ಈ ಹಿಂದೆ ಪ್ರಧಾನಿ ಮೋದಿಯವರ ತಾಯಿಯ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದರು !

ಕರ್ಣಾವತಿ – ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಿರಾಬೇನ ಮೋದಿ ಇವರ ವಿರುದ್ಧ ಆವಮಾನಕರ ಹೇಳಿಕೆ ನೀಡಿರುವ ಕಾಂಗ್ರೆಸ್ಸಿನ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ನಿಯಂತ್ರಕ ಆಫಜಲ್ ಲಖಾನಿ ಇವನನ್ನು ಜೈಲಿಗೆ ಕಳುಹಿಸಲಾಗಿತ್ತು. ಈಗ ಅವನ ವಿರುದ್ಧ ಹೊಸ ಪ್ರಕರಣ ಬೆಳಕಿಗೆ ಬಂದಿದೆ, ಫೇಸ್ ಬುಕ್ ನಲ್ಲಿ `ಜಿಗರ್ ಟಕ್ಕರ್’ ಈ ಹಿಂದೂ ಹೆಸರಿನ ಸುಳ್ಳು ಖಾತೆ ತೆರೆದು ಹಿಂದೂ ಧರ್ಮ, ಬ್ರಾಹ್ಮಣ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಟೀಕಿಸುತ್ತಿರುವುದು ಬಹಿರಂಗವಾಗಿದೆ. ಇದರ ವಿರುದ್ಧ ಹಿಂದೂ ಸೇನೆಯ ಕಾರ್ಯಕರ್ತರು ಜಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪೊಲೀಸರು ಆಫಜಲ್ ಇವನ ವಿರುದ್ಧ ಅಪರಾಧ ದಾಖಲಿಸಿಕೊಂಡಿದ್ದಾರೆ. (ಇದರ ಅರ್ಥ ದೂರು ನೀಡದಿದ್ದರೆ, ಅಪರಾಧ ದಾಖಲಿಸಲಾಗುತ್ತಿರಲಿಲ್ಲವೆ ? – ಸಂಪಾದಕರು) ಆಫಜಲ್ ನು `ಜಿಗರ ಟಕ್ಕರ್’ ಈ ಹೆಸರಿನ ಖಾತೆಯಿಂದ ಪ್ರಸಾರ ಮಾಡಿರುವ ಲೇಖನದಲ್ಲಿ `ಸಂಘ ಇದು ಭಾರತದಲ್ಲಿ ಕಾರ್ಯನಿರತವಾಗಿರುವ ಏಕೈಕ ಭಯೋತ್ಪಾದಕ ಸಂಘಟನೆಯಾಗಿದೆ’, `ನಥುರಾಮ ಗೋಡ್ಸೆ ಇವರು ಭಾರತದಲ್ಲಿನ ಮೊದಲ ಭಯೋತ್ಪಾದಕನಾಗಿದ್ದಾರೆ’, `ಬ್ರಾಹ್ಮಣ ಸಮಾಜ ಇದು ಮುಸಲ್ಮಾನ್, ದಲಿತರು, ರಜಪುತರ ವಿರುದ್ಧ ಕಾರ್ಯ ಮಾಡುತ್ತದೆ’, ಈ ರೀತಿಯ ಹೇಳಿಕೆ ಪ್ರಸಾರ ಮಾಡಿದ್ದನು.
FIR filed against Congress’ Afzal Lakhani for derogatory posts on Hindus, RSS; was earlier booked for remarks against PM Modi and his motherhttps://t.co/AQqJyreER6
— OpIndia.com (@OpIndia_com) January 7, 2023
| ಈಗ ಮತಾಂಧರು ಹಿಂದೂ ಹೆಸರು ಬಳಸಿಕೊಂಡು ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ವಿಚಾರಗಳು ಪ್ರಸಾರ ಮಾಡುವುದು ಕಾಣುತ್ತಿದೆ. ಹೀಗೆ ಮಾಡಿ ಅವರು ಹಿಂದುಗಳಲ್ಲಿ ಬಿರುಕು ಮೂಡಿಸುವುದು ಮತ್ತು ಅವರಲ್ಲಿ ಭ್ರಮೆಯನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. `ಲವ್ ಜಿಹಾದ್’ನ ಘಟನೆಗಳಲ್ಲಿ ಮತಾಂಧರು ಹಿಂದೂ ಹೆಸರು ಇಟ್ಟುಕೊಂಡು ಹಿಂದೂ ಯುವತಿಯರಿಗೆ ಮೋಸ ಮಾಡುತ್ತಾರೆ. ಹಿಂದೂ ಹೆಸರು ಬಳಸಿ ರಾಷ್ಟ್ರ ವಿರೋಧಿ ಮತ್ತು ಹಿಂದೂ ವಿರೋಧ ಚಟುವಟಿಕೆ ನಡೆಸುವ ಮತಾಂಧರ ಷಡ್ಯಂತ್ರವಾಗಿದ್ದು ಅದನ್ನು ತಡೆಯಲು ಸರಕಾರ ಕ್ರಮ ಕೈಗೊಳ್ಳಬೇಕು !- ಸಂಪಾದಕರು |
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ಭಯೋತ್ಪಾದಕರ ಬೆಂಬಲಿಗರಿಗೆ ಸಿಂಧೂ ನದಿ ನೀರು ಸಿಗುವುದಿಲ್ಲ! – ರಕ್ಷಣಾ ಸಚಿವ
ಬಳ್ಳಾರಿ : ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುತ್ತಿರುವುದು ಪತ್ತೆ!