ಮೇರಠನ ದೇವಸ್ಥಾನವನ್ನು ಧ್ವಂಸಗೈದ ಆರೋಪಿಯ ಬಂಧನ

  • ದೇವತೆಗಳ ಮೂರ್ತಿಯ ನಾಶ

  • ಹಿಂದುತ್ವನಿಷ್ಠ ಸಂಘಟನೆಯಿಂದ ಪ್ರತಿಭಟನೆ

ಮೇರಠ (ಉತ್ತರಪ್ರದೇಶ) – ಇಲ್ಲಿಯ ಶ್ರೀ ಶನಿದೇವರ ದೇವಸ್ಥಾನದಲ್ಲಿ ನುಗ್ಗಿ ದೇವಸ್ಥಾನದಲ್ಲಿ ವಿದ್ವಾಂಸಕೃತ್ಯ ಮಾಡಿ ಮೂರ್ತಿಗಳನ್ನು ಭಗ್ನಗೊಳಿಸಿದ ಆರೋಪಿಯನ್ನು ಪೊಲೀಸರು ಬಂದಿಸಿದ್ದರೆ. ನವಂಬರ್ ೨೩ ರಂದು ಈ ಘಟನೆ ನಡೆದಿದೆ. ಪೊಲೀಸರು ಅವನನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ದೇವಸ್ಥಾನದ ಅರ್ಚಕರು ನವಂಬರ್ ೨೩ ರಂದು ಬೆಳಿಗ್ಗೆ ೬ ಗಂಟೆಗೆ ದೇವಸ್ಥಾನಕ್ಕೆ ಹೋದಾಗ ಅಲ್ಲಿಯ ವಸ್ತುಗಳು ಅಸ್ತಾವ್ಯಸ್ತವಾಗಿ ಬಿದ್ದಿರುವುದು ಹಾಗೂ ದೇವಸ್ಥಾನದಲ್ಲಿನ ಶ್ರೀ ಶನಿ ದೇವರ ಸಹಿತ ಶ್ರೀ ಗಣಪತಿ ಹಾಗೂ ಇತರ ದೇವತೆಯ ಮೂರ್ತಿಗಳು ಭಗ್ನಗೊಳಿಸಿರುವುದು ಕಂಡು ಬಂದಿದೆ. ಈ ಮೂರ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡ ನಂತರ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ದೇವಸ್ಥಾನದ ಹತ್ತಿರ ಸೇರಿ ಎಲ್ಲರೂ ಆರೋಪಿಯನ್ನು ಬಂಧಿಸಲು ಒತ್ತಾಯಿಸಿದರು. ಈ ಘಟನೆಯ ಮಾಹಿತಿ ದೊರೆಯುತ್ತಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರಿಗೆ ಶಾಂತಿ ಕಾಪಾಡಲು ಕರೆ ನೀಡಿದರು.

ಆರೋಪಿಯು ನಶೆಯಲ್ಲಿದ್ದಾಗ ಈ ಕೃತ್ಯ ಮಾಡಿದ್ದಾನೆ!’ (ಅಂತೆ) – ಪೊಲೀಸ ಅಧಿಕಾರಿ

ಇದರ ನಂತರ ಮೇರಠದ ಪೋಲಿಸ್ ಅಧಿಕಾರಿ ಪಿಯೂಷ್ ಸಿಂಹ ಇವರು ಈ ಪ್ರಕರಣದಲ್ಲಿ ಒಬ್ಬ ಸಂದೇಹಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಹಿಂದುತ್ವನಿಷ್ಠರಿಗೆ ಮಾಹಿತಿ ನೀಡುತ್ತಾ ಅವನು ಈ ಕೃತ್ಯ ನಶೆಯಲ್ಲಿದ್ದು ಮಾಡಿದ್ದಾನೆ ಎಂದು ಹೇಳಿದರು. (`ನಶೆಯಲ್ಲಿ ಕೇವಲ ಹಿಂದುಗಳ ದೇವಸ್ಥಾನದ ವಿದ್ವಾಂಸ ಹೇಗೆ ನಡೆಯುತ್ತದೆ ?’, ಹೇಗೆ ಎಂದು ಪೊಲೀಸರು ಹೇಳಬಹುದೇ ? ಪೊಲೀಸರು ಹೀಗೆ ಹೇಳಿ ಘಟನೆಯ ಗಾಂಭೀರ್ಯ ಕಡಿಮೆ ಮಾಡುತ್ತಿದ್ದಾರೆ, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನು ಇಲ್ಲ ! – ಸಂಪಾದಕರು) ಆತನ ವಿರುದ್ಧ ದೂರು ದಾಖಲಿಸಿ ತನಖೆ ನಡೆಸಿ ದೇವಸ್ಥಾನದಲ್ಲಿ ಹೊಸ ಮೂರ್ತಿಗಳು ಸ್ಥಾಪಿಸುವ ಆಶ್ವಾಸನೆ ಕೂಡ ಸಿಂಹ ಅವರು ನೀಡಿದರು.

 

ಸಂಪಾದಕೀಯ ನಿಲುವು

  • ಎಂದಾದರು ಮಸೀದಿ ಅಥವಾ ಚರ್ಚಗಳಲ್ಲಿ ವಿದ್ವಾಂಸಕೃತ್ಯ ನಡೆದಿರುವ ಘಟನೆ ಘಟಿಸುತ್ತಿದೆಯೇ ? ಹಿಂದೂಗಳು ಸಂಘಟಿತರಾಗಿರದೆ ಇರುವುದರಿಂದ ಎಲ್ಲರೂ ಅವರ ಶ್ರದ್ಧಾ ಸ್ಥಳಗಳ ಮೇಲೆ ಆಘಾತ ಮಾಡುತ್ತಾರೆ ! ಇದು ಹಿಂದೂಗಳಿಗೆ ಲಚ್ಚಸ್ಪದವಾಗಿದೆ !
  • ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಘಟನೆ ಹೇಗೆ ನಡೆಯುತ್ತದೆ ? ಇಂತಹವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು.