ದೇವತೆಗಳ ಮತ್ತು ರಾಷ್ಟ್ರಪುರುಷರ ವಿಡಂಬನೆಯನ್ನು ತಡೆದು ಆದರ್ಶ ದೀಪಾವಳಿಯನ್ನು ಆಚರಿಸಿ !


೧. ದೀಪಾವಳಿಯಲ್ಲಿ ಪ್ರೇಮದ ಕೊಡುಕೊಳ್ಳುವಿಕೆ ಆಗಬೇಕೆಂದು ಸಂಬಂಧಿಕರು, ಮಿತ್ರರು  ಮುಂತಾದವರಿಗೆ ಸಿಹಿ ತಿಂಡಿಯ ಪೆಟ್ಟಿಗೆಗಳನ್ನು ಉಡುಗೊರೆಯೆಂದು ನೀಡಲಾಗುತ್ತದೆ. ಕೆಲವು ಸಲ ಪೆಟ್ಟಿಗೆಗಳ ಹೊದಿಕೆಗಳ ಮೇಲೆ ದೇವತೆಗಳ ಚಿತ್ರ ಅಥವಾ ಹೆಸರುಗಳಿರುತ್ತವೆ. ಬಹುತೇಕ ಸಂದರ್ಭದಲ್ಲಿ ಖಾಲಿಯಾದ ನಂತರ ಈ ಪೆಟ್ಟಿಗೆಗಳನ್ನು ಕಸದಲ್ಲಿ ಎಸೆಯಲಾಗುತ್ತದೆ.

೨. ದೀಪಾವಳಿಯ ಸಮಯದಲ್ಲಿ ಬಹಳಷ್ಟು ಪ್ರಮಾಣದಲ್ಲಿ ದೇವತೆಗಳ ಚಿತ್ರ ಅಥವಾ  ಹೆಸರುಗಳಿರುವ ಲಾಟರಿ ಟಿಕೇಟುಗಳ ಮಾರಾಟವಾಗುತ್ತಿರುತ್ತದೆ. ಹೆಚ್ಚಿನ ಜನರು ಲಾಟರಿ ಟಿಕೇಟುಗಳನ್ನು ಉಪಯೋಗಿಸಿದ ನಂತರ ಅವುಗಳನ್ನು ಮುದ್ದೆ ಮಾಡಿ ಕಸದಲ್ಲಿ ಎಸೆದುಬಿಡುತ್ತಾರೆ. ದೀಪಾವಳಿಯಲ್ಲಿ ಕೆಲವು ಲಾಟರಿ ಟಿಕೇಟ್‌ಗಳ ಮೇಲೆ ದೇವತೆಗಳ ಚಿತ್ರವನ್ನು ಮುದ್ರಿಸುತ್ತಾರೆ. ಇಂತಹ ಟಿಕೇಟುಗಳು ಕಾಣಿಸಿದರೆ ಅದನ್ನೂ ಕಸದಬುಟ್ಟಿಗೆ ಹಾಕದೆ ಅವುಗಳನ್ನು ಅಗ್ನಿಯಲ್ಲಿ ವಿಸರ್ಜನೆ ಮಾಡೋಣ !

ಅಧ್ಯಾತ್ಮಶಾಸ್ತ್ರಕ್ಕನುಸಾರ ದೇವತೆಯ ಚಿತ್ರ ಅಥವಾ ರೂಪವಿದ್ದಲ್ಲಿ ದೇವತೆಯ ತತ್ತ್ವವಿರುತ್ತದೆ, ಅಂದರೆ ಸೂಕ್ಷ್ಮದಲ್ಲಿ ದೇವತೆಯ ಅಸ್ತಿತ್ವವಿರುತ್ತದೆ. ಆದ್ದರಿಂದ ಮೇಲಿನ ರೀತಿಯಲ್ಲಿ ದೇವತೆಗಳ ವಿಡಂಬನೆಯೇ ಆಗುತ್ತದೆ. ಇದರಿಂದ ದೇವತೆಗಳ ಅವಕೃಪೆಯಾಗುತ್ತದೆ. ಇದೇ ರೀತಿಯಲ್ಲಿ ರಾಷ್ಟ್ರಪುರುಷರ ವಿಡಂಬನೆಯೂ ಆಗುತ್ತಿರುತ್ತದೆ. ಇದಕ್ಕಾಗಿ,

 * ಇಂತಹ ಅಧರ್ಮಾಚರಣೆಯನ್ನು ಸ್ವತಃ ತಡೆಗಟ್ಟಿ !

* ಇದರ ಬಗ್ಗೆ ಇತರರಿಗೂ ಪ್ರಬೋಧನೆ ಮಾಡಿ !

* ಉದ್ದೇಶಪೂರ್ವಕವಾಗಿ ವಿಡಂಬನೆ ಮಾಡುವವರನ್ನು ನಿಷೇಧಿಸಿ ಮತ್ತು ಅವರ ಉತ್ಪಾದನೆಗಳನ್ನು ಬಹಿಷ್ಕರಿಸಿ !

* ಧಾರ್ಮಿಕ ಭಾವನೆಯನ್ನು ನೋಯಿಸಿದ್ದಕ್ಕಾಗಿ ಆರಕ್ಷಕರಲ್ಲಿ ದೂರು ನೀಡಿ !

(ಆಧಾರ – ಸನಾತನದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)