತನಾಡುವುದಿಲ್ಲ? ಶ್ರೀರಾಮ ಮಂದಿರದ ವಿಷಯದ ಕುರಿತು ರಾಜಕೀಯ ಮಾಡುವವರು ಸಾರ್ವಜನಿಕರ ಮುಂದೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.

2. ಹಿಂದೂ ಯುವಕರು ಯಾರನ್ನು ತಮ್ಮ ಆದರ್ಶ ಎಂದು ಪರಿಗಣಿಸುತ್ತಿದ್ದಾರೆ? ಅವರು ಯಾರ ಚಲನಚಿತ್ರಗಳನ್ನು ನೋಡಬೇಕು ಮತ್ತು ಯಾರಿಗೆ ಎಷ್ಟು ಬೆಂಬಲ ನೀಡಬೇಕು ಎಂಬುದನ್ನು ಜಾಗರೂಕತೆಯಿಂದ ನಿರ್ಧರಿಸಬೇಕು.

ಸಂಪಾದಕೀಯ ನಿಲುವು

ಹಿಂದೂ ಮಹಿಳೆಯರ ಬ್ರೈನ್‌ವಾಶ್‌ ಮಾಡಿ ಅವರ ಜೀವನವನ್ನು ನಾಶಪಡಿಸುವ 'ಲವ್ ಜಿಹಾದ್' ಕುರಿತು ಇತರ ನಟ-ನಟಿಯರು ಯಾವಾಗಲೂ ಏಕೆ ಮೌನವಾಗಿರುತ್ತಾರೆ?, ಎಂಬ ಪ್ರಶ್ನೆಯನ್ನು ಅವರ ಅಭಿಮಾನಿಗಳು ಕೇಳಬೇಕು!