|

ಮೇಲುಕೋಟೆ – ಇಲ್ಲಿಯ ಐತಿಹಾಸಿಕ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನದ ಸಹಿತ ಅನೇಕ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ ಕಾಲದಿಂದ ಸಂಜೆ ನಡೆಯುವ ಆರತಿಗೆ `ಸಲಾಂ ಆರತಿ’ ಎನ್ನಲಾಗುತ್ತಿತ್ತು. ಈ ಆರತಿಯ ಹೆಸರು ಬದಲಾಯಿಸಲು ಹಿಂದುತ್ವನಿಷ್ಠ ಸಂಘಟನೆಗಳಿಂದ ಒತ್ತಾಯದ ನಂತರ ಅದನ್ನು `ಸಂಧ್ಯಾ ಆರತಿ’ ಎಂದು ಹೇಳಲಾಗುವುದು. ರಾಜ್ಯದಲ್ಲಿನ ಮುಜರಾಯಿ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿದೆ. ಕಳೆದ ೬ ತಿಂಗಳಿಂದ ಈ ವಿಷಯ ಇಲಾಖೆಯಲ್ಲಿ ಬಾಕಿ ಉಳಿದಿತ್ತು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಂದ ಒಪ್ಪಿಗೆ ಸಿಗುವುದು ಬಾಕಿ ಇದೆ. ಟಿಪ್ಪು ಸುಲ್ತಾನಿನ ಹೆಸರಿನಲ್ಲಿ ಮಾಡಲಾಗುವ ವಿಧಿ ರದ್ದುಪಡಿಸುವುದಕ್ಕಾಗಿ ಕೂಡ ಒತ್ತಾಯಿಸಲಾಗಿತ್ತು. ಟಿಪ್ಪು ಸುಲ್ತಾನನು ಈ ದೇವಸ್ಥಾನಕ್ಕೆ ನೀಡಿರುವ ಭೇಟಿಯಿಂದಾಗಿ ಆರತಿಗೆ `ಸಲಾಂ ಆರತಿ’ ಎಂದು ಹೆಸರು ನೀಡಲಾಗಿತ್ತೆಂದು ಹೇಳಲಾಗುತ್ತಿದೆ.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಲ್ಲಿ “ದೀವಟಿಗೆ ಆರತಿ ಸೇವೆ” ಎಂದಿನಂತೆ ಮುಂದುವರಿಯಲಿದೆ.
ನಮ್ಮ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಹಲವು ದೇವಾಲಯಗಳಲ್ಲಿ ರೂಢಿಯಲ್ಲಿರುವ “ದೀವಟಿಗೆ ಸಲಾಂ, ಸಲಾಂ ಆರತಿ, ಮತ್ತು ಸಲಾಂ ಮಂಗಳಾರತಿ” ಪೂಜಾಕಾರ್ಯಗಳನ್ನು, pic.twitter.com/iHm6B21w5T
— Shashikala Jolle (@ShashikalaJolle) December 10, 2022
೧. ಕರ್ನಾಟಕ ಧಾರ್ಮಿಕ ಪರಿಷತ್ತಿನ ಸದಸ್ಯ ಕಶೆಕೊಡಿ ಸೂರ್ಯನಾರಾಯಣ ಭಟ್ಟ ಇವರು, `ಸಲಾಂ’ ಈ ಪದ ಟಿಪ್ಪು ನೀಡಿದ್ದನು ಅದು ನಮ್ಮ ಪದ ಅಲ್ಲ ಎಂದು ಹೇಳಿದರು.
೨. ಭಟ್ಟ ಇವರ ಅಭಿಪ್ರಾಯದ ಪ್ರಕಾರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರಿನಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಇತರ ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ `ಸಲಾಂ ಆರತಿ’ ನಡೆಯುತ್ತದೆ. ಮಂಡ್ಯ ಜಿಲ್ಲಾ ಆಡಳಿತದಿಂದ ಹೆಸರು ಬದಲಾಯಿಸುವಂತೆ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ವಿಭಾಗ ಪ್ರಸ್ತಾಪ ಪಡಿಸಿದ್ದರು.
ಹಿಂದೆ ಏನು ಪ್ರಚಲಿತವಾಗಿತ್ತು, ಅದನ್ನು ನಾವು ಮತ್ತೆ ತಂದಿದ್ದೇವೆ ! – ಸಚಿವ ಶಶಿಕಲಾ ಜೊಲ್ಲೆ
ಈ ವಿಷಯವಾಗಿ ಧಾರ್ಮಿಕ ದತ್ತಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಇವರು, ಈ ಫಾರಸಿ ಹೆಸರು ಬದಲಾಯಿಸಿ `ಮಂಗಳಾರತಿ ನಮಸ್ಕಾರ’ ಅಥವಾ `ಆರತಿ ನಮಸ್ಕಾರ’ ಈ ರೀತಿಯ ಪಾರಂಪರಿಕ ಸಂಸ್ಕೃತ ಹೆಸರು ಶಾಶ್ವತವಾಗಿಡುವ ಪ್ರಸ್ತಾವ ಮತ್ತು ಮನವಿಗಳು ಇದ್ದವು. ಇತಿಹಾಸ ನೋಡಿದರೆ ಹಿಂದೆ ಏನು ಪ್ರಚಲಿತವಾಗಿತ್ತು ಅದನ್ನೇ ನಾವು ಈಗ ಮತ್ತೆ ತಂದಿದ್ದೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವುಈ ರೀತಿಯಲ್ಲಿ ಹಿಂದೂ ಸಂಘಟನೆಗಳು ಏಕೆ ಒತ್ತಾಯ ಮಾಡಬೇಕಾಯಿತು ? ಸರಕಾರವು ತಾವಾಗಿಯೇ ಅದರಲ್ಲಿ ಬದಲಾವಣೆ ಮಾಡುವುದು ಅಪೇಕ್ಷಿತವಾಗಿತ್ತು, ಎಂದು ಹಿಂದುಗಳಿಗೆ ಅನಿಸುತ್ತದೆ ! |
ಜೆಜುರಿ(ಪುಣೆ): ಬೆಲಸರದಲ್ಲಿ ಛತ್ರಪತಿ ಸರದಾರರ ಐತಿಹಾಸಿಕ ಭೂಮಿಯ ಮೇಲೆ ಮತಾಂಧರ ಅತಿಕ್ರಮಣ!
ಶಿರಡಿ: ಶ್ರೀ ಸಾಯಿಬಾಬಾ ಮಂದಿರದಲ್ಲಿ ಫಂಗಸ್ ಪೇಡ ಮಾರಾಟ!
ಮುಂಬಯಿ: ಹಣ ಪಡೆದು ಬಾಂಗ್ಲಾದೇಶಿ ವಲಸಿಗರಿಗೆ ರಕ್ಷಣೆ!
ಸುಲಿಗೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸಬ್ಯಸಾಚಿ ದತ್ತಾ ಬಂಧನ
ಮೇ ತಿಂಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ೮೦ ಶೇಕಡಾ ಹೆಚ್ಚಳ!
ಬಂಗಾಳ: ಭಾಜಪ ಮಹಿಳಾ ಕಾರ್ಯಕರ್ತೆಯ ಕೊಲೆ ಪ್ರಕರಣ; ಟಿಎಂಸಿ ನಾಯಕ ಅಬ್ದುಲ್ ಅಲೀಮ್ ಬಂಧನ